ಚಿಕ್ಕಮಗಳೂರು, ಜೂನ್ 13:- ರಾಜ್ಯದ ಜನತೆಯ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳು ತಾಲ್ಲೂಕಿನಲ್ಲಿ ಅತ್ಯಂತ ಯಶಸ್ವಿಪೂರ್ಣವಾಗಿದೆ ಎಂದು ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಗ್ಯಾರಂಟಿ ಯೋಜನೆ ಗಳ ಅನುಷ್ಟಾನ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗೃಹಲಕ್ಷ್ಮಿ ಯೋಜನೆಯಿಂದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರದಂತೆ 59112 ಫಲಾನುಭವಿಗಳಿಗೆ ಪ್ರತಿ ತಿಂಗಳು 11.82 ಕೋಟಿ ಹಣವನ್ನು ಮದ್ಯವರ್ತಿಗಳಿಲ್ಲದೆ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ 2023 ರಿಂದ 2025ರ ಏಪ್ರಿಲ್ ಮಾಹೆತನಕ ಉಚಿತ 200 ಯುನಿಟ್ ವಿದ್ಯುತ್ಗೆ ಮೆಸ್ಕಾಂ ಇಲಾಖೆಗೆ ರಾಜ್ಯಸರ್ಕಾರ ಒಟ್ಟು 2048 ಲಕ್ಷಗಳು ಭರಿಸುವ ಮೂಲಕ ನುಡಿದಂತೆ ನಡೆ ಯುತ್ತಿದೆ. ಶಕ್ತಿಯೋಜನೆಯಡಿ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಮೂರು ವಿಭಾಗಗಳಿಂದ 81.32 ಲಕ್ಷ ಮಹಿಳೆಯರು ಪ್ರಯಾಣ ಬೆಳೆಸಿ ಯೋಜನೆ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು.
ಹಸಿವುಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಅನ್ನಭಾಗ್ಯ ಯೋಜನೆ ರೂಪಿಸಿದ್ದು ಇದರಂತೆ ತಾಲ್ಲೂಕಿನಲ್ಲಿ ಆರಂಭದಿಂದ ಕಳೆದ ಡಿಸೆಂಬರ್ ಮಾಹೆತನಕ 2.49 ಕೋಟಿ ಹಣವನ್ನು ಅಕ್ಕಿ ಬದಲು ಹಣ ಸಂದಾಯಿಸಿತ್ತು. ಜನವರಿಯಿಂದ ಹಣದ ಬದಲು ಅಕ್ಕಿಯನ್ನೇ ನೇರವಾಗಿ ವಿತರಿಸುತ್ತಿದೆ. ಯುವನಿಧಿ ಯೋಜನೆಯಡಿ ಒಟ್ಟಾರೆ ತಾಲ್ಲೂಕಿನಲ್ಲಿ 6900 ನಿರುದ್ಯೋಗಳಿಗೆ 1.82 ಕೋಟಿ ಹಣ ನೀಡಲಾಗಿದೆ ಎಂದು ಹೇಳಿದರು.
ಮಧ್ಯವರ್ತಿಗಳ ಹಾವಳಿ ಇಲ್ಲದೆ ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪುತ್ತಿರುವುದು ಖುಷಿಯ ವಿಷಯ. ಗ್ಯಾರಂಟಿ ಯೋಜನೆಗಳ ಅನುಕೂಲದ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ಕಾರ್ಯ ಕ್ರಮಗಳನ್ನು ಏರ್ಪಡಿಸಿ ಸಾಧಕ-ಬಾಧಕಗಳ ಬಗ್ಗೆ ಅರಿವು ಮೂಡಿಸುತ್ತೇವೆ ಎಂದು ತಿಳಿಸಿದರು.

ತಾ.ಪಂ. ಸಿಇಓ ವಿಜಯಕುಮಾರ್ ಮಾತನಾಡಿ ಬಡವರ ಕಲ್ಯಾಣಕ್ಕಾಗಿ ರಾಜ್ಯಸರ್ಕಾರ ರೂಪಿಸಿರುವ ಪಂಚಗ್ಯಾರಂಟಿಗಳು ಸಾರ್ವಜನಿಕರಿಗೆ ಎಲ್ಲೂ ತೊಂದರೆಯಾಗದಂತೆ ಕ್ರಮ ವಹಿಸುವುದು ಅಧಿಕಾರಿಗಳ ಕರ್ತವ್ಯ. ಹೀಗಾಗಿ ಅಧಿಕಾರಿ ವೃಂದ ಹೆಚ್ಚು ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಅನ್ಸ ರ್ಆಲಿ, ಗೌಸ್ಮೊಹಿಯುದ್ದೀನ್, ನಾಗೇಶ್ಅರಸ್, ಧರ್ಮಯ್ಯ, ಕೃಷ್ಣ, ಜಯಂತಿ ಶಿವಾಜಿ, ವಿಂದ್ಯಾ, ನರೇಂದ್ರ, ಪುನೀತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
- ಸುರೇಶ್ ಎನ್.