ಚಿಕ್ಕಮಗಳೂರು-ಮಹಿಳಾ ಲೇಖಕಿಯರು ಸಾಹಿತ್ಯಾಭಿರುಚಿ ಉಣಬಡಿಸಿ-ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್

ಚಿಕ್ಕಮಗಳೂರು, ಮೇ.05:- ಸಾಹಿತ್ಯ ಲೋಕದ ಜೀವಾಳವಾಗಿರುವ ಜಿಲ್ಲೆಯಲ್ಲಿ ಮಹಿಳಾ ಲೇಖಕಿಯ ರು, ಕವಿತ್ರಿಯರು, ಬರಹಗಾರ್ತಿಯರು ಮುಖ್ಯವಾಹಿನಿಗೆ ಬಂದು ಸಾಹಿತ್ಯಾಭಿರುಚಿ ಉಣಬಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಕರೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಪದಗ್ರಹಣ ಸಮಾ ರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ವೈವಾಹಿಕ ಜೀವನದ ನಡುವೆಯು ಮಹಿಳೆಯರು ಸಮಾಜದ ಪ್ರತಿ ಕ್ಷೇತ್ರದಲ್ಲೂ ಹೆಜ್ಜೆ ಹಾಕುತ್ತಿದ್ದಾರೆ. ಜೊತೆಗೆ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ಮುತುವರ್ಜಿ ತೋರಿ ಕಥೆ, ಕಾದಂಬರಿ, ಕವಿತೆಗಳನ್ನು ರಚಿ ಸುತ್ತಿರುವುದು ಶ್ಲಾಘನೀಯ. ಹೀಗಾಗಿ ಅರ್ಹ ಲೇಖಕಿಯರನ್ನು ಸಂಘವು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ಮಾಡಿದರು.

ಕನ್ನಡಾಂಬೆಯ ಸೇವೆಯಲ್ಲಿ ನೂತನ ಅಧ್ಯಕ್ಷೆ ಸಕುಟುಂಬವು ನಿಸ್ವಾರ್ಥದಿಂದ ಕಾರ್ಯಪ್ರವೃತ್ತವಾಗಿರು ವುದು ಹೆಮ್ಮೆಯ ಸಂಗತಿ ಎಂದ ಅವರು ಮುಂಬರುವ ದಿನಗಳಲ್ಲಿ ಲೇಖಕಿಯರ ಸಂಘ ಜಿಲ್ಲೆಯಾದ್ಯಂತ ಹೆಚ್ಚು ಮನ್ನಣೆ, ಕಾರ್ಯಕ್ರಮ ರೂಪಿಸುವಂತಾಗಲಿ ಎಂದು ಶುಭ ಕೋರಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿ ಜಾನಪದ ಸಾಹಿತ್ಯ ಅನೇಕ ಯುಗಗಳಿಂದ ಈ ಮಣ್ಣಿನಲ್ಲಿ ನೆಲೆಕಾಣಲು ಮಹಿಳೆಯರ ಶಕ್ತಿಯೇ ಮೂಲ ಕಾರಣ. ಆದರೆ ಪುರು ಷರಿಗೆ ದೊರೆತ ಅವಕಾಶ ಮಹಿಳಾ ಸಾಹಿತಿಗಳಿಗೆ ಸಿಕ್ಕಿಲ್ಲ. ಹೀಗಾಗಿ ಲೇಖಕಿಯರ ಸಂಘವು ಮಹಿಳಾ ಸಾಹಿ ತಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಿ ಎಂದು ಆಶಿಸಿದರು.

ಜಿಲ್ಲೆಯ ಹಲವಾರು ಅಧಿಕಾರಿಗಳು ವರ್ಗಾವಣೆಯಾಗಿ ತೆರಳುವ ಮುನ್ನ ಪುಸ್ತಕ ರಚನೆ, ಕವಿಗಳಾಗಿ ಹೊರಹೊಮ್ಮಲು ಜಿಲ್ಲೆಯಲ್ಲಿನ ಆಳವಾದ ಸಾಹಿತ್ಯ ಪ್ರೇಮವೇ ಸಾಕ್ಷಿ. ಇದೀಗ ಲೇಖಕಿಯರ ತಂಡ ಜಿಲ್ಲೆ ಯಾದ್ಯಂತ ಕನ್ನಡಪ್ರೇಮ ಬೆಳೆಸಲು ಸಜ್ಜಾಗುತ್ತಿದ್ದು ಬರವಣಿಗೆಯಿಂದ ಸಮಾಜದ ಸ್ಥಿತಿಗತಿ ಬದಲಿಸಲು ಸಾ ಧ್ಯ ಎಂಬ ಶಕ್ತಿಯನ್ನು ಪರಿಚಯಿಸಬೇಕು ಎಂದರು.

ಸೇವಾದೀಕ್ಷೆ ಸ್ವೀಕರಿಸಿ ಮಾತನಾಡಿದ ನೂತನ ಜಿಲ್ಲಾಧ್ಯಕ್ಷೆ ಅಜ್ಜಂಪುರ ಎಸ್.ಶೃತಿ ಜಿಲ್ಲೆಯಲ್ಲಿನ ಲೇಖಕಿಯರು, ಬರಹಗಾರ್ತಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಥಾ ಕಮ್ಮಟ, ಕಾವ್ಯಕಮ್ಮಟ, ಕವಿಗೋಷ್ಠಿ ಗಳನ್ನು ಏರ್ಪಡಿಸುತ್ತೇವೆ. ಜೊತೆಗೆ ತಾಲ್ಲೂಕಿನ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿನ ಮಹಿಳಾ ಸಾಹಿತಿಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಹೆಚ್.ಎಲ್. ಪುಷ್ಪ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅನೇಕ ಕವಿತೆ, ಕಾದಂಬರಿ, ಕಥೆಗಳನ್ನು ರಚಿಸುತ್ತಿ ದ್ದು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಸಂಘವನ್ನು ಸ್ಥಾಪಿಸಿ ವೇದಿಕೆ ನಿರ್ಮಿಸಿಕೊಡಲಾ ಗಿದೆ ಎಂದರು.

ಮಹಿಳಾ ಲೇಖಕಿಯರನ್ನು ಸಂಘದ ಚೌಕಟ್ಟಿನೊಳಗೆ ತರುವ ಪ್ರಯತ್ನ ಮಾಡಲಾಗುತ್ತಿದ್ದು ಲೇಖಕಿ ಯರ ಕೃತಿಗಳಿಗೆ ಸಿಗಬೇಕಾದ ಮನ್ನಣೆ ದೊರಕಿಸಿಕೊಡುವುದು ಆದ್ಯತೆಗಳಲ್ಲಿ ಒಂದಾಗಿದೆ. ಮುಕ್ತವಾಗಿ ಪ್ರತಿ ಭಾವಂತ ಕವಿತ್ರಿಯರು ಲೇಖಕಿಯರ ಸಂಘದಲ್ಲಿ ಸೇರ್ಪಡೆಗೊಂಡು ಪ್ರತಿಭೆ ಅನಾವರಣಕ್ಕೆ ಮುಂದಾಗ ಬೇಕು ಎಂದು ತಿಳಿಸಿದರು.

ಜಿಲ್ಲಾ ಪದಾಧಿಕಾರಿಗಳು : ಅಜ್ಜಂಪುರ ಎಸ್.ಶೃತಿ (ಅಧ್ಯಕ್ಷೆ), ಗೀತಾ ಹಸ್ಮಕಲ್, ಭಾಗ್ಯ ನಂಜುಂಡಸ್ವಾ ಮಿ (ಉಪಾಧ್ಯಕ್ಷರು), ಆಶಾರಾಜು, ಸುನೀತ ನವೀನಗೌಡ (ಕಾರ್ಯದರ್ಶಿ), ಸಿ.ಆರ್.ಶ್ರೀಲಾದೇವಿ (ಖಜಾಂಚಿ). ತಾಲ್ಲೂಕು ಅಧ್ಯಕ್ಷರು : ವೈಷ್ಣವಿ ಎನ್.ರಾವ್ (ಚಿಕ್ಕಮಗಳೂರು), ಶೃತಿ ಲಿಂಗರಾಜು (ಕಡೂ ರು), ಟಿ.ಎಂ.ಮAಜುಳಾ (ಅಜ್ಜಂಪುರ), ಡಾ.ನಾಗಜ್ಯೋತಿ (ತರೀಕೆರೆ), ಗೀತಾ (ಕಳಸ), ಎಸ್.ಎನ್.ಚಂದ್ರ ಕಲಾ (ಕೊಪ್ಪ), ಜಯಶ್ರೀ ಗಣೇಶ್ (ಶೃಂಗೇರಿ), ಪ್ರೇಮ (ಮೂಡಿಗೆರೆ), ಎ.ಆರ್.ಲತಾ (ನ.ರಾ.ಪುರ.)

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಹೆಚ್.ಎಸ್.ಕೀರ್ತ ನಾ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಮುಖ್ಯೋಪಾಧ್ಯಾ ಯೆ ಬಿ.ಚೇತನ, ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಪ್ರಧಾನ ಕಾರ್ಯದರ್ಶಿ ಎಸ್. ಎಸ್.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *