ತುಮಕೂರು: ನಗರದ ಹನುಮಂತಪುರದಲ್ಲಿ ಅಗ್ನಿಕುಲ ತಿಗಳ ಜನಾಂಗದಿಂದ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಎಸ್.ಕೆ.ಪಾರ್ಟಿ ಹಾಲ್ ಅನ್ನು ಮಾಜಿ ಸಂಸದ ಜಿ.ಎಸ್.ಬಸವರಾಜು ಶುಕ್ರವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಸಮಾಜದ ಮುಖಂಡರು ಒಗ್ಗಟ್ಟಾದರೆ ಇಂತಹ ಸಮಾಜಕ್ಕೆ ಸಹಾಯವಾಗುವ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯ.ತಾವು ಸಂಸದರಾಗಿದ್ದ ಅವಧಿಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 25 ಲಕ್ಷ ರೂ.ಕೊಟ್ಟಿದ್ದು, ತಿಗಳ ಸಮಾಜದವರು ಹಣವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರು.

ಇದರ ಅಂಗವಾಗಿ ಬೆಳಿಗ್ಗೆ ವಿವಿಧ ಪೂಜಾ, ಹೋಮ, ಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ತಿಗಳ ಸಮಾಜದ ಯಜಮಾನರುಗಳಾದ ಟಿ.ಹೆಚ್.ಹನುಮಂತರಾಜು, ಶಿವಕುಮಾರ್, ಕಡಬ ದಾಸೇಗೌಡರು, ತುರುವೇಕೆರೆಕೃಷ್ಣಪ್ಪ, ಕುಣಿಗಲ್ ಮಂಜಣ್ಣ, ಗಂಗಹನುಮಯ್ಯ, ಜಗದೀಶ್, ಸಮಾಜದ ಹಿರಿಯರಾದ ಟಿ.ಎಲ್.ಕುಂಭಯ್ಯ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಮುಖಂಡ ಎನ್.ಎಸ್.ಶಿವಣ್ಣ, ಮಹಾನಗರಪಾಲಿಕೆ ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಮಾಜಿ ಸದಸ್ಯರಾದ ಎ.ಶ್ರೀನಿವಾಸ್,ಟಿ.ಹೆಚ್.ಜಯರಾಂ, ಟಿ.ಹೆಚ್.ವಾಸುದೇವ್, ಜಹಂಗೀರ್ರವೀಶ್, ಗಂಗಣ್ಣ, ನಟರಾಜ್, ಮಾರುತಿ, ಯೋಗೀಶ್, ಶ್ರೀನಿವಾಸ್ ಸೇರಿದಂತೆ ತಿಗಳ ಸಮಾಜದ ಹಲವು ಮುಖಂಡರು, ಆಣೆಕಾರರು, ವಿವಿಧ ಸಮಾಜಗಳ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾಮಕರಣ, ನಿಶ್ಚಿತಾರ್ಥ, ಸಭೆ, ಸಮಾರಂಭ, ಮತ್ತಿತರ ಕೌಟುಂಬಿಕ, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ 300 ಜನ ಕುಳಿತುಕೊಳ್ಳಬಹುದಾದ,ಅನುಕೂಲಕರವಾದ ಸುಸಜ್ಜಿತ ಎಸ್.ಕೆ.ಪಾರ್ಟಿ ಹಾಲ್ ಸಿದ್ಧವಾಗಿದೆ. ಲಿಫ್ಟ್ ಸೇರಿದಂತೆ ಅಗತ್ಯ ಎಲ್ಲಾ ಸೌಲಭ್ಯವಿದೆ.ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಸಮಾಜದ ಮುಖಂಡರಾದ ಟಿ.ಎಲ್.ಕುಂಭಯ್ಯ ಮನವಿ ಮಾಡಿದ್ದಾರೆ.
- ಕೆ.ಬಿ.ಚಂದ್ರಚೂಡ