ಚಿಕ್ಕಮಗಳೂರು-ಸೆಲ್ಕೋ ಸೋಲಾರ್ ಇಂಡಿಯಾ ಸಂಸ್ಥೆಗೆ ಆಸ್ಕರ್ ಪ್ರಶಸ್ತಿ- ಜಿಲ್ಲಾ ಸೆಲ್ಕೊ ಸೋಲಾರ್ ಇಂಡಿಯಾ ಸಂಸ್ಥೆಯ ಹಿರಿಯ ವ್ಯವಸ್ಥಾಪಕದ ಯಾನಂದ್ ನಾಯ್ಕ್

ಚಿಕ್ಕಮಗಳೂರು, ಜೂನ್ 13:- ಪ್ರಸಕ್ತ ಸಾಲಿನಲ್ಲಿ ಸೆಲ್ಕೊ ಸೋಲಾರ್ ಇಂಡಿಯಾ ಸಂಸ್ಥೆಗೆ ಪ್ರತಿಷ್ಟಿತ ಗ್ರೀನ್ ಆಸ್ಕರ್ ಎಂದು ಕರೆಯಲ್ಪಡುವ ಅಶ್ಡೆನ್ ಪ್ರಶಸ್ತಿ ಲಭಿಸಿದ್ದು ಮೂರನೇ ಬಾರಿಗೆ ಈ ಪ್ರಶಸ್ತಿ ಸೆಲ್ಕೊ ತನ್ನದಾಗಿಸಿಕೊಂಡಿದೆ ಎಂದು ಜಿಲ್ಲಾ ಸೆಲ್ಕೊ ಸೋಲಾರ್ ಇಂಡಿಯಾ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ದ ಯಾನಂದ್ ನಾಯ್ಕ್ ತಿಳಿಸಿದ್ದಾರೆ.

ಲಂಡನ್‌ನಲ್ಲಿ ಜೂ.11 ರಂದು ನಡೆದ ಸಮಾರಂಭದಲ್ಲಿ ಸೆಲ್ಕೊ ಸೋಲಾರ್ ಇಂಡಿಯಾ ಸಂಸ್ಥೆಗೆ ಲಿಂ ಕ್ಡ್ ಇನ್ ಎಂಟರ್‌ಪ್ರೆöÊಸ್ ಅಕೌಂಟ್ ಡೈರೆಕ್ಟರ್ ಮತ್ತು ಗೋ ಗ್ರೀನ್ ಲೀಡ್‌ನ ಮುಖ್ಯಸ್ಥ ಕ್ರಿಸ್ ಬೆನೆಟ್ ಈ ಪ್ರಶಸ್ತಿಯನ್ನು ಸೆಲ್ಕೊ ಸಿಇಓ ಮೋಹನಹೆಗಡೆ ಮತ್ತು ಡಿಜಿಎಂ ಸುದೀಪ್ತ ಘೋಷ್ ಅವರಿಗೆ ಪ್ರಧಾನ ಮಾಡಿದರು.

2005 ಮತ್ತು 2007ರಲ್ಲಿ ಸೆಲ್ಕೋ ಸಂಸ್ಥೆಗೆ ಆಶ್ಡೆನ್ ಪ್ರಶಸ್ತಿ ಲಭಿಸಿದ್ದು 25ನೇ ವರ್ಷದ ಗೌರವವನ್ನು ಮುಡಿಗೇರಿಸಿಕೊಂಡ ಸೆಲ್ಕೊ ಸಾಧನೆಯಿಂದಾಗಿ ಭಾರತದ ಪರಿಸರ ಕ್ಷೇತ್ರವೇ ಹೆಮ್ಮೆಪಡುವಂತಾಗಿದೆಂದರು.

ಸಂಸ್ಥೆ 1995ರಲ್ಲಿ ಡಾ.ಹರೀಶ್ ಹಂದೆ, ನೆವಿಲ್ಲೆ ವಿಲಿಯಮ್ಸ್ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ರಾಜ್ಯ ದಲ್ಲಿ ಮನೆಗಳಿಗೆ ಸೌರಬೆಳಕು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡುವಲ್ಲಿ ಸಂಸ್ಥೆಯ ಪಾತ್ರ ಮಹತ್ವದ್ದಾ ಗಿದೆ. ಆಂಧ್ರಪ್ರದೇಶ, ಬಿಹಾರ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಹಸಿರು ಇಂಧನ ಲಭ್ಯವಾಗು ವಂತೆ ಶ್ರಮಿಸುತ್ತಿದೆ. ಈವರೆಗೆ 6 ಲಕ್ಷ ಕ್ಕೂ ಅಧಿಕ ಸೌರ ಉತ್ಪನ್ನಗಳು ಮಾರಾಟವಾಗಿದೆ ಎಂದರು.

24 ಸಾವಿರ ಕ್ಕೂ ಹೆಚ್ಚು ಸೌರ-ಜೀವನೋಪಾಯ ವ್ಯವಸ್ಥೆಗಳು ಗ್ರಾಮೀಣ ಜನರಿಗೆ ದೊರೆತಿದೆ. ಐದು ಲಕ್ಷಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥೀಗಳಿಗೆ ಅನುಕೂಲವಾಗುವಂತೆ ಸೌರಶಕ್ತಿ ಚಾಲಿತ ಡಿಜಿಟಲ್ ತರಗತಿ ಕೊಠಡಿಗಳನ್ನು ರೂಪಿಸಿದೆ. 60 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುವ ಸರ್ಕಾರಿ ಆರೋಗ್ಯ ಕೇಂದ್ರ ಗಳ್ಲಿ ಸೌರವಿದ್ಯುತ್ ಅಳವಡಿಸಲಾಗಿದೆ ಎಂದರು.

ಸೆಲ್ಕೋ ಸಿಇಓ ಮೋಹನ ಹೆಗ್ಡೆ ಮಾತನಾಡಿ ಸಂಸ್ಥೆ ಪರ್ಯಾಯ ಇಂಧಿನ ಶಕ್ತಿ ಬಳಕೆಗೆ ಒತ್ತು ನೀಡಿದೆ. ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದೇವೆ. ಆಡಳಿತ ಮಂಡಳಿ, ಸಹೋದ್ಯೋಗಿಗಳಿಗೆ ಆರ್ಥಿಕ, ಸಾಮಾಜಿಕ ಮತ್ತು ವ್ಯವಹಾರಿಕ ಬಂಧುಗಳಿಗೆ, ಮಾರ್ಗದರ್ಶನ ಮಾಡಿದ ಎಲ್ಲರಿಗೂ ಪ್ರಶಸ್ತಿ ಅರ್ಪಿಸಲಾಗಿದ್ದು ಸೌರವಿದ್ಯುತ್ ಬಳಕೆ, ಪ್ರಯೋಗ, ಪ್ರಚಾರಕ್ಕೆ ಬೆಂಬಲ ನೀಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೃತ ಜ್ಞತೆ ಸಲ್ಲಿಸಿದ್ದಾರೆ.

  • ಸುರೇಶ್‌ ಎನ್.

Leave a Reply

Your email address will not be published. Required fields are marked *