ಚಿಕ್ಕಮಗಳೂರು-ಮೌಂಟೆನ್ ವ್ಯೂ ಶಾಲೆಯಲ್ಲಿ ಪರಿಸರ ದಿನಾಚರಣೆ

ಚಿಕ್ಕಮಗಳೂರು, ಜೂನ್ 06:- ವಿಶ್ವ ಪರಿಸರದ ದಿನದ ಅಂಗವಾಗಿ ಬಿರ್ಲಾ ಓಪಸ್ ವರ್ಣ ದಿ ಪೇಂ ಟ್ ಸ್ಟುಡಿಯೋ ವತಿಯಿಂದ ಶುಕ್ರವಾರ ನಗರದ ಮೌಂಟೇನ್ ವ್ಯೂ ಪಬ್ಲಿಕ್ ಸ್ಕೂಲ್‌ನಲ್ಲಿ ಸಸಿ ನೆಡುವ ಮೂ ಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ವರ್ಣ ದಿ ಪೇಂಟ್ ಸ್ಟುಡಿಯೋ ವ್ಯವಸ್ಥಾಪಕ ಧನಂಜಯಗೌಡ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅದಕ್ಕಾಗಿ ನಾವು ಶ್ರಮಿಸಬೇಕಿದೆ. ಹಾಗೂ ನಮ್ಮ ಬಿರ್ಲಾ ವಾಪಸ್ ವರ್ಣ ದಿ ಪೈಂಟ್ ಸ್ಟುಡಿಯೋದಲ್ಲಿ ಮಾರಾಟವಾಗುವ ಪ್ರತಿ 20 ಲೀಟರ್ ಬಕೇಟಿಗೆ ಒಂದು ಗಿಡ ನಡೆಯುವುದಾಗಿ ಸಂಕಲ್ಪ ಮಾಡಿ ಮೌಂಟನ್‌ವ್ಯೂ ಪಬ್ಲಿಕ್‌ಸ್ಕೂಲ್‌ನಿಂದ ಆರಂಭಿಸಲಾಗಿದೆ ಎಂದರು.

ಮೌಂಟೇನ್ ವ್ಯೂ ಪಬ್ಲಿಕ್ ಸ್ಕೂಲ್ ಮುಖ್ಯಸ್ಥೆ ಹಬೀಬಾ ಎನ್ ಪಾಷ ಮಾತನಾಡಿ ಪರಿಸರದ ಉಳಿವಿ ಗಾಗಿ ಯುವಪೀಳಿಗೆ ಶ್ರಮಿಸಬೇಕಿದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಶ್ರೀಮತಿ ಪ್ರೇಮಲತಾ ನಾಗರಾಜ್, ಬಿರ್ಲಾ ಓಪಸ್ ಸಂ ಸ್ಥೆಯ ಸ್ಥಳೀಯ ಮ್ಯಾನೇಜರ್ ಅಫ್‌ಶಾನ್ ಅಲಿ ಬೇಗ್, ವರ್ಣ ಡಿಪೆಂಡ್ ಸ್ಟುಡಿಯೋ ವ್ಯವಸ್ಥಾಪಕ ಮಂಡ ಳಿಯ ಸೈಯದ್ ತಾಜುದ್ದೀನ್, ಮೊಹಮ್ಮದ್ ಜಬ್ಬಾರ್ ಹಾಜರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *