ತುಮಕೂರು: ವಕೀಲರು ಮತ್ತು ನ್ಯಾಯಾಧೀಶರು ನ್ಯಾಯಾಂಗವೆಂಬ ರಥದ ಎರಡು ಗಾಲಿಗಳು,ಕಿರಿಯ ವಕೀಲರಿಗೆ ನ್ಯಾಯಾಧೀಶರು ಸೂಕ್ತ ಕಾನೂನು ತಿಳುವಳಿಕೆ ನೀಡಿ ತಮ್ಮ ವೃತ್ತಿ ಪಥದಲ್ಲಿ ಯಶಸ್ವಿ ವಕೀಲರಾಗಿ ಬೆಳೆಯಲು ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು, ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯನವರು ತಿಳಿಸಿದರು.
ಅವರು ಅವರು ಇಂದು ಜಿಲ್ಲಾ ವಕೀಲರ ಸಂಘದಲ್ಲಿ ನೂತನವಾಗಿ ತುಮಕೂರಿಗೆ ವರ್ಗಾವಣೆ ಆಗಿ ಬಂದಿರುವ ನ್ಯಾಯಾಧೀಶರ ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಜಿಲ್ಲಾ ನ್ಯಾಯಾಲಯದಲ್ಲಿ 1900 ಜನ ವಕೀಲರಿದ್ದೇವೆ ದಿನೇ ದಿನೇ ವಕೀಲರ ಸಂಖ್ಯೆ,ನ್ಯಾಯಾಲಯಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ ಕೇಸುಗಳ ಸಂಖ್ಯೆಯು ಹೆಚ್ಚುತ್ತಿದೆ. ಇದಕ್ಕೆ ಸೂಕ್ತ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳು ಬೇಕು,ಇನ್ನು ಕೆಲವೇ ದಿನಗಳಲ್ಲಿ ವಕೀಲರ ಸಂಘದ 3ನೇ ಮಹಡಿಗೆ ಶಂಕುಸ್ಥಾಪನೆ ಆಗಲಿದೆ.

ಹೊಸ ನ್ಯಾಯಾಲಯ ಕಟ್ಟಲು ಮಾನ್ಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಕನಿಷ್ಠ 25 ಎಕರೆ ಜಮೀನು ನೀಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ,ಇದರ ಬಗ್ಗೆ ಲೋಕಾಯುಕ್ತರಲ್ಲಿ ಸಹ ಮನವಿ ಮಾಡಿದ್ದು ಅದಕ್ಕೆ ಜಿಲ್ಲಾಡಳಿತ ಸ್ಪಂದಿಸುವ ಭರವಸೆ ಇದೆ ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಮಾತನಾಡಿ, ನೂತನವಾಗಿ ವರ್ಗಾವಣೆ ಆಗಿ ಬಂದಿರುವ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯದು ಹಾಗೆಯೇ ಅವರು 3 ವರ್ಷ ಇಲ್ಲಿ ಕೆಲಸ ಮಾಡಿ ಬೇರೆಡೆ ವರ್ಗಾವಣೆ ಆಗಿ ಹೋಗುವ ಸಂದರ್ಭದಲ್ಲಿ ಸಹ ಅವರಿಗೆ ವಕೀಲರು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಅವರ ಸಾಧನೆಗಳ ಬಗ್ಗೆ ತಪ್ಪು-ಒಪ್ಪುಗಳ ಬಗ್ಗೆ ತಿಳಿ ಹೇಳಬೇಕು ಇದು ನಿಮ್ಮ ಜವಾಬ್ದಾರಿ,ವಕೀಲರು ಕಕ್ಷಿದಾರರ ಪ್ರತಿನಿಧಿಗಳಾಗಿ ಕೇಸುಗಳನ್ನು ನಿರ್ವಹಿಸುವಾಗ ಚೆನ್ನಾಗಿ ಓದಿಕೊಂಡು ಬಂದು ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಿದಾಗ ನ್ಯಾಯಾಧೀಶರು ಒಳ್ಳೆಯ ತೀರ್ಪು ಬರೆಯಲು ಸಹಾಯವಾಗುತ್ತದೆ .ಎಂದರು ವಕೀಲರಿಗೆ ಕಿವಿ ಮಾತು ಹೇಳುತ್ತಾ ,ಹಿರಿಯ ವಕೀಲರಿಗೆ ನ್ಯಾಯಾಧೀಶರು ಗೌರವ ನೀಡಬೇಕು ಕಿರಿಯ ವಕೀಲರಿಗೆ ಬೆಂಬಲ ನೀಡಿ ಎಂದು ನ್ಯಾಯಾಧೀಶರಿಗೆ ಮಾರ್ಗದರ್ಶನ ನೀಡಿದರು.ಕಿರಿಯ ವಕೀಲರು ಸದಾ ಓದಬೇಕು,ಜ್ಞಾನವನ್ನು ಹೆಚ್ಚು ಮಾಡಿಕೊಳ್ಳಲು ಸದಾ ಓದಬೇಕು,ವಾದ ಪತ್ರವನ್ನು ತಾವೇ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಹಾಕಬೇಕು ಎಂದು ತಿಳಿಸಿದರು.

ನೂತನ ನ್ಯಾಯಾಧೀಶರುಗಳಾದ ಪ್ರಕಾಶ್ ಸಂಗಪ್ಪ ಹೆಳವರ್,ನರಸಮ್ಮ,ಶಿಲ್ಪ.ಕೆ.ಎಸ್,ಸುನಿಲ್.ಎಸ್.ಹೊಸ್ಮನಿ, ಮಂಜುಳಾ.ಡಿ ,ಪ್ರಿಯಾಂಕ .ಬಿ,ಲಕ್ಷ್ಮೀಶಶರ್ಮ.ಎನ್,ಕೋನಪ್ಪ.ಎನ್.ವಿ,ಸಚಿನ್.ಪಿ.ಎಂ,ವಕೀಲರ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಎಂ.ಎಲ್.ರವಿಗೌಡ,ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ,ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ,ಖಜಾಂಚಿ ಸಿಂಧು.ಬಿ.ಎಂ. ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಗೋವಿಂದರಾಜು.ಪಿ, ಡಿ.ಎ.ಜಗದೀಶ್,ಶ್ರೀನಿವಾಸಮೂರ್ತಿ.ಕೆ.ವಿ.ಶ್ರೀನಿವಾಸಮೂರ್ತಿ ವಿ.ಕೆ,ಸುರೇಶ್.ಎಸ್, ಪದ್ಮಶ್ರೀ.ಸಿ.ಆರ್.ಸೇವಾಪ್ರಿಯ. ಜೆ.ಎಸ್.ನ್ಯಾಯಾಧೀಶರುಗಳು,ಹಿರಿಯ,ಕಿರಿಯ,ಮಹಿಳಾ ವಕೀಲರುಗಳು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ