ತುಮಕೂರು-ದೇಶದ ದೊಡ್ಡ ಸಮಸ್ಯೆ ಮಾದಕ ವಸ್ತುಗಳ ಸೇವನೆ ಮತ್ತು ಸಾಗಾಣಿಕೆ-ನ್ಯಾ.ನೂರುನ್ನೀಸಾ

ತುಮಕೂರು:‌ ದೇಶವನ್ನು ಕಾಡುತ್ತಿರುವ ದೊಡ್ಡಜಲ್ವಂತ ಸಮಸ್ಯೆಗಳಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಸಾಗಾಣಿಕೆಯೂ ಒಂದಾಗಿದ್ದು, ಇದನ್ನು ನಿಯಂತ್ರಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ತಿಳಿಸಿದ್ದಾರೆ.

ನಗರದ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸೈಬರ್, ಅರ್ಥಿಕ ಮತ್ತು ಮಾದಕದ್ರವ್ಯ ಅಪರಾದ ಪೊಲೀಸ್ ಠಾಣೆ,ಜಿಲ್ಲಾ ವಿಕಲ ಚೇತನ ಮತ್ತು ಹಿರಿಯ ನಾಗರಿಕರಕಲ್ಯಾಣ ಇಲಾಖೆ, ಆರ್ಚಡ್ ಮದ್ಯ ವಿರ್ಜನಾ ಮತ್ತು ಸಮಗ್ರ ಪುನರ್ವಸತಿ ಕೇಂದ್ರ ತುಮಕೂರು ಇವರಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುಬರ್ಳಕೆ ಹಾಗೂ ಅಕ್ರಮ ಸಾಗಾಟದ ವಿರುದ್ಧ ಅಂತರರಾಷ್ಟ್ರೀಯ ದಿನಾಚರಣೆ ಅಂಗವಾಗಿ ಮದ್ಯ, ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಯುವಜನರ ಪಾತ್ರ ಎಂಬ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತಿದ್ದ ಅವರು, ಯುವಜನರು ಹೆಚ್ಚು ಬಲಿಯಾಗುತ್ತಿರುವ ಕಾರಣ. ಜಾಗೃತಿ ಮೂಡಿಸುವ ಅವಶ್ಯಕತೆ ಹೆಚ್ಚಾಗಿದೆ ಎಂದರು.

ಇಂದು ಪ್ರತಿಷ್ಠಿತ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಬಳಕೆಯಾಗುತ್ತಿರುವುದನ್ನು ಕಾಣಬಹುದಾಗಿದೆ.ತುಮಕೂರು ಜಿಲ್ಲೆಯಲ್ಲಿ ಕಳೆದ 4 ನಾಲ್ಕು ತಿಂಗಳಲ್ಲಿ 26 ಕೆ.ಜಿ. ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ.ಎನ್.ಡಿ.ಪಿ.ಎಸ್ ಅಕ್ಟ್ನ ಸೆಕ್ಷನ್ 08ರ ಪ್ರಕಾರ ಉತ್ಪಾದನೆ,ಸಾಗಾಟ,ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು, ಕೊಳ್ಳುವುದು ಮತ್ತು ಬಳಕೆ ಎರಡುಕೂಡ ಅಪರಾಧವಾಗಿದೆ.

ಗಾಂಜಾ,ಹೆರಾಯಿನ್,ಅಫೀಮ್, ಎಂ.ಡಿ.ಎಂ. ಇತ್ತೀಚಿನ ದಿನಗಳಲ್ಲಿ ಅಪರಾಧಗಳಲ್ಲಿ ಸೇರಿವೆ.ಈಎಲ್ಲಾ ಕೇಸುಗಳು ಜಾಮೀನುರಹಿತ ಕೇಸುಗಳಾಗಿದ್ದು, ದೇಶದ ಯಾವ ನ್ಯಾಯಾಲಯದಲ್ಲಿಯೂ ಅಪರಾಧಿಗೆ ಜಾಮೀನು ದೊರೆಯುವುದಿಲ್ಲ. ಹಾಗಾಗಿ ಇದರ ಗಂಭೀರತೆಯನ್ನು ಪ್ರತಿಯೊಬ್ಬ ಯುವಕರು ಅರ್ಥ ಮಾಡಿಕೊಳ್ಳಬೇಕೆಂದು ನ್ಯಾ.ನೂರುನ್ನಿಸಾ ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ ವಹಿಸಿದ್ದರು.ಜಿಲ್ಲಾ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ ಚಿದಾನಂದ್ ಮೂರ್ತಿ, ಅರ್ಚೆಡ್ ಮಧ್ಯವರ್ಜನಕೇಂದ್ರದ ನಿರ್ದೇಶಕ ಡಾ.ಸದಾಶಿವಯ್ಯ, ಉಪನ್ಯಾಸಕರಾದ ಡಾ.ಮೇಘಾ ಸದಾಶಿವ ವಿಶೇಷ ಉಪನ್ಯಾಸ ನೀಡಿದರು.ಅರ್ಚಡ್ ಮಧ್ಯ ವರ್ಜನಾಕೇಂದ್ರದ ಕಾರ್ಯದರ್ಶಿ ಶ್ರೀಮತಿ ಮಾಲಾ ಸದಾಶಿವಯ್ಯ, ಸುಬ್ಬು ಕೃಷ್ಣ ವೈ.ಕೆ, ಮತ್ತಿತರರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *