ಕೆ.ಆರ್.ಪೇಟೆ-ರಾಜ್ಯದ ಜನತೆಯು ಉತ್ತಮ ಬದುಕು ಕಟ್ಟಿಕೊಳ್ಳಲು ಕಾಂಗ್ರೆಸ್ ಸರ್ಕಾರದ ಮಹತ್ವಾ ಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಸಹಕಾರಿ- ತಾಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಅಭಿಪ್ರಾಯ

ಕೆ.ಆರ್.ಪೇಟೆ,ಜೂ.02: ರಾಜ್ಯದ ಜನತೆಯು ಉತ್ತಮ ಬದುಕು ಕಟ್ಟಿಕೊಳ್ಳಲು ಕಾಂಗ್ರೆಸ್ ಸರ್ಕಾರದ ಮಹತ್ವಾ ಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ನಿಜವಾದ ಅರ್ಹ ಫಲಾನುಭವಿ ಗಳಿಗೆ ತಲುಪುತ್ತಿದ್ದು, ಹಿಂದಿಗಿಂತಲೂ ಪ್ರಸ್ತುತ ದಿನಗಳಲ್ಲಿ ನೆಮ್ಮದಿಯ ಜೀವನ ನಡೆ ಸಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೊಳಪಡುವ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಶ್ರಮ ಶ್ಲಾಘನೀಯವಾದುದು ಎಂದರು.

ನಮ್ಮ ತಾಲೂಕಿನಲ್ಲಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ತಾಲೂಕಿನೆಲ್ಲೆಡೆ ಸಂಚಾರ ನಡೆಸಿ ಯಾರಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯುತ್ತಿಲ್ಲವೋ ಅಂತವರಿಗೆ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಎ.ಬಿ.ಕುಮಾರ್ ಸಲಹೆ ನೀಡಿದರು.

ಯುವನಿಧಿ ಯೋಜನೆಯಡಿ ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 941 ನಿರುದ್ಯೋಗಿಗಳ ನೋಂದಣಿಯಾಗಿದ್ದು, ಅವರಲ್ಲಿ 665 ನಿರುದ್ಯೋಗಿಗಳಿಗೆ ಈಗಾಗಲೇ ಯುವನಿಧಿ ಯೋಜನೆಯಡಿ ಹಣ ಸಂದಾಯ ಆಗುತ್ತಿದೆ. ಇದರಲ್ಲಿ ಪದವಿ ಪಡೆದ 651 ನಿರುದ್ಯೋಗಿಗಳು ಹಾಗೂ ಡಿಪ್ಲೊಮಾ ವ್ಯಾಸಂಗ ಮುಗಿಸಿದ 14 ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಒಟ್ಟು 95, 34,000 ರೂಪಾಯಿ ಸರ್ಕಾರದಿಂದ ಬಿಡುಗಡೆ ಆಗಿದೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್‌ಕುಮಾರ್ ಮಾತನಾಡಿ ತಾಲೂಕಿನಲ್ಲಿ ಒಟ್ಟು 68,033ಮಂದಿ ನೊಂದಾವಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಜಿ.ಎಸ್.ಟಿ ನಮೂದಾಗಿರುವವ ಫಲಾನುಭವಿಗಳು 155ಮಂದಿ ಇದ್ದಾರೆ. 2023 ಆಗಸ್ಟ್ ತಿಂಗಳಿನಿAದ 2025 ಏಪ್ರಿಲ್ ತಿಂಗಳವರೆಗೆ ಒಟ್ಟು 19 ತಿಂಗಳುಗಳ ಗೃಹಲಕ್ಷ್ಮಿಯ ಹಣ ಜಮೆಯಾಗಿದೆ. 2025 ಫೆಬ್ರವರಿ ಮತ್ತು ಮಾರ್ಚ್ 2 ತಿಂಗಳುಗಳ ಹಣ ಬಾಕಿ ಇದೆ. ಪ್ರತಿ ತಿಂಗಳಿಗೆ ಇದೂವರೆವಿಗೂ ಒಟ್ಟು 1157.62ಕೋಟಿ ರೂಪಾಯಿಗಳು ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ. ಒಟ್ಟಾರೆ ನೂರಕ್ಕೆ ನೂರರಷ್ಟು ಸಾಧನೆ ಆಗಿದೆ ಎಂದು ಮಾಹಿತಿ ನೀಡಿದರು.

ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ ಮಾತನಾಡಿ ಇದೂವರೆವಿಗೂ ಒಟ್ಟು 67,306ಫಲಾನುಭವಿಗಳು ಗೃಹಜ್ಯೋತಿ ನೊಂದಣಿ ಮಾಡಿಸಿಕೊಂಡು ಫಲಾನುಭವಿಗಳಾಗಿರುತ್ತಾರೆ. ಯೋಜನೆ ಆರಂಭದಿAದ ಇಲ್ಲಿಯವರೆವಿಗೂ ಒಟ್ಟು 43ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಸರ್ಕಾರದಿಂದ ಚೆಸ್ಕಾಂ ಖಾತೆಗೆ ಜಮಾ ಆಗಿರುತ್ತದೆ. ಹೊಸಮನೆ ಕಟ್ಟಿರುವ ಫಲಾನುಭವಿಗಳಿಗೆ 58ಯೂನಿಟ್ ಉಚಿತವಾಗಿ ನೀಡುತ್ತೇವೆ. ಹಾಗಾಗಿ ಹೊಸ ಮನೆ ನಿರ್ಮಿಸಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಒಟ್ಟಾರೆ ಶೇ.97.51ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ.

ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ಪೂರ್ಣಿಮಾ ಮಾತನಾಡಿ 2,11,190ಮಂದಿ ಬಿಪಿಎಲ್ ಕಾರ್ಡುದಾರರಿದ್ದಾರೆ. ಅಂತ್ಯೋದಯ ಕಾರ್ಡಿಗೆ 35ಕೆಜಿ ಉಚಿತ ಹಾಗೂ ಬಿಪಿಎಲ್ ಕಾರ್ಡಿಗೆ ತಲಾ 10ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಯಾರೂ ಸಹ ನ್ಯಾಯ ಬೆಲೆ ಅಂಗಡಿ ಹಾಗೂ ಸೊಸೈಟಿಗಳಲ್ಲಿ ಅಕ್ಕಿಗೆ ಹಣ ನೀಡುವಂತಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಇಒ ಕೆ.ಸುಷ್ಮ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ವಳಗೆರೆಮೆಣಸ ಸಿ.ಆರ್.ಪಿ.ಕುಮಾರ್, ಬೊಮ್ಮೇನಹಳ್ಳಿ ಲತಾ, ಕೆ.ಎಸ್.ಆರ್.ಟಿ.ಸಿ ಶಿವಣ್ಣ,ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್(ಉಮೇಶ್), ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಹಾಫೀಜ್ ಉಲ್ಲಾ, ಬೂಕನಕೆರೆ ರೂಪಾ ಚಂದ್ರಶೇಖರ್, ಯಗಚಗುಪ್ಪೆ ಶಿವಲಿಂಗಪ್ಪ ಇತರರು ಉಪಸ್ಥಿತರಿದ್ದರು.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *