ಕೊರಟಗೆರೆ-ರೋಟರಿ ಕ್ಲಬ್ ವತಿಯಿಂದ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕೊರಟಗೆರೆ :- ತಾಲೋಕಿನ ಕಸಬಾ ಹೋಬಳಿಯ ಕೊರಟಗೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಕೊರಟಗೆರೆ ವತಿಯಿಂದ ಶಾಲೆಯ ವಿದ್ಯಾರ್ಥಿಗಳ ಜೊತೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ರೋಟರಿಯನ್ ಡಿ. ಟಿ‌. ಶ್ರೀನಿವಾಸ್ ಮೂರ್ತಿ ಮಾತನಾಡಿ: ಪರಿಸರ ನಾಶ ಮಾನವನ ವಿನಾಶ ಪರಿಸರ ಇದ್ದರೆ ನಾವು ಇಲ್ಲದಿದ್ದರೂ ಪರಿಸರ ಇರುತ್ತದೆ. ಆದರೆ ಮಾನವನ ಇದಕ್ಕೆ ಹೊರತಾಗಿ ಪರಿಸರ ನಾಶಕ್ಕೆ ಕಾರಣವಾಗಿದ್ದಾನೆ. ಆದ್ದರಿಂದ ನಾವು ಸಾಧ್ಯವಾದಷ್ಟು ಪರಿಸರ ಉಳಿಸುವುದಕ್ಕೆ ಪ್ರಯತ್ನ ಮಾಡೋಣ ಹಾಗೂ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರಲ್ಲ ಅದು ಪ್ರತಿನಿತ್ಯ ಸಸಿ ನೆಡುವ ಗಿಡಗಳನ್ನು ಪಾಲಿಸುವ ಪೂಜಿಸುವ ಕಾರ್ಯವಾಗಲಿ ಒಂದೊಂದು ಮಗು ಒಂದೊಂದು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಎಸ್. ವಿ. ಮಾತನಾಡಿ, ಪರಿಸರದಲ್ಲಿನ ಪ್ರತಿಯೊಂದು ಜೀವಿಯು ತನ್ನದೇ ಆದ ಜೀವನ ಗತಿಯನ್ನು ಪ್ರಕೃತಿಯೊಂದಿಗೆ ಕಂಡುಕೊಂಡು ಇನ್ನೊಂದು ಜೀವಿ ಅಥವಾ ವಾಸಿಸುವ ಪರಿಸರ ಭಾಗಕ್ಕೆ ದಕ್ಕೆಯನ್ನುಂಟು ಮಾಡದಂತೆ ಬದುಕುತ್ತವೆ. ಆದರೆ ಮಾನವ ಇದಕ್ಕೆ ಒರತಾಗಿ ಪರಿಸರ ನಾಶಕ್ಕೆ ಕಾರಣವಾಗುತ್ತಾನೆ. ಇನ್ನಾದರೂ ಹಾಗೂ ಶುದ್ಧ ಗಾಳಿಯಿಂದ ಜೀವಸಂಕುಲದ ಅಸ್ತಿತ್ವ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ಅತ್ಯಂತ ಶುದ್ಧ ಗಾಳಿಯೇ ಮೂಲಾಧಾರ ಹಾಗೂ ಸಸಿ ನೆಟ್ಟರೆ ಸಾಲದು ಸಂರಕ್ಷಿಸಬೇಕು ಮಾನವನ ದುರಾಸೆಗೆ ಅರಣ್ಯ ನಾಶ ಮಾಡುತ್ತಿದ್ದು. ಇದರಿಂದ ಜಾಗತಕ ತಾಪಮಾನ ಹೆಚ್ಚುತ್ತದೆ‌. ಇದನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕು ಇದಕ್ಕಾಗಿ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿಯನ್ ಗಳಾದ ಮಂಜುನಾಥ್ ಎ. ಜಿ, ಮಲ್ಲೆಶಯ್ಯ ಕೆ. ನರಸಿಂಹಮೂರ್ತಿ ವಿ.ಕೆ. ನರಸಿಂಹಮೂರ್ತಿ ಎನ್. ಆರ್. ಭಾಗವಹಿಸಿದರು ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.

  • ನರಸಿಂಹಯ್ಯ

Leave a Reply

Your email address will not be published. Required fields are marked *