ಕೆ.ಆರ್.ಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ನಾಲ್ವರು ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಪಡೆಯುವ ಡಿಕ್ಷಿಂಕ್ಷನ್ನಲ್ಲಿ ಉತ್ತೀರ್ಣ ಹೊಂದುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ದಿವ್ಯಶ್ರೀ: ಅಗ್ರಹಾರಬಾಚಹಳ್ಳಿ ಗ್ರಾಮದ ರೈತರಾದ ಗೀತಾ ಶ್ರೀನಿವಾಸ್(ಕುಂಟಣ್ಣನ ಶ್ರೀನಿವಾಸ್) ದಂಪತಿಗಳ ಸುಪುತ್ರಿ ಎ.ಎಸ್.ಲಕ್ಷ್ಮೀದೇವಿ(ದಿವ್ಯಶ್ರೀ) ಎಂಬ ವಿದ್ಯಾರ್ಥಿನಿ ಕೆ.ಆರ್.ಪೇಟೆ ಬಿಜಿಎಸ್ ಕಾಲೇಜಿನಲ್ಲಿ ಓದುತ್ತಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 534ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ ಹೊಂದುವ ದೀಪಕ್ಗೌಡ :ಅಗ್ರಹಾರಬಾಚಹಳ್ಳಿ ರೈತರಾದ ಗಾಯತ್ರಿ ಸುರೇಶ್ (ಅರೆಕಲ್ಲಟ್ಟಿ ಶಿವೇಗೌಡರ ಕುಟುಂಬ) ದಂಪತಿಗಳ ಸುಪುತ್ರ ದೀಪಕ್ಗೌಡ ಎಂಬ ವಿದ್ಯಾರ್ಥಿ ಕೆ.ಆರ್.ಪೇಟೆ ಬಿಜಿಎಸ್ ಕಾಲೇಜಿನಲ್ಲಿ ಓದುತ್ತಿದ್ದು, ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 514ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ ಹೊಂದುವ ಮೂಲಕ ಹುಟ್ಟೂರು ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿಗೆ, ಪೋಷಕರಿಗೆ ಕೀರ್ತಿ ತಂದಿದ್ದಾನೆ.

ಎ.ಪಿ.ನಿಸರ್ಗ: ಅಗ್ರಹಾರಬಾಚಹಳ್ಳಿ ಗ್ರಾಮದ ಪ್ರಗತಿ ಪರ ರೈತ ಎ.ಎಸ್.ಪರಮೇಶ್ ಮತ್ತು ಕವಿತ ದಂಪತಿಗಳ ಸುಪುತ್ರಿ ನಿಸರ್ಗ.ಎ.ಪಿ. ಎಂಬ ವಿದ್ಯಾರ್ಥಿನಿ(ನಿವೃತ್ತ ಮುಖ್ಯ ಶಿಕ್ಷಕರಾದ ಸಿಂಗೇಗೌಡರ ಮೊಮ್ಮಗಳು,) 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 600ಕ್ಕೆ 549ಅಂಕಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ ಹೊಂದುವ ಮೂಲಕ ಹುಟ್ಟೂರು ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ಹಾಗೂ ತಾಲ್ಲೂಕಿಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾಳೆ.

ಜಯಲಕ್ಷ್ಮಿ (ರಕ್ಷಿತಾ): ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ರೈತರಾದ ಗಾಯತ್ರಿ ಸುರೇಶ್ (ಅರೆಕಲ್ಲಟ್ಟಿ ಶಿವೇಗೌಡರ ಕುಟುಂಬ ) ದಂಪತಿಗಳ ಸುಪುತ್ರಿ ಜಯಲಕ್ಷ್ಮಿ ಸುರೇಶ್ (ರಕ್ಷಿತಾ) ಎಂಬ ವಿದ್ಯಾರ್ಥಿನಿ ಕೆ.ಆರ್.ಪೇಟೆ ಬಿಜಿಎಸ್ ಕಾಲೇಜಿನಲ್ಲಿ ಓದುತ್ತಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 543ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ ಹೊಂದುವ ಮೂಲಕ ಹುಟ್ಟೂರು ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿಗೆ, ಪೋಷಕರಿಗೆ ಕೀರ್ತಿ ತಂದಿದ್ದಾಳೆ.


ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ ಹೊಂದುವ ಮೂಲಕ ಸಾಧನೆ ಮಾಡಿದ ಗ್ರಾಮೀಣ ಹಾಗೂ ರೈತರ ಮಕ್ಕಳಾದ ದಿವ್ಯಶ್ರೀ, ದೀಪಕ್ಗೌಡ ನಿಸರ್ಗ, ಜಯಲಕ್ಷ್ಮಿ, (ರಕ್ಷಿತಾ) ಅವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್, ಹೇಮಗಿರಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಪ್ರಸಾದೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್.ತಿಮ್ಮೇಗೌಡ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮೀಗೌಡ, ನಿವೃತ್ತ ಉಪ ಪ್ರಾಂಶುಪಾಲ ಡಿ.ರಾಜೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಮಂಡ್ಯ ಜಿಲ್ಲಾ ಕರ್ನಾಟಕ ರಕ್ಷಣ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹೆಚ್.ಆರ್.ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.