ಚಿಕ್ಕಮಗಳೂರು, ಜೂನ್ 12:- ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಪ್ರಪ್ರಥಮ ತಾಲ್ಲೂಕು ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಗೊಂಡ ಲಕ್ಷ್ಮಿ ಶ್ಯಾಮಾರಾವ್ ಅವರಿಗೆ ಕನ್ನಡಸೇನೆ ಹಾಗೂ ಕಾಳಿದಾಸ ನಗರ ಕ್ಷೇಮಾಭಿವೃದ್ದಿ ಸಂಘವು ಬುಧವಾರ ಸಂಜೆ ಸ್ವಗೃಹಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಕಾಳಿದಾಸ ನಗರ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ಜಯಪ್ರಕಾಶ್, ಸ್ಥಳೀಯರಾದ ಚೇತನ್, ರಾಜು, ಮಂಜಪ್ಪ ನವೀನ್ ಇದ್ದರು.
- ಸುರೇಶ್ ಎನ್.