ಕೊರಟಗೆರೆ: ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಚಾಣಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ನಾಗ ರಂಗ ನಿರಂಜನ್.ವಿ ಶ್ಲಾಘನೀಯ ಸಾಧನೆ ಮಾಡಿದ್ದು, ಒಟ್ಟು 625 ಅಂಕಗಳಲ್ಲಿ 613 ಅಂಕ ಗಳಿಸಿ 98.08% ಫಲಿತಾಂಶದೊಂದಿಗೆ ಶಾಲೆಗೂ ಪೋಷಕರಿಗೂ ಹೆಮ್ಮೆ ತಂದಿದ್ದಾನೆ.
ಇದಕ್ಕೂ ಮುಂಚೆ ಪ್ರಕಟವಾದ ಮೊದಲ ಫಲಿತಾಂಶದಲ್ಲಿ ವಿದ್ಯಾರ್ಥಿಗೆ 596 ಅಂಕಗಳು ಲಭಿಸಿದ್ದರೂ, ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಅಂಕ ಬಂದಿದ್ದರಿಂದ ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಮರು ಮೌಲ್ಯಮಾಪನದ ಫಲಿತಾಂಶದಲ್ಲಿ ಹೆಚ್ಚುವರಿ 17 ಅಂಕಗಳು ಲಭಿಸಿ ಒಟ್ಟು ಅಂಕಗಳು 613ಕ್ಕೆ ಏರಿಕೆಯಾಗಿದೆ.

ನಾಗ ರಂಗ ನಿರಂಜನ್ ಕನ್ನಡ ವಿಷಯದಲ್ಲಿ ಪೂರ್ಣ ಅಂಕಗಳಾದ 125/125 ಗಳಿಸಿ ತಮ್ಮ ಭಾಷಾ ಸಾಮರ್ಥ್ಯವನ್ನು ಸಾರಿದ್ದಾನೆ. ಈ ಸಾಧನೆಯಿಂದ ಅವರು ಚಾಣಕ್ಯ ಪಬ್ಲಿಕ್ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದು, ಶಾಲೆಯ ಹೆಮ್ಮೆ ವೃದ್ಧಿಸಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಯನ್ನು ಕಂಡು ಪೋಷಕರಾದ ವೇಣುಗೋಪಾಲ್ ಎಚ್.ಎಂ ಮತ್ತು ನೇತ್ರಾ ವೇಣುಗೋಪಾಲ್, ಹಾಗು ಚಾಣಕ್ಯ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವರ್ಗ ತೀವ್ರ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂಬ ಹಾರೈಕೆ ವ್ಯಕ್ತವಾಗಿದೆ.
– ಶ್ರೀನಿವಾಸ್, ಕೊರಟಗೆರೆ.