ಕೆ.ಆರ್.ಪೇಟೆ: ನಮ್ಮ ನಾಡಿನ ಚಾರಿತ್ರಿಕ ಸಂಸ್ಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಪೌರಾಣಿಕ ನಾಟಕಗಳ ಪಾತ್ರ ಮಹತ್ತರವಾದುದು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಕಿಕ್ಕೇರಿ ಗ್ರಾಮದಲ್ಲಿ ಕಿಕ್ಕೇರಮ್ಮನ ಜಾತ್ರಾ ಮಹೋತ್ಸವ ಹಾಗೂ ಹೊಕಳಿ ಹಬ್ಬದ ಪ್ರಯುಕ್ತ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮ ಕೃಪಾಪೋಷಿತ ನಾಟಕ ಮಂಡಳಿಯ ಆಯೋಜಿಸಿದ್ದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಕಲೆ, ಸಂಸ್ಕೃತಿಗಳನ್ನು ಗೌರವಿಸುವುದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯ. ನಮ್ಮ ಕಲೆ, ಸಂಸ್ಕೃತಿಗಳ ಮಹತ್ವವನ್ನು ಜನರಿಗೆ ತಿಳಿಸಿ ಜಾಗೃತಿಗೊಳಿಸುವ ಕೆಲಸವನ್ನು ಮಾಡಬೇಕಾಗಿದೇ.ಅಸಂಘಟಿತ ಕಲಾವಿದರನ್ನು ಗುರುತಿಸಿ ಅವರ ಕಲೆಯನ್ನು ಸಾಬೀತು ಪಡಿಸಲು ನಾಟಕಗಳು ಬಹುಮೂಖ್ಯ ಪಾತ್ರ ವಹಿಸುತ್ತವೆ.

ಗ್ರಾಮೀಣ ಭಾಗದಲ್ಲಿ ಪ್ರೋತ್ಸಾಹವಿದೆ ಆದರೆ ನಗರ ಪ್ರದೇಶಗಳಲ್ಲಿ ಹೆಚ್ಚೆಚ್ಚು ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದೆ.ಇತ್ತಿಚೆಗೆ ಮಹತ್ವ ಕಳೆದುಕೊಳ್ಳುತ್ತಿರುವ ನಾಟಕಗಳನ್ನು ಉಳಿಸಲು ಸಂಘ ಸಂಸ್ಥೆಗಳ ಪಾತ್ರ ಮುಖ್ಯ. ನಾಟಕಗಳು ಮನಸ್ಸನ್ನು ಮುದಗೊಳಿಸಿ ಮನೋರಂಜನೆ ನೀಡುವುದಲ್ಲದೆ, ನಮ್ಮ ನಾಡಿನ ಐತಿಹಾಸಿಕ, ಪಾರಂಪರಿಕ ಘಟನಾವಳಿಗಳನ್ನು ಜನರಿಗೆ ಮನಮುಟ್ಟುವಂತೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಲ್.ಕೆ.ಮಂಜುನಾಥ್, ತಾಲ್ಲೂಕು ಜೈಭುವನೇಶ್ವರಿ ಕಲಾ ಸಂಘದ ಉಪಾಧ್ಯಕ್ಷ ಹಾಗೂ ರಂಗಭೂಮಿ ಹಿರಿಯ ಕಲಾವಿದ ಚಟ್ಟೇನಹಳ್ಳಿ ನಾಗರಾಜು, ತಾಲ್ಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಆನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಲ್ಎಸ್.ಧರ್ಮಪ್ಪ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಲಕ್ಷ್ಮೀಪುರ ಚಂದ್ರೇಗೌಡ, ರಂಗಭೂಮಿ ಕಲಾವಿದ ಹಾಗೂ ಗ್ರಾ.ಪಂ.ಸದಸ್ಯ ಕೃಷ್ಣಾಪುರ ಗಿರೀಶ್, ಡ್ರಾಮಾ ಮಾಸ್ಟರ್ ರಾಮಚಂದ್ರ, ಕಲಾವಿದರಾದ ಶಿಕ್ಷಕ ಧರ್ಮಪ್ಪ, ಕೃಷ್ಣಪುರ ಗಿರೀಶ್,ರುದ್ರೇಶ್, ಕಾರಿಗನಹಳ್ಳಿ ಮಂಜುನಾಥ್, ಶಿಕ್ಷಕ ಮಂಜುನಾಥ್, ಲಕ್ಷ್ಮಿಪುರ ಚಂದ್ರು,ಲಕ್ಷ್ಮಿಪುರ, ಕಿಕ್ಕೇರಿ ಗ್ರಾಮದ ಮುಖಂಡರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.