ಚಿಕ್ಕಮಗಳೂರು- ಕಸಾಪ ಐದನೇ ಸಮ್ಮೇಳನದ ಲೆಕ್ಕಪತ್ರ ಮಂಡನೆ

ಚಿಕ್ಕಮಗಳೂರು, ಜೂನ್ 13:- ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಐದನೇ ತಾಲ್ಲೂಕು ಸಮ್ಮೇಳನ ದ ಲೆಕ್ಕಪತ್ರ ಮಂಡನೆಯ ಸಭೆಯನ್ನು ಗುರುವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿತ್ತು.

ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಲೆಕ್ಕಪತ್ರ ಮಂಡಿಸಿ ಮಾತನಾಡಿ ಸಮ್ಮೇಳನಕ್ಕೆ ದಾನಿ ಗಳಿಂದ ಸಂಗ್ರಹವಾದ ಹಣ 5,28,250/- ರೂ.ಗಳಾಗಿದ್ದು 5,70,625/- ರೂಗಳು ಕಾರ್ಯಕ್ರಮಕ್ಕೆ ವೆಚ್ಚ ಗುಲಿದೆ. ಈ ಪೈಕಿ 42,375/- ರೂ.ಗಳ ಹೆಚ್ಚುವರಿಯಾಗಿದೆ. ಪ್ರಸ್ತುತ ಸಮ್ಮೇಳನಕ್ಕೆ ನಿರೀಕ್ಷಿತವಾಗಿ 64000 ರೂ.ಗಳು ಬಾಕಿ ಬರಬೇಕಾಗಿದೆ ಎಂದರು.

ಲೆಕ್ಕಪತ್ರ ಮಂಡನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಲ್.ಮೂರ್ತಿಯವರ ಸೂಕ್ತ ಸಲಹೆ, ಸಹಕಾರ ಮತ್ತು ಮಾರ್ಗದರ್ಶನದಿಂದ ಸಮ್ಮೇಳನ ಎರಡು ದಿನಗಳ ಕಾಲ ಯಶಶ್ವಿಯಾಗಿ ಜರುಗಲು ಸಾಧ್ಯವಾಯಿತು ಎಂದರು.

ಈ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸಂಸ್ಕೃತಿ ಚಿಂತಕಿ ರೇಖಾ ಹುಲಿಯಪ್ಪಗೌಡ, ಕೋಶಾಧ್ಯಕ್ಷ ಹೆಚ್.ಸಿ.ನಟರಾಜ್, ತಾಲೂಕು ಕ.ಸಾ.ಪ. ಕಾರ್ಯದರ್ಶಿಗಳಾದ ವೀರೇಶ್ ಕೌಲಗಿ, ಹೆಚ್. ಆರ್.ಕಾಂತರಾಜ್, ಕಸಾಪ ಮಹಿಳಾಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಮುಖಂಡರುಗಳಾದ ವಿಶ್ವನಾಥ್, ಜಗದೀಶ್, ರೂಪನಾಯ್ಕ್, ವೀಣಾಮಲ್ಲಿಕಾರ್ಜುನ್ ಹಾಗೂ ಪದಾಧಿಕಾರಿಗಳು, ಸದಸ್ಯರು ಇದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *