ತುಮಕೂರು- ಜಿಲ್ಲೆಯ ಕೊರಟಗೆರೆ ತಾಲ್ಲೋಕಿನ ಸಿದ್ಧರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ 19ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜಗದ್ಗುರು ರೇಣುಕಾಚಾರ್ಯ, ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜೂ.6 ರಿಂದ 8ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಮೇ 8 ರಂದು ಬೆಳಿಗ್ಗೆ 10 ಗಂಟೆಗೆ ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ ಎಂದರು.
ಜೂ.7 ರಂದು ಬೆಳಿಗ್ಗೆ 11ಕ್ಕೆ ಪುಸ್ತಕ ದಾಸೋಹ ಸಮಾರಂಭ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯಲಿದ್ದು, ಭಕ್ತರು 1 ಪುಸ್ತಕ ತಂದು ನಮ್ಮಲ್ಲಿರುವ 2 ಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದಾಗಿದ್ದು, 10 ಸಾವಿರ ಪುಸ್ತಕಗಳು ಲಭ್ಯವಿದೆ ಎಂದರು.

ಜೂ.8 ರಂದು 6.30ಕ್ಕೆ ಉಚಿತ ಸಾಮೂಹಿಕ ದೀಕ್ಷಾ ಕಾರ್ಯಕ್ರಮ, ಮಹಾರುದ್ರಾಭಿಷೇಕ, 7.30ಕ್ಕೆ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ನಡೆಯುವ ಜನಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ರಂಭಾಪುರಿ ಮಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಸಚಿವ ವಿ.ಸೋಮಣ್ಣ ಸಮಾರಂಭವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸುವರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ನೂತನ ದಾಸೋಹ ಭವನ ಉದ್ಘಾಟಿಸುವರು. ಆಂಧ್ರಪ್ರದೇಶದ ಮಾಜಿ ಸಚಿವ ರಘುವೀರರೆಡ್ಡಿ ವಸತಿಗೃಹ ಉದ್ಘಾಟಿಸುವರು. ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾಂಗಲ್ಯ ವಿತರಿಸುವರು. ರೋಣ ಶಾಸಕ ಜಿ.ಎಸ್.ಪಾಟೀಲ್ ವಸ್ತç ವಿತರಿಸುವರು. ಮಾಜಿ ಸಚಿವ ಟಿ.ಬಿ.ಜಯಚಂದ್ರ ಮೂಗುತಿ ವಿತರಿಸುವರು. ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ರೈತರಿಗೆ ಸಸಿ ವಿತರಿಸುವರು. ಶಾಸಕರಾದ ಬಿ.ಸುರೇಶ್ಗೌಡ, ಆರ್.ರಾಜೇಂದ್ರ, ಎಂ.ಚಿದಾನಂದಗೌಡ, ಎಚ್.ವಿ.ವೆಂಕಟೇಶ್ ಇವರು ವಿಶೇಷ ಆಹ್ವಾನಿತರಾಗಿರುವರು.

ಜಿಲ್ಲೆಯ ಹಾಲಿ, ಮಾಜಿ ಸಂಸದರು, ಶಾಸಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಮುಖಂಡರಾದ ಎಸ್.ಜಿ.ಚಂದ್ರಮೌಳಿ, ಟಿ.ಆರ್.ಸದಾಶಿವಯ್ಯ,ಟಿ.ಆರ್.ನಟರಾಜು, ಟಿ.ಆರ್.ಅನುಸೂಯಮ್ಮ, ಜಿ.ಕೆ.ಸ್ವಾಮಿ, ಎಂ.ಶಿವಣ್ಣ, ಶಿವಕುಮಾರ್, ರಘು, ದರ್ಶನ್, ಪ್ರಕಾಶ್, ಮಹೇಶ್, ಸಿದ್ದಲಿಂಗಸ್ವಾಮಿ, ಶಶಿಧರ್, ಪ್ರಭು ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
- ಕೆ.ಬಿ.ಚಂದ್ರಚೂಡ