ಕೊರಟಗೆರೆ: ಕಲಿಯುಗದ ಮಾಯೆಯಿಂದ ಧರ್ಮ ಬಿಟ್ಟು ಅಧರ್ಮದ ಕಡೆಗೆ ಜನರು ವಾಲಿದ್ದಾರೆ, ಮನುಷ್ಯ ಅಧಿಕಾರ ಹಣ ಆಸ್ತಿ ಎಂದು ಧರ್ಮವನ್ನೇ ಮರೆತು ಜೀವನ ಆಳು ಮಾಡಿಕೊಳ್ಳುತ್ತಿದ್ದಾನೆ. ಆಧುನಿಕ ಜನರಿಗೆ ಪ್ರತಿನಿತ್ಯ ಧರ್ಮದ ಬಗ್ಗೆ ಬೋಧನೆ ಮಾಡಿದರು ವ್ಯರ್ಥವೆನಿಸುತ್ತದೆ. ಎಂದು ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಾಜ್ಯದಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯಗಳು ನೆಲ ಕಚ್ಚಿದೆ. ಇದು ನಾವು ಹೇಳುತ್ತಿರುವದಿಲ್ಲ. ಈ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಎಂದು ಬಾಳೆಹೊನ್ನೂರು ರಂಭಾಪುರಿ ಡಾ: ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಆಯೋಜಿಸಿದ 19ನೇ ವಾರ್ಷಿಕೋತ್ಸವ ಜಗದ್ಗುರು ರೇಣುಕಾಚಾರ್ಯರ. ಬಸವೇಶ್ವರ ಜಯಂತಿ. ಉಚಿತ ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿ. ನಮ್ಮ ಸಕಾ೯ರದ ಬಳಿ ಅಭಿವೃದ್ಧಿಗೆ ಹಣವಿಲ್ಲ. ಎಲ್ಲಾ ಗ್ಯಾರೆಂಟಿ ಯೋಜನೆಗೆ ಹೋಗುತ್ತಿದೆ. ಈಗ ನೀಡಿರುವಂತಹ ಗ್ಯಾರೆಂಟಿಗಳ ಬಗ್ಗೆ ಇನ್ನೊಮ್ಮೆ ಗಂಭೀರವಾಗಿ ಆಲೋಚಿಸಬೇಕಿದೆ.

ಗ್ಯಾರೆಂಟಿಯಿಂದ ರಾಜ್ಯದ ಯಾವೊಂದು ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಬಾರದು ಎಂದು ಸರ್ಕಾರಕ್ಕೆ ತಿಳಿ ಹೇಳಿದರು ಬಡವರು ಮಾತ್ರ ಅಲ್ಲ ಶ್ರೀಮಂತರು ಸಾಮೂಹಿಕ ವಿವಾಹದಲ್ಲಿ ಮದುವೆಯಾಗಬೇಕು ವಿವಾಹಗಳು ಆಡಂಬರಿಗೆ. ಅದ್ದೂರಿಗೆ ಮತ್ತು ಪ್ರತಿಷ್ಠೆಗೆ ಸಾಕಷ್ಟು ದುಂಡು ವೆಚ್ಚಗಳಾಗುತ್ತಿದ್ದು. ಇದಕ್ಕಾಗಿ ಮಧ್ಯಮ ಮತ್ತು ಬಡವರ್ಗದ ಹೆಚ್ಚಿನ ತಂದೆ- ತಾಯಿಗಳು ಸಾಲಕ್ಕೆ ತುತ್ತಾಗಿ ತಮ್ಮ ಪ್ರಾಣ ಬಿಡುತ್ತಿರುವ ಘಟನೆ ಹೆಚ್ಚುತ್ತಿದೆ. ಮದುವೆಗಳು ಹಣ ಮತ್ತು ಸಮಯ ಉಳಿದಂತೆ ಆಗಬೇಕು ಎಂದು ಕರೆನೀಡಿದರು. ಸಿದ್ದರಬೆಟ್ಟ ಶ್ರೀ ಕ್ಷೇತ್ರ ಗುರುಗಳು ಎಲ್ಲಾ ಸಮುದಾಯದವರನ್ನು ಒಂದುಗೂಡಿಸಿ.
ಶ್ರೀ ಕ್ಷೇತ್ರದಲ್ಲಿ ಧರ್ಮ ಜಾಗೃತಿಯೊಂದಿಗೆ. ಸಾಮೂಹಿಕ ಕಾರ್ಯಗಳನ್ನು ಪ್ರಗತಿಯೊಂದಿಗೆ ಸಾಗುತ್ತಿದ್ದು. ಸಾಮೂಹಿಕ ವಿವಾಹ ಮೂಲಕ ದಾಂಪತ್ಯ ಜೀವನ ಪ್ರವೇಶಿಸುತ್ತಿರುವ ಆದರ್ಶ ದಂಪತಿಗಳು ನಿಜಕ್ಕೂ ಪುಣ್ಯವಂತರು. ಧರ್ಮದ ಜಾಗೃತಿಗಾಗಿ ನೆಲೆಯೂರಿದ ಶ್ರೀ ಮಠವು 19 ವರ್ಷ ಪೂರೈಸಿ ಮುಂದೆ ಸಾಗುತ್ತಿರುವ ಕೀರ್ತಿ ವೀರಭದ್ರ ಶಿವಾಚಾರ್ಯರಿಗೆ ಸಲ್ಲುತ್ತದೆ. ಶೈಕ್ಷಣಿಕ ವಿದ್ಯಾಲಯ ಪ್ರಗತಿ. ನಿತ್ಯ ದಾಸೋಹ. ಬಡ ವಿದ್ಯಾರ್ಥಿಗಳ ನಿಲಯವಿದ್ದು. ಇಷ್ಟೆಲ್ಲ ಸೇವೆಗಳಿಗೆ ಭಕ್ತರೇ ಮಠದ ನಿಜವಾದ ಶಕ್ತಿ. ಐವತ್ತು ವರ್ಷಗಳ ಕಾಲ ಸಾಧಿಸುವ ಪ್ರಗತಿಯನ್ನು ವೀರಾಭದ್ರ ಶಿವಾಚಾರ್ಯರು 19 ವರ್ಷದಲ್ಲಿ ಸಾಧಿಸಿದ್ದಾರೆ. ಮಠಕ್ಕೆ ಚಿರಸ್ತಿ ಇಲ್ಲದಿದ್ದರೂ ಭಕ್ತರನ್ನೇ ಆಸ್ತಿಯನ್ನಾಗಿ ಮಾಡಿಕೊಂಡು ಪ್ರಗತಿ ಸಾಧಿಸಿರುವುದಕ್ಕೆ ಜಗದ್ಗುರುಗಳಿಗೆ ಸಂತಸವಾಗಿದೆ. ಎಂದು ಹರ್ಷ ವ್ಯಕ್ತಪಡಿಸಿದರು.

ಗೃಹ ಸಚಿವ ಡಾ: ಜಿ. ಪರಮೇಶ್ವರ್ ಮಾತನಾಡಿ: ಸಿದ್ದರಬೆಟ್ಟ ಸಸ್ಯ ಸಂಜೀವಿನಿ ಕ್ಷೇತ್ರ ವೈಜ್ಞಾನಿಕ ಇತಿಹಾಸದಲ್ಲಿ ಅಚ್ಚಳಿದೆ ಉಳಿದಿದೆ. ಭಾರತ ಇತಿಹಾಸ ಪುಟದಲ್ಲಿ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ 850 ವರ್ಷ ಹಿಂದೆ ಅಣ್ಣ ಬಸವಣ್ಣ ಬಸವೇಶ್ವರರು ಇಡಿ ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದ್ದಾರೆ ಎಂದು ಹೇಳಿದರು. ಧಾರ್ಮಿಕ ಕಾರ್ಯಕ್ರಮ ಯಶಸ್ಸಿಗೆ ಲಿಂಗೈಕ್ಯ ಪರಮಪೂಜ್ಯ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಕೃಪ ಆಶೀರ್ವಾದ ಕೂಡ ಇದೆ. ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ ಕರ್ನಾಟಕದಲ್ಲಿ ಜನರ ಹೇಳಿಕಗಾಗಿ ಕಾಂಗ್ರೆಸ್ ಸರ್ಕಾರ ಸುಭದ್ರ ಆಡಳಿತ ನಡೆಸುತ್ತಿದೆ. ತಂದೆ -ತಾಯಿಯ ಅಲ್ಲೆ ಮಾಡುವುದು.

ರುದ್ರಶಮಕ್ಕೆ ಸೇರಿಸುವುದು ಧರ್ಮವಲ್ಲ. 19 ವರ್ಷಗಳ ಹಿಂದೆ ಏನು ಇಲ್ಲದ ಜಾಗದಲ್ಲಿ ಮಠಸ್ಥಾಪನೆ ಮಾಡಿದ ಮಠದ ಪೀಠಾಧೀಶ ಶ್ರೀ ವೀರಭದ್ರ ಶಿವಾಚಾರ್ಯರು ಭಕ್ತರ ಸಂಘಟನೆ ಮತ್ತು ಶ್ರಮದ ಫಲವಾಗಿ ನೊಂದವರ ಆಶಾಕಿರಣವಾಗಿದೆ. ಮಠದ ಶ್ರೀಗಳು ಅನಾಥ ಹಾಗೂ ಬಡ ಮಕ್ಕಳಿಗೆ ಅಕ್ಷರ ಮತ್ತು ಅನ್ನದಾಸೋಹ ನೀಡುತ್ತಿರುವುದು ಸ್ಮರಣೀಯ ಎಂದರು. 2050 ವರ್ಷಗಳ ಹಿಂದೆ ಇದ್ದ ಬುದ್ಧ ಹಾಗೂ 850 ವರ್ಷಗಳ ಹಿಂದೆ ಇದ್ದ ಬಸವಣ್ಣವರ ತತ್ವ ಆದರ್ಶ ಹಾಗೂ ಬದುಕು ಈಗಲೂ ಪ್ರಪಂಚದಲ್ಲಿ ಪ್ರಸಿದ್ಧವಾಗಿದ್ದು ಅದರಂತೆ ನಡೆದರೆ. ಮನುಷ್ಯರ ಬಾಳು ನೆಮ್ಮದಿ ಹಾಗೂ ಆದರ್ಶ ಪ್ರಾಯವಾಗಿ ಇರುತ್ತದೆ. ಇಂತಹ ಜನ ಜಾಗೃತಿ ಧರ್ಮ ಸಮಾರಂಭದಲ್ಲಿ ಹೆಚ್ಚಾಗಿ ಜನರು ಭಾಗವಹಿಸುವುದು ಉತ್ತಮ ಎಂದು ಹೇಳಿದರು.
ಎಲೆರಾಂಪುರ ಕುಂಚಿಟಿಗ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ: ರಾಜ್ಯದಲ್ಲಿ ರೈತರಿಗೆ ಹೆಣ್ಣುಗಳು ಸಿಗುತ್ತಿಲ್ಲ. ರೈತ ಎಂದರೆ ಪಾಲಕರು ನಿರ್ಲಕ್ಷಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಅತ್ತೆ-ಮಾವ ಇರದ ಮನೆ ಬೇಕು ಎನ್ನುವ ಧೋರಣೆ ಅನುಸರಿಸುತ್ತಿದ್ದಾರೆ. ಮನೆ ಮುರಿಯುವಂತಹ ಕೆಲಸಗಳು ನಿಲ್ಲಬೇಕು ಮನಸ್ಸುಗಳು ಕಟ್ಟುವಂತಹ ಕೆಲಸ ಆಗಬೇಕು ಎಂದು ಸೂಚಿಸಿದರು.

ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಮಾತನಾಡಿ: ವೀರಶೈವ ಮಠಗಳು ಎಲ್ಲಾ ಜಾತಿ-ಪಂತದವರೊಂದಿಗೆ ಕೂಡಿ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿವೆ. ಯಾವುದೇ ಮಠವಾದರೂ ಭಕ್ತರ ಸಂಖ್ಯೆ ಇಲ್ಲದಿದ್ದರೆ. ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಿದ್ದರ ಬೆಟ್ಟದಲ್ಲಿನ ಮಠವನ್ನು ವೀರಶೈವರು ಮಾತ್ರ ಬೆಂಬಲಿಸಿಲ್ಲ ಶೇ 70 ರಷ್ಟು ಇತರ ಜನಾಂಗದ ಸಹಕಾರದಿಂದ ಮಠ ಅಭಿವೃದ್ಧಿ ಗೊಂಡಿದೆ. ಯಾವುದೇ ಕಾರ್ಯಕ್ರಮ ಮಾಡಬೇಕಾದರೆ. ಸಾದಕ-ಬಾಧಕಗಳ ಚರ್ಚೆ ನಂತರ ಆಯೋಜಿಸಬೇಕು ಇದನ್ನು ಮಾಡಿದ್ದೆ ತುರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡರೆ ಏನಾಗುತ್ತದೆ. ಎನ್ನುವುದಕ್ಕೆ ರಾಜ್ಯದಲ್ಲಿ ನಾಲ್ಕು ದಿನಗಳ ಹಿಂದೆ ನಡೆದಂತಹ ಕಹಿ ಘಟನೆ ಸಾಕ್ಷಿಯಾಗಿದೆ. ಸರ್ಕಾರ ಯಾವುದೇ ಇರಲಿ ಸಾಧಕ- ಬಾಧಕಗಳ ಚಿಂತನೆಯೊಂದಿಗೆ ಎಲ್ಲವೂ ನಡೆಯಬೇಕು ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ಕುಟಿಕಿದರು.

ನಮ್ಮ ಬೆನ್ನೆಲುಬು ರೈತ ಅವನಿಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸುವುದು ಎಲ್ಲಾ ಸಕಾ೯ಗಳು ಬದ್ಧವಾಗಿರಬೇಕು. ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆ ಕಾಮಗಾರಿ ಯಾವುದೇ ಕಾರಣಕ್ಕೂ ನಿಲ್ಲಬಾರದು. ಗೊಂದಲಕ್ಕೆ ಯಾರೊಬ್ಬರೂ ಅವಕಾಶ ಮಾಡಕೊಡದೆ. ರೈತಪರ ಚಿಂತನೆಯೊಂದಿಗೆ ಕಾಮಗಾರಿ ನಡೆಸಬೇಕು. ತುಮಕೂರು ಜಿಲ್ಲೆಯಲ್ಲಿರುವ ದೇವರಾಯನದುರ್ಗಾ ಮತ್ತು ಸಿದ್ದರಾ ಬೆಟ್ಟ ಕ್ಷೇತ್ರಗಳನ್ನು ಪ್ರವಾಸಿಗರ ಕ್ಷೇತ್ರವನ್ನಾಗಿ ಪರಿವರ್ತಿಸಲು ಕೇಂದ್ರದಿಂದ ಎರಡು ಕ್ಷೇತ್ರಕ್ಕೂ 10 ಕೋಟಿ ರೂ ಬಿಡುಗಡೆ ಮಾಡಿಸಿದ್ದು. ಶೀಘ್ರವೇ ಅಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ವಹಿಸಲಿದ್ದಾರೆ ಎಂದು ಹೇಳುತ್ತಾ. ಈಗಾಗಲೇ ರಾಜ್ಯದಲ್ಲಿ ರಾಯದುರ್ಗ ರೈಲ್ವೆ ಹಳ್ಳಿಯ ಕಾಮಗಾರಿ ಪ್ರಗತಿಯಿಂದ ಸಾಗುತ್ತಿದ್ದು. 2027 ಕ್ಕೆ ಡಿಸೆಂಬರ್ ಗೆ ಪ್ರಧಾನ ಮಂತ್ರಿ ಯೊಂದಿಗೆ ರೈಲು ಉದ್ಘಾಟಿಸುವುದು ಪಕ್ಕ ಇದರಲ್ಲಿ ಯಾವುದೇ ಅನುಮಾನ ಬೇಡ ಇದನ್ನು ನಾನು ಮಾಡಿಯೇ ತೀರುತ್ತೇನೆ. ಎಂದು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದರು.

ಯಡಿಯೂರು ಶ್ರೀ ಕ್ಷೇತ್ರದ ರೇಣುಕಾ ಶಿವಾಚಾರ್ಯ. ಶ್ರೀ ತಿಪಟೂರಿನ ಷಡಕ್ಷರಿ ಶ್ರೀ ರುದ್ರಮುನಿ ಸ್ವಾಮೀಜಿ. ಬೆಳ್ಳಾವಿಯ ಕಾದಮಠದ ಕಾರ ವೀರಬಸವ ಸ್ವಾಮೀಜಿ. ಸೌದತ್ತಿಯ ನರಗಲ್ನ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ. ರಾಜಪುರದ ಶ್ರೀ ರಾಜೇಶ್ವರಿ ಶಿವಾಚಾರ್ಯ ಸ್ವಾಮೀಜಿ. ಕಂಬಾಳು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರದ ಜ್ಯೋತಿ ಗಣೇಶ್ . ಆಂಧ್ರಪ್ರದೇಶದ ತಿಪ್ಪೇಸ್ವಾಮಿ. ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಡಾ: ಪರಮೇಶ್. ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಚ್.ಪಿ. ನಿಲೇಶ್ ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಟಿ. ಎನ್. ರುದ್ರೇಶ್. ಅ.ಭಾ.ವೀ. ಲಿ. ಮ. ಯುವ ಜಿಲ್ಲಾಧ್ಯಕ್ಷ ದರ್ಶನ್. ತಾಲೂಕು ಅಧ್ಯಕ್ಷ ಭದ್ರಯ್ಯ. ಉಪಾಧ್ಯಕ್ಷ ಕೆ.ಸಿ. ಶಿವಕುಮಾರ್. ಜಿಲ್ಲಾಧಿಕಾರಿ ಶುಭ ಕಲ್ಯಾಣ್.ಜಿಪಂ ಸಿ.ಇ.ಓ ಡಾ.ಪ್ರಭು.ಎಸ್ವಿ ಅಶೋಕ್ ತಹಸೀಲ್ದಾರ್ ಮಂಜುನಾಥ್. ಸಿದ್ದಮಲ್ಲಪ್ಪ. ವಿ.ಲಿ.ಮ.ಸ. ಮಹಿಳಾ ಅಧ್ಯಕ್ಷೆ ಮಮತಾ. ಮಂಜುನಾಥ್. ಪುಟ್ಟರಾಜು. ಫ್ರೆಂಡ್ಸ್ ಗ್ರೂಪ್ ನ ರವಿಕುಮಾರ್. ಶ್ರೀ ಮಠದ ಸದ್ಭಕ್ತರು ಹಾಜರಿದ್ದರು.
ವರದಿ- ನರಸಿಂಹಯ್ಯ ಹೊಸಕೋಟೆ…..!