ತುಮಕೂರು: ಮಡ್ನಿಮಾರಯ್ಯ ಮತ್ತು ನಾಗಮ್ಮ ನವರ ಮೊಮ್ಮಗಳಾಗಿದ್ದು ಯಲಪೇನಹಳ್ಳಿ ಗ್ರಾಮದ ರೇಣುಕೇಶ್ ಮತ್ತು ಪವಿತ್ರರವರ ರೈತರ ಮಗಳು, 10 ನೇ ತರಗತಿಯವರೆಗೂ ಬರಗೂರಿನ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿ, ನಗರದ ವಿದ್ಯಾನಿಧಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಭುವನೇಶ್ವರಿರವರು ವಿಜ್ಞಾನ ವಿಭಾಗದಲ್ಲಿ 94.17 % ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಮುಂದೆ ಮೆಡಿಕಲ್ ಕೋರ್ಸ್ ಓದುವ ಗುರಿಯನ್ನು ಇಚ್ಛಿಸಿರುವ ಈ ಹಳ್ಳಿಯ ಪ್ರತಿಭೆಗೆ ಶುಭವಾಗಲಿ ಎಂದು ಕಾಲೇಜಿನ ಆಡಳಿತ ಮಂಡಳಿ,ಗ್ರಾಮಸ್ಥರು ಶುಭ ಹಾರೈಸಿದ್ದಾರೆ.
- ಕೆ.ಬಿ.ಚಂದ್ರಚೂಡ