ಚಿಕ್ಕಮಗಳೂರು:- ಗೃಹಲಕ್ಷ್ಮಿ ಯೋಜನೆಯಲ್ಲಿ ತಾಲ್ಲೂಕಿನ 69376 ಕುಟುಂಬದ ಯ ಜಮಾನಿಗೆ ಪ್ರತಿ ಮಾಹೆಯಾನ 13.87 ಕೋಟಿ ನಗದನ್ನು ಮದ್ಯವರ್ತಿಗಳಿಲ್ಲದೇ ನೇರವಾಗಿ ಖಾತೆ ಜಮಾ ಯಿಸಿ ಶೇ.98.47ರಷ್ಟು ಪ್ರಗತಿ ಸಾಧಿಸಿದೆ ಎಂದು ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು.
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಗೃಹಲಕ್ಷಿö್ಮÃ ಯೋಜನೆ ಜಾರಿಗೊಳಿಸಿದೆ. ಕುಟುಂಬದ ನಿರ್ವಹಣೆಯ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು ಆ ನಿಟ್ಟಿನಲ್ಲಿ ಪ್ರತಿ ತಿಂಗಳು ಎರಡು ಸಾವಿರದಂತೆ 2023-24ನೇ ಸಾಲಿನವರೆಗೆ 240 ಕೋಟಿ ಹಣವನ್ನು ಯಜಮಾನಿ ಖಾತೆ ಗೆ ಜಮಾಯಿಸಲಾಗಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿ ತಾಲ್ಲೂಕಿನಲ್ಲಿ 38729 ಗ್ರಾಹಕರು ನೊಂದಾವಣೆಯಾಗಿದೆ. ಈ ಪೈಕಿ 24803 ಶೂನ್ಯ ಬಿಲ್ ಪಡೆದಿರುವ ಫಲಾನುಭವಿಗಳ ಗ್ರಾಹಕರಿಗೆ ಸರ್ಕಾರ ಒಟ್ಟು 12 ಕೋಟಿ ಹಣವನ್ನು ಮೆಸ್ಕಾಂಗೆ ಭರಿಸಿದ್ದು, 200 ಯುನಿಟ್ ಒಳಗೆ ಬಳಸುತ್ತಿರುವ ಸಾರ್ವಜನಿಕರಿಗೆ ಉಚಿತ ವಿದ್ಯುತ್ ಪೂರೈಸ ಲಾಗುತ್ತಿದೆ ಎಂದರು.
ಶಕ್ತಿ ಯೋಜನೆಯಲ್ಲಿ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ನ.ರಾ.ಪುರ ವಿಭಾಗದಿಂದ ಒಟ್ಟು ಆರಂಭ ದಿಂದ 67.22 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಸಾರಿಗೆ ಇಲಾಖೆಗೆ ಸರ್ಕಾರವು 19.49 ಕೋಟಿ ನಗದನ್ನು ಭರಿಸಿದೆ. ಇದರಿಂದ ಹಲವಾರು ಮಹಿಳೆಯರು ಅತಿಹೆಚ್ಚು ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿ ಯೋಜನೆ ಸದುಪಯೋಗಪಡಿಸಿಕೊಂಡಿದ್ದಾರೆ ಎಂದರು.

ಹಸಿವುಮುಕ್ತ ಭಾರತ ನಿರ್ಮಾಣದಡಿ ರಾಜ್ಯಸರ್ಕಾರ ಅನ್ಯಭಾಗ್ಯ ಯೋಜನೆ ಜಾರಿಗೆ ತಂದಿದೆ. ಈ ಪೈಕಿ ತಾಲ್ಲೂಕಿನಲ್ಲಿ ಆರಂಭದಿAದ 45754 ಕಾರ್ಡ್ದಾರರಿಗೆ ಒಟ್ಟು 61.16 ಕೋಟಿ ನಗದನ್ನು ನೇರ ಖಾತೆಗೆ ಜಮಾಯಿಸಿದೆ. ಜನವರಿ ಮಾಹೆಯಿಂದ ನಗದು ಬದಲಾಗಿ ಪೂರ್ಣಪ್ರಮಾಣದ ಅಕ್ಕಿ ವಿತರಿಸುವ ಮೂಲಕ ರಾಜ್ಯಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ನಿರುದ್ಯೋಗ ಪದವಿ ಹಾಗೂ ಡಿಪ್ಲೋಮಾ ಯುವಕರಿಗೆ ಜೀವನ ಸುಧಾರಣೆಗಾಗಿ ಯುವನಿಧಿ ಯೋ ಜನೆಯಡಿ ತಾಲ್ಲೂಕಿನಲ್ಲಿ 8 ಮಂದಿ ಸೌಲಭ್ಯ ಪಡೆದುಕೊಂಡಿದ್ದು. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿ ಮಾಸಾಶನ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮುಖ್ಯನಿರ್ವಹಣಾಧಿಕಾರಿ ವಿಜಯ್ಕುಮಾರ್ ಮಾತನಾಡಿ, ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಬಾರದು. ಸಣ್ಣಪುಟ್ಟ ಲೋಪದೋಷಗಳು ಕಂಡುಬಂದಲ್ಲಿ ಆಯಾಯ ಇಲಾಖೆಗಳು ಮಾಸಿಕ ಸಭೆಗಳಲ್ಲಿ ಚರ್ಚಿಸಿ ಪ ರಿಹರಿಸುವ ಕಾರ್ಯ ಮಾಡಿದಾಗ ಯೋಜನೆಗಳು ಸಫಲತೆ ಕಾಣಲಿದೆ ಎಂದು ತಿಳಿಸಿದರು.

ಪ್ರಾಧಿಕಾರದ ಸಮಿತಿ ಸದಸ್ಯರಾದ ಗೌಸ್ ಮೊಹಿದ್ಧೀನ್ ಮಾತನಾಡಿ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬೇಸಿಗೆ ಕಾಲದ ಕಾರಣ ಹೆಚ್ಚು ಆದ್ಯತೆ ಕುಡಿಯುವ ನೀ ರಿಗೆ ಕೊಡಬೇಕು ಎಂದಾಗ, ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಉತ್ತರಿಸಿ ಸದ್ಯದಲ್ಲೇ 300 ಲೀಟರ್ಗೆ ಟೆಂಡರ್ ಕರೆಯಲಾಗಿದ್ದು ಸದ್ಯದಲ್ಲೇ ಅಳವಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಷ್ಮಾ, ಪ್ರಾಧಿಕಾರದ ಉಪಾಧ್ಯಕ್ಷ ಉಪ್ಪಳ್ಳಿ ಅನ್ಸರ್ಆಲಿ, ಸದಸ್ಯರಾದ ನಾಗೇಶ್ರಾಜ್ ಅರಸ್, ಪುಈತ್, ಎಲ್.ಎಂ.ನಾಗರಾಜು, ನರೇಂದ್ರ, ಹಸೈನಾರ್ ಆಲಿ, ರೋಹಿತ್, ವಿದ್ಯಾ, ಜಯಂತಿ, ಧರ್ಮಯ್ಯ, ತಿಮ್ಮೇಗೌಡ, ಕೃಷ್ಣ ಉಪಸ್ಥಿತರಿದ್ದರು.
- ಸುರೇಶ್ ಎನ್.