ಚಿಕ್ಕಮಗಳೂರು, ಜೂನ್ 14:- ನಾಡಿನ ಪರಂಪರೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಪ್ರಪಥಮ ಮಹಿ ಳಾ ಘಟಕದ ಸಮ್ಮೇಳನ ಜಿಲ್ಲೆಯ ಮಹಿಳಾ ಲೇಖಕಿಯರು, ಬರಹಗಾರರಿಗೆ ವಿಶೇಷವಾಗಲಿದೆ ಎಂದು ಕಸಾಪ ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಮುಂಜಾನೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಿಳಾ ಸಮ್ಮೇಳನ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿ ಮಾತನಾಡಿದರು.
ನಾಡಿನ ಸಂಸ್ಕೃತಿಯಲ್ಲಿ ಪರಿಷತ್ ಅಥವಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರ, ನಾಡು ಹಾಗೂ ಪರಿ ಷತ್ತಿನ ಧ್ವಜಾರೋಹಣ ನೆರವೇರಿಸುವುದು ಸಂಪ್ರದಾಯವಾಗಿದೆ. ವಿಶೇಷವಾಗಿ ರಾಷ್ಟ್ರ ಧ್ವಜಾರೋಹಣಕ್ಕೆ ಅವಕಾಶ ನೀಡಿರುವುದು ಹೆಮ್ಮೆಯಿದೆ ಎಂದ ಅವರು ಈ ಸಮ್ಮೇಳನದ ಕಾರ್ಯಕ್ರಮವು ಅತ್ಯಂತ ಯ ಶಸ್ವಿಪೂರ್ಣವಾಗಿ ಜರುಗಲಿದೆ ಎಂದರು.

ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಸಮ್ಮೇಳನ ನಡೆಯುತ್ತಿರುವುದು ಮಹಿಳಾ ಲೇಖಕಿಯರು, ಸಾಹಿತ್ಯಾಸಕ್ತರಿಗೆ ಹುರುಪು ತಂದಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಸಾಹಿತ್ಯಪ್ರೇಮಿಗಳು ಹಾಗೂ ಪರಿಷತ್ ಸದಸ್ಯರು ಕುಟುಂಬ ಸಮೇತರಾಗಿ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ವಿಶೇಷ ವಾಗಿದೆ ಎಂದು ತಿಳಿಸಿದರು.
ಪರಿಷತ್ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಕನ್ನಡ ಸಮೃದ್ಧ ಭಾಷೆ. ಸರಳ ಹಾಗೂ ಸುಲಭವಾಗಿ ಪ್ರತಿಯೊಬ್ಬರು ಬಳಸಬಹುದಾದ ಭಾಷೆಯಾಗಿದೆ. ಕನ್ನಡಿಗರು ಸ್ವಾಭಿಮಾನಕ್ಕೆ ಪ್ರತೀಕವಾಗಿದೆ. ದೇಶ-ವಿದೇಶಗಳಲ್ಲಿ ತೆರಳಿದರೂ ಮಾತೃಭಾಷಾ ಸೊಗಡನ್ನು ಮರೆಯದೇ ಪ್ರೀತಿಯಿಂದ ಅಪ್ಪುತ್ತಿದ್ದಾರೆ ಎಂದರು.
ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ನಾಡು-ನುಡಿಯ ಜಾಗೃತಿ ಕೆಲಸ ನಿರಂತರವಾಗಿ ನಡೆದಿದೆ. ಕನ್ನಡದ ರಥ ಸಂಚರಿಸಿದ ಬೆನ್ನಲ್ಲೆ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಒಟ್ಟಾರೆ ಕನ್ನಡ ಜಾಗೃತಿಯ ವಾತಾವರಣ ಸಂತಸ ಮೂಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಆಹಾರ ಸಮಿತಿ ಮುಖ್ಯಸ್ಥ ಗುರುವೇಶ್, ಕಸಾಪ ಸದಸ್ಯರಾದ ರೂಪಾ ನಾಯ್ಕ್, ವೀಣಾ ಮಲ್ಲಿಕಾರ್ಜುನ್, ಆಶಾ, ಜಯಶೀಲಾ, ಜಯಂತಿ ಶಿವಾಜಿರಾವ್, ಸುಧೀರ್, ಪ್ರದೀಪ್ ಮತ್ತಿತರರು ಹಾಜರಿದ್ದರು.
(ಬಾಕ್ಸ್ : ನಗರದ ಆಜಾದ್ಪಾರ್ಕ್ನಿಂದ ಸಮ್ಮೇಳನಾಧ್ಯಕ್ಷೆ ಲಕ್ಷ್ಮೀ ಶ್ಯಾಮಾರಾವ್ ಅವರನ್ನು ವೀರಗಾ ಸೆ, ಚಟ್ಟಿಮೇಳ, ಕರಡಿ ಕುಣಿತ, ಭರತನಾಟ್ಯ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಕಸಾಪ ಮಹಿಳಾ ಘಟಕದ ಪದಾಧಿಕಾರಿಗಳು ನಾಡಿನ ಸಂಪ್ರದಾಯದAತೆ ಕಳಸಹೊತ್ತುಕೊಂಡು ಸಮ್ಮೇಳನಾಧ್ಯಕ್ಷರನ್ನು ವಿ ಜ್ರಂಭಣೆಯಿಂದ ಕಲಾಮಂದಿರದಲ್ಲಿ ಕರೆತಂದರು.

ಸಮ್ಮೇಳನಾಧ್ಯಕ್ಷರ ಮೆರವಣಿಯುದ್ದಕ್ಕೂ ಮಹಿಳಾ ಸಾಹಿತ್ಯಾಸಕ್ತರು, ಪುರುಷರು ಹಾಗೂ ಸಾರ್ವಜನಿಕ ರು ಕನ್ನಡಶಾಲು ಧರಿಸಿಕೊಂಡು ಪ್ರಪ್ರಥಮ ಸಮ್ಮೇಳನಕ್ಕೆ ಅತ್ಯಂತ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಪುಟಾಣಿ ಮಕ್ಕಳ ಭರತನಾಟ್ಯವು ನೋಡುಗರ ಹೆಚ್ಚು ಗಮನಸೆಳೆಯಿತ್ತು. ವಿಶೇಷವಾಗಿ ಕನ್ನಡಸೇನೆಯಿಂದ ಹತ್ತಾರು ಆಟೋಗಳು ನಾಡಿನ ಧ್ವಜದಿಂದ ಶೃಂಗರಿಸಿ ಮೆರವಣಿಗೆಯಲ್ಲಿ ಸಾಗಿದವು.
- ಸುರೇಶ್ ಎನ್.