ಚಿಕ್ಕಮಗಳೂರು ಜೂನ್ 14- ಆರೋಗ್ಯಯುಕ್ತ ಪರಿಸರ ನಿರ್ಮಾಣ ಇಂದಿನ ಅಗತ್ಯ. ಪ್ರಕೃತಿ ಹಾಗೂ ಮಾನವರ ನಡುವಿನ ಬಾಂಧವ್ಯ ಬೆಸೆಯುವಲ್ಲಿ ಪಂಚಪೀಠಗಳು ಅನಾದಿಕಾಲದಿಂದಲೂ ಆಸಕ್ತಿವಹಿಸಿವೆ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದರು.
ಮಾಧ್ಯಮಸಂಸ್ಕೃತಿ ಪ್ರತಿಷ್ಠಾನ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದ ಆವರಣದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ‘ಹಸಿರು’ ಕಾರ್ಯಕ್ರಮದಲ್ಲಿ ಹಣ್ಣಿನ ಸಸಿಗಳನ್ನು ಅವರು ವಿತರಿಸಿದರು.
ಧರ್ಮ ಮತ್ತು ಪ್ರಕೃತಿಯ ನಡುವೆ ಅವಿನಾಭವ ಸಂಬಂಧವಿದೆ. ಪರಿಸರ ಸಂರಕ್ಷಣೆ ಧಾರ್ಮಿಕಾಚರಣೆ ಭಾಗವಾಗಿದೆ. ಬಿಲ್ವಪತ್ರೆ, ಅಶ್ವಥವೃಕ್ಷ, ಬನ್ನಿಮರ ಸೇರಿದಂತೆ ಮಾನವನಿಗೆ ಉಪಯುಕ್ತವಾದ ಹತ್ತುಹಲವು ಗಿಡಮರಗಳನ್ನು ದೈವಿಕಭಾವನೆಯಿಂದ ನೋಡುವ ಆಚರಣೆ ಇದೆ. ದೇವರಕಾಡು ಸೇರಿದಂತೆ ವಿವಿಧ ಕಾರಣಗಳಿಂದ ವನಗಳ ಸಂರಕ್ಷಣೆ ಮಾಡಿಕೊಂಡು ಬರಲಾಗಿದೆ ಎಂದರು.

ಪೃಥ್ವಿಯ ಹಸಿರುಕ್ರಾಂತಿ ಮೂಲ ರೇಣುಕ ಭಗವತ್ಪಾದರು. ಯುಗದ ಆದಿಯಲ್ಲಿ ಆವೀರ್ಭವಿಸಿದ ಶ್ರೀಜಗದ್ಗುರು ರೇಣುಕಾಚಾರ್ಯರು ಮನುಕುಲಕ್ಕೆ ಉತ್ತುವ-ಬಿತ್ತುವ, ಉಣ್ಣುವ-ಉಡುವ ಸಂಸ್ಕೃತಿಯನ್ನು ಕಲಿಸಿದವರು. ಗೆಡ್ಡೆಗೆಣಸು ಹಸಿಯಾಗಿ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದ ಕಾಲಘಟ್ಟದಲ್ಲೆ ಕೃಷಿಸಂಸ್ಕೃತಿಯನ್ನು ಕಲಿಸಿಕೊಟ್ಟವರು. ನಾಗರಿಕ ಬದುಕಿಗೆ ಅಂಕುರಾರ್ಪಣೆ ಮಾಡಿದವರು. ಇಂದಿನ ಆಂಧ್ರಪ್ರದೇಶ ಕೊಲ್ಯನುಪಾಕಿ ಶ್ರೀಸೋಮೇಶ್ವರ ಲಿಂಗದಲ್ಲಿ ಆವಿರ್ಭವಿಸಿ ಮನುಕುಲಕ್ಕೆ ಬಾಳಿಬದುಕುವ ಮಾರ್ಗದರ್ಶನ ಮಾಡಿದ ಮೂಲ ಪುರುಷರೆಂದರು.
ಶ್ರೀ ರೇಣುಕರು, ರೇವಣಸಿದ್ದರು ಸೇರಿದಂತೆ ಶ್ರೀಪೀಠದ ಪೂರ್ವಾಚಾರ್ಯರು ಕೆರೆಕಟ್ಟೆಗಳ ನಿರ್ಮಾಣ, ವನಸ್ಪತಿ ವನಗಳು ಸೇರಿದಂತೆ ಹಸಿರು ಹೆಚ್ಚಿಸಲು ಪ್ರೇರಣೆ ನೀಡಿರುವುದು ಇತಿಹಾಸ. ಪೂಜೆ, ಧಾರ್ಮಿಕ ಸಮಾರಂಭಗಳ ಸಂದರ್ಭಗಳಲ್ಲಿ ಸವಿನೆನಪಿಗಾಗಿ ಸಸಿನೆಡುವ ಸಂಪ್ರದಾಯ ಶ್ರೀಪೀಠ ಹಾಗೂ ಶಾಖಾಮಠಗಳಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ ಎಂದು, ಶ್ರೀರಂಭಾಪುರಿ ಜಗದ್ಗುರುಗಳು ಉಲ್ಲೇಖಿಸಿದರು.
ಬಾಳೆಹೊನ್ನೂರಿನಲ್ಲಿ ಸಂಸ್ಥಾಪನೆಗೊಂಡ ವೀರಸಿಂಹಾಸನ ಪೀಠ ಹಸಿರು ಪೀಠವೆಂದೆ ಹೆಸರಾಗಿದೆ. ಲಾಂಛನ ಹಸಿರುಧ್ವಜವಾಗಿದ್ದು, ಪೃಥ್ವೀ ತತ್ತ÷್ವವನ್ನು ಬೋಧಿಸಲಾಗುತ್ತಿದೆ. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಪ್ರಕೃತಿ ಸಂರಕ್ಷಣೆಯನ್ನು ಆದ್ಯತೆಯಾಗಿ ಸ್ವೀಕರಿಸಿ ಜಗದ್ಗುರುಗಳ ಸಾನಿಧ್ಯದಲ್ಲಿ ಹಸಿರು ಪಾದಯಾತ್ರೆ-ಸಸ್ಯಾರೋಪಣ-ಸಸಿ ವಿತರಣೆ ಜೊತೆಗೆ ಸಸ್ಯಗಳ ಮಹತ್ವ ಕುರಿತಂತೆ ಜಾಗೃತಿ ಕರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿರುವುದು ಮಾದರಿ ಎಂದ ಡಾ.ವೀರಸೋಮೇಶ್ವರ ಜಗದ್ಗುರುಗಳು, ಸಸ್ಯಸಂರಕ್ಷಣೆ ಎಲ್ಲರ ಬದುಕಿನ ಭಾಗವಾಗಬೇಕು. ಧರ್ಮಾಚರಣೆಯಲ್ಲಿ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ, ನದಿಕೊಳ, ಬೆಟ್ಟ, ಗುಡ್ಡ ಸೇರಿದಂತೆ ಚರಾಚರ ಜೀವಿಗಳ ಸಂರಕ್ಷಣೆಯ ಸೂತ್ರವಿದೆ ಎಂದರು.

ಮಾ.ಸA.ಪ್ರ.ಅಧ್ಯಕ್ಷ ಪ್ರಭುಲಿಂಗಶಾಸ್ತ್ರೀ 2009ರಲ್ಲಿ ಪ್ರಾರಂಭಗೊಂಡ ಪ್ರತಿಷ್ಠಾನ ನಿರಂತರವಾಗಿ ಹಸಿರು ಜಾಗೃತಿ ಕರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಕಳೆದ 15ವರ್ಷಗಳಿಂದ ಹಸಿರುಪೀಠದ ಒಡೆಯರಾದ ಪೂಜ್ಯ ಶ್ರೀರಂಭಾಪುರಿ ಡಾ.ವೀರಸ ಮೇಶ್ವರ ಜಗದ್ಗುರುಗಳು ಸಾನಿಧ್ಯ ಕರುಣಿಸುತ್ತಿರುವುದು ಮಹತ್ವಪೂರ್ಣ. ಕಣಿವೆ ವಿಕಾಸನಗರ, ಉಪ್ಪಳ್ಳಿ, ಕಲ್ಯಾಣನಗರ, ರತ್ನಗಿರಿಬೋರೆ ಬಡಾವಣೆ ಸೇರಿದಂತೆ ವಿವಿಧೆಡೆ ಹಸಿರುಪಾದಯಾತ್ರೆ ನಡೆಸಿ ಗಿಡನೆಡುವ ಮೂಲಕ ಪ್ರೇರಣೆ ನೀಡಿದ್ದಾರೆ. ಸಹಸ್ರಾರು ಸಸಿಗಳನ್ನು ಭಕ್ತಿಭಾವದಿಂದ ಸ್ವೀಕರಿಸಿದ ನಾಗರಿಕರು ಹೆಮ್ಮರವಾಗಿ ಬೆಳೆಸುತ್ತಿರುವುದು ಸಾರ್ಥಕತೆಯನ್ನು ತಂದುಕೊಟ್ಟಿದೆ ಎಂದರು.
ಆಶಾಕಿರಣದ ಅಧ್ಯಕ್ಷ ಡಾ||ಜೆ.ಪಿ.ಕೃಷ್ಣೇಗೌಡ ಮೊದಲ ಸಸಿಯನ್ನು ಸ್ವೀಕರಿಸಿ ಮಾತನಾಡಿ ಹಸಿರೇ ಉಸಿರು. ಹಸಿರು ಹೆಚ್ಚಿಸಿದಷ್ಟು ಮನುಷ್ಯನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಸ್ವಾರ್ಥ ಲಾಲಸೆಗಾಗಿ ಮರಗಿಡಗಳನ್ನು ನಾಶಪಡಿಸುವ ಮೂಲಕ ನಮ್ಮನ್ನೆ ನಾಶಪಡಿಸಿಕೊಳ್ಳುತ್ತಿದ್ದೇವೆ. ಆದಿಚುಂಚನಗಿರಿ ಮಠ ಕೋಟಿ ಸಸಿಗಳನ್ನು ನೆಡುವ ಯೋಜನೆಯನ್ನು ರಾಜ್ಯದಲ್ಲಿ ಕರ್ಯಗತಗೊಳಿಸಿದೆ ಎಂದ ಡಾ||ಜೆ.ಪಿಕೆ, ಪ್ರಕೃತಿ ಪಾಲನೆಯಲ್ಲಿ ಧರ್ಮಪೀಠಗಳ ಕೊಡುಗೆ ಅಪಾರ. ಜಿಲ್ಲೆಯಲ್ಲೆ ಇರುವ ಶ್ರೀಮದ್ರಂಭಾಪುರಿಪೀಠ ಹಸಿರುಪೀಠವೆಂದೆ ಹೆಸರಾಗಿದ್ದು, ಪೂಜ್ಯ ಜಗದ್ಗುರುಗಳು ಪ್ರಕೃತಿ ಪಾಲನೆ ಪೋಷಣೆಯ ಜಾಗೃತಿಕ ಕರ್ಯದಲ್ಲಿ ಸದಾ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.

ಬೇರಗಂಡಿಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು. ಶ್ರೀ ದೇವಿ ಗುರುಕುಲದಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತಿç, ಜೆ.ಸಿ.ಅಧ್ಯಕ್ಷರಾದ ಮಾಜಿಯೋಧ ಪ್ರದೀಪ್, ಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜು, ಅಕ್ಕಮಹಾದೇವಿ ಸಂಘದ ಕಾರ್ಯದರ್ಶಿ ಆಶಾಹೇಮಂತ್, ಖಜಾಂಚಿ ಪಾರ್ವತಿಬಸವರಾಜು, ವೀರಶೈವ ಲಿಂಗಾಯತ ಮಹಿಳಾವೇದಿಕೆ ಅಧ್ಯಕ್ಷೆ ಗೀತಾಬಸವರಾಜು, ಆಯುರ್ವೇದ ತಜ್ಞೆ ಡಾ||ಗೌರಿವರುಣ್, ನಿವೃತ್ತ ಪ್ರಾಂಶುಪಾಲೆ ದೇವಿಕಾಷಡಕ್ಷರಿ, ನಿವೃತ್ತ ಮುಖ್ಯಶಿಕ್ಷಕ ಮಹಾಲಿಂಗಯ್ಯ, ವಾರ್ಡನ್ ಕಮಲಾ, ಪತ್ರಕರ್ತರಾದ ತಾರಾನಾಥ ಕಾಮತ್, ಚಂದ್ರೇಗೌಡ, ಮತ್ತು ಪ್ರದೀಪ್, ಸಾಮಾಜಿಕ ಕರ್ಯಕರ್ತರಾದ ಉಮಾಶಂಕರ್, ಸಿರಿಮನೆಪ್ರಸಾದ್, ದೇವರಾಜು, ಮಂಜುನಾಥ, ಮಹೇಶ್, ಬಿಂಡಿಗದೇವರಾಜ್, ವೀರೇಶಶಾಸ್ತ್ರಿ ಮತ್ತಿತರರು ಪಾಲ್ಗೊಂಡಿದ್ದರು.
ಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ನಿರೂಪಿಸಿದರು.