ಕೆ.ಆರ್.ಪೇಟೆ - ತಾಲೂಕಿನ ಬೂಕನಕೆರೆ ಹೋಬಳಿಯ ಮಡುವಿನಕೋಡಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಉಪಾಧ್ಯಕ್ಷೆ ರತಿ ಮಹದೇವ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ಬಯಸಿ ನಾಗರಾಜು ಹೊರತುಪಡಿಸಿ ಉಳಿದ ಯಾವ ಸದಸ್ಯರು ಉಮೇದಾರಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ಹೇಮಾವತಿ ನೀರಾವರಿ ಇಲಾಖೆಯ ನಂ.೫ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆನಂದ್ ಕಾರ್ಯನಿರ್ವಹಿಸಿದರು. ಸಹ ಚುನಾವಣಾಧಿಕಾರಿಯಾಗಿ ತಾ.ಪಂ.ವ್ಯವಸ್ಥಾಪಕ ಅನಿಲ್ಬಾಬು, ಪಿಡಿಓ ಎಂ.ಮಹೇಶ್, ಕಾರ್ಯದರ್ಶಿ ಎಂ.ಎನ್.ನಾಗರತ್ನ ಕಾರ್ಯನಿರ್ವಹಣೆ ಮಾಡಿದರು.

ನೂತನ ಉಪಾಧ್ಯಕ್ಷ ನಾಗರಾಜು ಮಾತನಾಡಿ ನಮ್ಮ ನಾಯಕರಾದ ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮಾರ್ಗದರ್ಶನದಲ್ಲಿ ಹಾಗೂ ಗ್ರಾ.ಪಂ. ಸದಸ್ಯರು ಮತ್ತು ನೌಕರರ ಸಹಕಾರದಿಂದ ನಮ್ಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಪ್ರೀತಿಭೈರನಾಯಕ್, ಸದಸ್ಯರಾದ ಮಂಜುನಾಥ್, ಬಸವರಾಜಪ್ಪ, ಎಂ.ಎಸ್.ಮAಜುನಾಥ್, ವಿಶಾಲಾಕ್ಷಿಪ್ರಕಾಶ್, ಡಿ.ಪಿ,ಶಿಬಾಫೀರ್ದೋಸ್, ಗೌರಮ್ಮ, ಮಂಜುಳ, ಚಂದ್ರಹಾಸ, ಎಚ್.ಎಸ್.ಶಿವಕುಮಾರ್, ಎಂ.ಜಿ.ರವಿಕುಮಾರ್, ಮುಖಂಡರಾದ ಗ್ರಾಮದ ನ್ಯಾಯ ಮಂಡಳಿ ಅಧ್ಯಕ್ಷ ಎಸ್.ಮಹೇಶ್, ಎಂ.ಪಿ ರಾಜು, ಬಿ.ಬಾಚಹಳ್ಳಿ ಎಲ್.ಐ.ಸಿ.ಯೋಗೇಂದ್ರ, ಎಂ.ವೈ ನಾಗರಾಜ್, ನಿಂಗರಾಜು, ಕೆಂಪರಾಜು, ಅಶೋಕ್, ಬಿ.ಬಾಚಹಳ್ಳಿ ಯೋಗೇಂದ್ರ, ಅಶೋಕ್, ನಾಗರಾಜು, ರಾಜು, ಡಿಸ್ ಮಹೇಶ್, ಪ್ರವೀಣ್, ನಾಗೇಶ್, ದೀಪು, ರಘು, ಸುರೇಶ್, ಮಹೇಂದ್ರ, ಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.