ಕಡೂರು, ಜೂನ್ 14: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ.ಎಂ. ರಾಜಶೇಖರ್ ಅವರು ಇಂದು ಹಾಸನ ಹಾಗೂ ತುಮಕೂರು ಜಿಲ್ಲೆಗಳ ಪ್ರವಾಸದ ಅಂಗವಾಗಿ ಚಿಕ್ಕಮಗಳೂರಿನಿಂದ ಹೊರಟ ಅವರು ಪ್ರವಾಸದ ಮಧ್ಯದಲ್ಲಿ ಕಡೂರು ತಾಲೂಕಿಗೆ ಭೇಟಿ ನೀಡಿ, ಇಲ್ಲಿನ ಪತ್ರಕರ್ತರಿಂದ ಆತ್ಮೀಯ ಸ್ವಾಗತ ಹಾಗೂ ಗೌರವ ಸ್ವೀಕರಿಸಿದರು.
ಕಡೂರು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಗದೀಶ್, ವಿಜಯ ಕರ್ನಾಟಕದ ವರದಿಗಾರ ಎ.ಜೆ. ಪ್ರಕಾಶಮೂರ್ತಿ, ಉದಯವಾಣಿಯ ಕೃಷ್ಣಮೂರ್ತಿ, ಕನ್ನಡ ಪ್ರಭದ ಬಿ.ಆರ್. ಕುಮಾರ್, ಉದಯ ಕರ್ನಾಟಕದ ಅನಿಲ್ ಆನಂದ್, ಚಿಕ್ಕಮಗಳೂರು ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ್, ಪತ್ರಿಕೆ ಸಂಪಾದಕರು ಸೇರಿದಂತೆ ಶಿವು, ರಘು, ದೇವು, ರೇಣುಕಾಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯಾಧ್ಯಕ್ಷ ಜಿ.ಎಂ. ರಾಜಶೇಖರ್ ಅವರು ಮಾತನಾಡಿ, ಸಂಘದ ಸೌಲಭ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿದರು. ಇದಲ್ಲದೆ, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿ, ಸಂಘದ ಬಲವರ್ಧನೆಗೆ ಎಲ್ಲರ ಸಹಕಾರ ಕೋರಿದರು.
ಈ ಸಂಧರ್ಭದಲ್ಲಿ ಸಂಘದ ಏಕತೆ, ಸ್ಥಳೀಯ ಮಟ್ಟದ ಪತ್ರಕರ್ತರ ಸಹಕಾರ ಹಾಗೂ ಮಾಧ್ಯಮ ಕ್ಷೇತ್ರದ ಬಲವರ್ಧನೆಯ ಅಗತ್ಯತೆ ಕುರಿತು ಉಲ್ಲೇಖಿಸಲಾಯಿತು. ಕಾರ್ಯಕ್ರಮವು ಸಹಕಾರದ ಹಿತೋದ್ದೇಶದೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು.