ಕೊರಟಗೆರೆ :- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರಿನ ಸಂರಕ್ಷಣೆ ಹಿತದೃಷ್ಟಿಯಿಂದ ನೂರಾರು ಕೋಟಿ ಅನುದಾನದಲ್ಲಿ ಕೆರೆ- ಕುಂಟೆ, ಗೋಕುಂಟೆಗಳನ್ನ ನಿರ್ಮಾಣಗೊಳಿಸಿ ಪ್ರಾಣಿ -ಪಕ್ಷಿ, ಜಾನುವಾರಗಳಿಗೆ ಆಸರೆಗಾಗಿ ನಿರ್ಮಾಣಗೊಳಿಸಿ ಅದರ ರಕ್ಷಣೆಗೆ ವಿಶೇಷ ಕಾನೂನುಗಳನ್ನ ರಚಿಸಿದ್ದರಾದರೂ ಸ್ಥಳೀಯ ಪ್ರಭಾವಿ ರಾಜಕೀಯ ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳ ಹಿಡಿತಕ್ಕೆ ಒಳಗಾಗಿ ಅತಿಕ್ರಮಣ ಹಾಗೂ ಕಬಳಿಸುವ ಕಾರ್ಯ ಸತತವಾಗಿ ಮುಂದುವರಿದುಕೊಂಡು ಬಂದಿದೆ.
ಇದೇ ಮಾದರಿಯಲ್ಲಿ ನೂರಾರು ವರ್ಷಗಳ ಹಳೆಯ ಇತಿಹಾಸ ಇರುವ ಗೋಕಟ್ಟೆಯನ್ನ ಕೊರಟಗೆರೆ ತಾಲೂಕಿನಲ್ಲೂ ಕಬಳಿಸಿರುವ ಪ್ರಕರಣವೂಂದು ತಡವಾಗಿ ಬೆಳಕೆಗೆ ಬಂದಿದೆ.

ಕೊರಟಗೆರೆ ತಾಲೂಕ್ ಕೋಳಾಲ ಹೋಬಳಿ ವಜ್ಜಿನಕುರಿಕೆ ಗ್ರಾಮದ ಸರ್ವೆ ನಂಬರ್ 33ರಲ್ಲಿ ನಿರ್ಮಾಣಗೊಂಡಿದ್ದ ಗೋಕಟ್ಟೆಯನ್ನ ಪ್ರಭಾವಿ ಭೂ ಮಾಲೀಕರೂಬ್ಬರು ರಾತ್ರೋರಾತ್ರಿ ಹಿಟಾಚಿ ಮೂಲಕ ಗೋಕಟ್ಟೆಯನ್ನ ಸಮಗೊಳಿಸಿ ನೂರಾರು ವರ್ಷಗಳಿಂದ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದ್ದ ಗೋಕಟ್ಟೆಯನ್ನ ಹೊಡೆದು ನೆಲಸಮಗೊಳಿಸಿ ಭೂ ಕಬಳಿಕೆಗೊಳಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ವಜ್ಜಿನಕುರಿಕೆ ಸರ್ವೆ ನಂಬರ್ 33ರಲ್ಲಿ ಉಮಾದೇವಿ ಎಂಬುವ ಮಹಿಳೆ 2ಎಕರೆ 20 ಗುಂಟೆ ಜಮೀನನ್ನ ಸಾಗುವಳಿ ಮೂಲಕ ಮಂಜೂರು ಮಾಡಿಸಿಕೊಂಡು , ನಂತರ ಈ ಜಮೀನಿಗೆ ಅಂಟಿಕೊಂಡಂತಿರುವ 2.30 ಗುಂಟೆ ಜಮೀನನ್ನು ಜೊತೆಗೆ ನೂರಾರು ವರ್ಷಗಳ ಇತಿಹಾಸವುಳ್ಳ ಗೋಕಟ್ಟಿಯನ್ನು ಸಹ ರಾತ್ರೋರಾತ್ರಿ ಇಟಾಚಿ ಮೂಲಕ ಕಿತ್ತುಹಾಕಿ ನೆಲಸಮಗೊಳಿಸಿ ಉಳುಮೆ ಮಾಡಿಕೊಂಡು ಅಡಿಕೆ ಸಸಿಗಳನ್ನ ನೆಟ್ಟಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕರು ಇವರ ನಡವಳಿಕೆ ವಿರುದ್ಧ ಹಾಗೂ ಗೋಕಟ್ಟೆ ನೆಲಸಮಗೊಳಿಸಿದ ವಿರುದ್ಧ ಆರೋಪಗಳ ಸುರಿಮಳೆಗೆರೆದಿದ್ದಾರೆ.

ವಜ್ಜಿನಕುರಿಕೆ ಗ್ರಾಮದ ಜನಪನ ಗುಂಟೆ ಕೆರೆ ಮೇಲ್ಬಾಗದಲ್ಲಿದ್ದ ನೂರಾರು ವರ್ಷಗಳ ಹಳೆಯ ಗೋಕಟ್ಟೆಯನ್ನ ಇತ್ತೀಚಿಗೆ ಪ್ರಭಾವಿ ಪಕ್ಕದ ಜಮೀನಿನ ಭೂಮಾಲೀಕರು 2.5 ಎಕರೆ ಜಮೀನನ್ನ ಅಕ್ರಮ ಸಕ್ರಮ ದಡಿ ಸಾಗುವಳಿ ಮಾಡಿಕೊಂಡಿದ್ದು, ಉಳಿಕೆಯಿದ್ದ 2.5 ಎಕರೆ ಜಮೀನನ್ನು ಸಹ ಗೋಕಟ್ಟೆ ಸಮೇತ ಕಾನೂನುಬಾಹಿರವಾಗಿ ರಾತ್ರೋರಾತ್ರಿ ಹಿಟಾಚಿಗಳ ಮೂಲಕ ನೆಲಸಮಗೊಳಿಸಿ ಇದರಲ್ಲಿ ಅಡಿಕೆ ಸಸಿಗಳನ್ನ ನೆಟ್ಟು ಅದನ್ನು ಸಹ ಅತಿಕ್ರಮವಾಗಿ ತಮ್ಮದಾಗಿಸಿಕೊಂಡಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟಂತ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಜೊತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಗೋಕಟ್ಟೆಯನ್ನು ಅತಿಕ್ರಮವಾಗಿ ನೆಲಸಮಗೊಳಿಸಿದ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅದರ ಅನುದಾನವನ್ನ ದುಪ್ಪಟ್ಟು ಆರೋಪಿಗಳಿಂದ ಸರ್ಕಾರಕ್ಕೆ ಹಣವನ್ನ ಹಿಂಪಡೆಯಬೇಕು ಎಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದರೆ.
– ಶ್ರೀನಿವಾಸ್ , ಕೊರಟಗೆರೆ.