ಬೇಲೂರು- ಪರಿಸರ ನಾಶದಿಂದಾಗಿ ಪ್ರಕೃತಿ ಮೇಲೆ ಹಲವು ರೀತಿಯ ತೊಂದರೆ ಗಳಾಗುತ್ತಿದ್ದು ಪರಿಸರ ಉಳಿಯಬೇಕಾದರೆ ಪ್ರತಿಯೊಬ್ಬರು ಜಮೀನು ಕೆರೆ ಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಕಡ್ಡಾಯವಾಗಿ ಗಿಡಗಳನ್ನು ನೆಟ್ಟು ಮರಗಳಾಗಿ ಪೋಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಬೇಲೂರು ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ್ ತಿಳಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ರವರ ಆದೇಶದ ಮೇರೆಗೆ ತಾಲೂಕಿನ ಬಿಕ್ಕೋಡು ಹೋಬಳಿ ಮಧಘಟ್ಟ ಗಾಂಧಾರ ಬುದ್ಧ ವಿಹಾರದ ಆವರಣದಲ್ಲಿ ವಿವಿಧ ಬಗೆಯ ನೂರಾರು ನೆರಳು ಹಾಗೂ ಹಣ್ಣುಗಳನ್ನು ನೀಡುವ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, ಮರ ಗಿಡಗಳು ಮನುಷ್ಯರ ಜೀವನಾಡಿ ಯಾಗಿವೆ ಮರಗಳನ್ನು ಬೆಳೆಸುವುದರಿಂದ ಮನುಷ್ಯನ ಉಸಿರಾಟಕ್ಕೆ ಬೇಕಾದಂತಹ ಶುದ್ಧವಾದ ಗಾಳಿ ನೀರನ್ನು ಪಡೆಯಬಹುದು ಪರಿಸರ ಉಳಿದರೆ ನಾವುಗಳು ನೆಮ್ಮದಿಯಿಂದ ಬದುಕಬಹುದು
ಪರಿಸರ ಇಲ್ಲದಿದ್ದರೆ ಮನುಷ್ಯರು ಆರೋಗ್ಯವಂತ ಜೀವನ ಮಾಡಲು ಸಾಧ್ಯವಿಲ್ಲ ವಾಗಿದ್ದು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕಾಗಿದೆ ಎಂದರು.

ನಂತರ ಮಾತನಾಡಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ತಾಲೂಕು ಅಧ್ಯಕ್ಷ ರವಿ ರಾಯಪುರ ಕಾಡಿದ್ದರೆ ನಾಡು ಮರವಿದ್ದರೆ ಮಳೆ ಎಂಬಂತೆ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸ ಬೇಕಾಗಿದೆ ಪ್ರಕೃತಿ ವಿಕೋಪ ದಿಂದಾಗಿ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಭೂಮಿಯಲ್ಲಿ ಜಲಚರಗಳು ಬತ್ತಿ ಹೋಗಿ ಕೆರೆ ಕಟ್ಟೆ ಹಳ್ಳ ಕೊಳ್ಳಗಳು ನೀರಿಲ್ಲದೆ ಕಾಡು ಪ್ರಾಣಿಗಳು ಸೇರಿದಂತೆ ಜನ ಜಾನುವಾರುಗಳಿಗೂ ನೀರಿನ ಭೀತಿ ಎದುರಾಗಿದೆ ಮನುಷ್ಯ ಆರೋಗ್ಯವಾಗಿರಲು ಪರಿಶುದ್ಧವಾದ ಗಾಳಿ ನೀರು ಆಹಾರ ಎಷ್ಟು ಮುಖ್ಯವೋ ಪರಿಸರದಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳು ಹಾಗೂ ಜೀವ ಸಂಕುಲಗಳು ಕೂಡ ಪರಿಸರವನ್ನು ಅವಲಂಬಿಸಿವೆ ಆಗಾಗಿ ಪರಿಸರ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದ್ದು ಗಿಡಗಳನ್ನು ನೆಟ್ಟು ಮರಗಳಾಗಿ ಬೆಳೆಸುವಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಹರೀಶ್ ಮೇಕೆದಾಟು. ವಿರೂಪಾಕ್ಷ ರಾವಣ್. ರಂಗಸ್ವಾಮಿ ಹುಣಸೆಕೆರೆ. ಮಂಜಪ್ಪ . ರವಿ.ಕುಮಾರ್ ಕೌರಿ. ಆನಂದ್. ವೇದಮೂರ್ತಿ. ರಮೇಶ್.ಅಣ್ಣಪ್ಪ . ಇತರರು ಹಾಜರಿದ್ದರು.
- ನೂರ್ ಅಹಮ್ಮದ್.