ಚಿಕ್ಕಮಗಳೂರು-ನೋಟರಿ ಹುದ್ದೆಗೆ-ಅರ್ಜಿ-ಆಹ್ವಾನ

ಚಿಕ್ಕಮಗಳೂರು – ಜಿಲ್ಲೆಯ ಅಜ್ಜಂಪುರ ಕಂದಾಯ ತಾಲ್ಲೂಕಿಗೆ ಒಂದು ನೋಟರಿ ಹುದ್ದೆಯನ್ನು ಭರ್ತಿ ಮಾಡಲು ಸ್ಥಳೀಯ ಅರ್ಹ ವಕೀಲರಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನವಾಗಿರುತ್ತದೆ.

ಅಪೂರ್ಣ ಅರ್ಜಿಗಳು ಹಾಗೂ ನೋಟರಿ ನಿಯಮಗಳ ಪ್ರಕಾರ ಅಗತ್ಯ ದಾಖಲಾತಿಗಳು ಮತ್ತು ವಿವರಗಳು ಇಲ್ಲದೆ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ನಿಗಧಿತ ಸಮಯದ ನಂತರ ತಲುಪುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ, ಜಿಲ್ಲಾ ನ್ಯಾಯಾಲಯ ಚಿಕ್ಕಮಗಳೂರು ಇವರ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

× How can I help you?