ಚಿಕ್ಕಮಗಳೂರು, ಜೂನ್ 05:- ಪ್ರಾಮಾಣಿಕತೆ, ನಿಸ್ವಾರ್ಥ ಗುಣ ಹಾಗೂ ಸೇವಾ ಮನೋಭಾವದಿಂ ದ ಸಂಘಟನೆಯನ್ನು ಕಟ್ಟಿಬೆಳೆಸಿದಾಗ ಮಾತ್ರ ಸಮಾಜದಲ್ಲಿ ಪರಿಪೂರ್ಣವಾಗಿ ಬೇರೂರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ನಡೆದ ಕರ್ನಾಟಕ ಶ್ರಮಿಕ ಟ್ಯಾಕ್ಸಿ ಚಾಲಕರ ವೇ ದಿಕೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಘಟನೆಗಳಲ್ಲಿ ಸ್ವಾರ್ಥ ನುಸುಳಿದರೆ, ಅಹಂಗೆ ಅವಕಾಶ ನೀಡಿದರೆ, ಒಳಗಿರುವವರ ಪ್ರತಿಷ್ಟೆಗೆ ವೇದಿ ಕೆಯಾದರೆ ಬಹುಕಾಲ ಉಳಿಗಾಲವಿಲ್ಲ. ಹೀಗಾಗಿ ಸಂಘಟನೆ ನೇತೃತ್ವದ ರೂವಾರಿಗಳು ನಿಸ್ವಾರ್ಥತನದಿಂ ದ ಕಾರ್ಯನಿರ್ವಹಿಸಬೇಕು. ಆ ನಿಟ್ಟಿನಲ್ಲ ಟ್ಯಾಕ್ಸಿ ಸಂಘಟನೆ ಅಧ್ಯಕ್ಷರು, ಚಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ನೆರವಿಗೆ ಧಾವಿಸಬೇಕು ಎಂದರು.

ನದಿಗಳು ಎಂದಿಗೂ ದೊಡ್ಡಪ್ರವಾಹದಿಂದ ಹುಟ್ಟುವುದಿಲ್ಲ. ನದಿಗಳ ಉಗಮ ಸ್ಥಾನವನ್ನು ಗಮನಿಸಿರ ಬಹುದು. ಸಣ್ಣ ಸಣ್ಣ ತೊರೆಗಳಿಂದ ಹೊಳೆಯಾಗಿ, ನದಿಗಳಾಗುತ್ತವೆ. ಆ ರೀತಿಯಲ್ಲಿ ಇದೀಗ ತೊರೆಗಳಾಗಿ ಉಗಮಿಸಿರುವ ಟ್ಯಾಕ್ಸಿ ಚಾಲಕರ ಸಂಘಟನೆಗೆ ಹಲವರ ಕೈಜೋಡಣೆಯಿದ ದೊಡ್ಡನದಿಗಳಾಗಿ ಸಾಮರ್ಥ್ಯ ವಿಸ್ತರಿಸಬೇಕು ಎಂದು ತಿಳಿಸಿದರು.
ಪ್ರಸ್ತುತ ಟ್ಯಾಕ್ಸಿ ಚಾಲಕರೊಂದಿಗೆ ಸಂಕಷ್ಟದ ಸಮಯ ಹಾಗೂ ಒಳ್ಳೆಯ ಕೆಲಸಕ್ಕೆ ಮನೆಮಗನಂತೆ ಸದಾ ನಿಮ್ಮೊಂದಿಗೆ ನಿಲ್ಲಲು ಸಿದ್ಧ. ಸಂಘಟನೆ ಪದಾಧಿಕಾರಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಸಂಘಟನೆ ಯನ್ನು ಬಲಿಷ್ಟಗೊಳಿಸುವಲ್ಲಿ ಹೆಜ್ಜೆಹಾಕುವ ಜೊತೆಗೆ ಸಾರಿಗೆ ಇಲಾಖೆಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಕರ್ನಾಟಕ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಕೆ.ಪ್ರಕಾಶ್ ಮಾತನಾಡಿ ರಾಜ್ಯದ ಚಾ ಲಕರು ಹೊರರಾಜ್ಯಗಳಲ್ಲಿ ಬ್ರೇಕ್ಡೌನ್ ಅಥವಾ ಅಂಗವೈಫಲ್ಯತೆಯಾದಲ್ಲಿ ವೇದಿಕೆಯಿಂದ ಸಹಾಯಧನ ಕಲ್ಪಿಸುವ ಗುರಿಹೊಂದಿದೆ. ಚಾಲಕರ ಕುಟುಂಬಕ್ಕೆ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ ಆಯೋಜಿಸಿ ಚಾಲ ಕರ ಶ್ರೇಯೋಭಿವೃದ್ದಿಗೆ ಕೆಲಸ ಮಾಡಲಾಗುವುದು ಎಂದರು.
ಪ್ರಸ್ತುತ ರಾಜ್ಯದಲ್ಲಿ 270ಕ್ಕೂ ಹೆಚ್ಚು ಸದಸ್ಯರು ನೋಂದಣಿಯಾಗಿದೆ. ಈ ಪೈಕಿ ಜಿಲ್ಲೆಯಲ್ಲಿ 110 ಚಾಲ ಕರು ವೇದಿಕೆಯಲ್ಲಿ ಸದಸ್ಯತ್ವ ಹೊಂದಿದ್ದಾರೆ. ಜಿಲ್ಲೆಯಿಂದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಮು ಮುಂದೆ ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಘಟನೆ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಆರ್ಟಿಓ ಅಧಿಕಾರಿ ನರಸೇಗೌಡ, ಚಂದ್ರಕಲಾ, ವೇದಿಕೆ ರಾಜ್ಯ ಗೌರವಾಧ್ಯಕ್ಷ ರಾಜು, ಉಪಾಧ್ಯಕ್ಷ ಸಂಗಪ್ಪ ಬಾಗಲಕೋಟೆ, ಪ್ರಧಾನ ಕಾರ್ಯದರ್ಶಿ ಇ.ಗಿರೀಶ್, ಜಂಟಿ ಕಾರ್ಯದರ್ಶಿ ರಾಜ್ಕುಮಾರ್, ಖಜಾಂಚಿ ನಾಗರಾಜು, ಸಂಘಟನಾ ಕಾರ್ಯದರ್ಶಿ ಯೋಗೇಶ್, ಸಹ ಸಂಘಟನಾ ಕರ್ಯದರ್ಶಿ ರಾಜು ಹಾಗೂ ಚಾಲಕರು ಉಪಸ್ಥಿತರಿದ್ದರು.
– ಸುರೇಶ್ ಎನ್.