ಶ್ರೀ ಕನಕ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಯ ಸಂಪೂರ್ಣ ಹೊಣೆ ಹೊತ್ತ ಶಾಸಕ ಸ್ವರೂಪ್- ಸಂಘದಿಂದ ಶಾಸಕರಿಗೆ ಕೃತಜ್ಞತಾ ಸನ್ಮಾನ

ಹಾಸನ: ಶ್ರೀ ಕನಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಇತ್ತೀಚೆಗಷ್ಟೆ ಗುದ್ದಲಿ ಪೂಜೆ ನೆರವೇರಿದ್ದು, ಈ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಅವರು ವಹಿಸಿರುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಅವರ ಈ  ಸಹಕಾರ ನಡೆ, ಸಂಘದ ಬೆಳವಣಿಗೆಗೆ ಅವರು ನೀಡುತ್ತಿರುವ ನಿಷ್ಠೆಯ ಸಂಕೇತವಾಗಿದೆ. ಈ ನೆರವಿಗೆ ಸಂತಸ ವ್ಯಕ್ತಪಡಿಸಿದ ಸಂಘದ ಪದಾಧಿಕಾರಿಗಳು ಶಾಸಕರಿಗೆ ಕೃತಜ್ಞತೆ ಸಲ್ಲಿಸಿ, “ಸಂಘದ ಅಭಿವೃದ್ಧಿಯತ್ತ ಅವರ ದಿಟ್ಟ ಹೆಜ್ಜೆ ನಮಗೆ ಪ್ರೇರಣಾದಾಯಕವಾಗಿದೆ,” ಎಂದು ಶ್ಲಾಘಿಸಿದ್ದು, ಶ್ರೀ ಕನಕ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿಂದು ಅಧ್ಯಕ್ಷ ಸಂತೋಷ ಸಿ.ಆರ್ ಅವರ ಅಧ್ಯಕ್ಷತೆಯಲ್ಲಿ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಿ, ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಈ ವೇಳೆ  ಶಾಸಕರು ಮಾತನಾಡಿ, ಸಹಕಾರ ಸಂಘಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ, ನೂತನ ಕಟ್ಟಡದಿಂದ ಸದಸ್ಯರಿಗೆ ಉತ್ತಮ ಸೇವೆಗಳು ಒದಗಲು ಸಹಾಯವಾಗಲಿದೆ ಎಂದು ಆಶಯವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನವಿಲೆ ಅಣ್ಣಪ್ಪ, ಕೃಷ್ಣೇಗೌಡ, ಕೇಶವಮೂರ್ತಿ, ನಾಗರಾಜು ಮಂಗಳಪುರ, ಕೆ.ಎಂ.ಎಫ್ ಸುರೇಶ್‌, ದಿವಾಕರ್ ಗೌಡ್ರು, ಪ್ರಸನ್ನ ಕುಮಾರ್, ಬನವಾಸೆ ಸತೀಶ್‌ , ಗಿರೀಶ್‌, ಹೇಮಂತ ಕುಮಾರ್‌ ತಾತ ನಳ್ಳಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

– ಮಾಲಾ, ಹಾಸನ.

Leave a Reply

Your email address will not be published. Required fields are marked *