ಕೆ.ಆರ್.ಪೇಟೆ- ವೃತ್ತಿನಿರತ ದಸ್ತಾವೇಜು ಪತ್ರ ಬರಹಗಾರರ ಬದುಕಿಗೆ ಭದ್ರತೆ ಬೇಕು- ರಾಜ್ಯಮಟ್ಟದ ಜಾಗೃತಿ ಪ್ರಯಾಣ ಆರಂಭ- ಕರ್ನಾಟಕ ರಾಜ್ಯ ದಸ್ತಾವೇಜು ಪತ್ರ ಬರಹಗಾರರ ಒಕ್ಕೂಟದ ರಾಜ್ಯ ಸಂಚಾಲಕ ಪ್ರಕಾಶ್ ರಾಜೇಅರಸ್ ಮಾಹಿತಿ

ಕೆ.ಆರ್.ಪೇಟೆ: ಉಪನೊಂದಣಾಧಿಕಾರಿಗಳ ಇಲಾಖೆಗೆ ಸಂಬಂಧಿತ ವೃತ್ತಿನಿರತ ದಸ್ತಾವೇಜು ಪತ್ರ ಬರಹಗಾರರನ್ನು ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ದಸ್ತಾವೇಜು ಪತ್ರ ಬರಹಗಾರರ ಒಕ್ಕೂಟದ ರಾಜ್ಯ ಸಂಚಾಲಕ ಪ್ರಕಾಶ್ ರಾಜೇಅರಸ್ ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘದ ತಾಲ್ಲೂಕು ಘಟಕದ ಕಚೇರಿಯಲ್ಲಿ ನಡೆದ ಪತ್ರ ಬರಹಗಾರರ ಸಂಘದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸರ್ಕಾರವು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿ ಮಾನ್ಯತೆ ಪಡೆದು ಕಾರ್ಯನಿರ್ವಹಣೆ ಮಾಡಿತ್ತಿರುವ ದಸ್ತಾವೇಜು ಪತ್ರಬರಹಗಾರರ ಬದುಕು ಅತಂತ್ರವಾಗಿದೆ. ಹಿರಿದಾದ ವೃತ್ತಿ ಮಾಡುತ್ತಿರುವ ನಮಗೆ ಸೇವಾ ಭದ್ರತೆಯಿಲ್ಲ, ನಾಗರೀಕ ಜನಸ್ನೇಹಿ ಯಾಗಿರುವ ನಮಗೆ ವೃತ್ತಿ ಭದ್ರತೆ ಬೇಕು ಆದ್ದರಿಂದ ನಮ್ಮ ಮನವಿಗಳನ್ನು ರಾಜ್ಯ ಸರ್ಕಾರವು ಮಾನವೀಯ ನೆಲಗಟ್ಟಿನ ಆಧಾರದ ಮೇಲೆ ಬಗೆಹರಿಸಿಕೊಡಬೇಕು ಎಂದು ಪತ್ರ ಬರಹಗಾರರ ಒಕ್ಕೂಟದ ರಾಜ್ಯ ಸಂಚಾಲಕ ಪ್ರಕಾಶ್ ರಾಜೇಅರಸ್ ಆಗ್ರಹಿಸಿದರು.

ಕಾನೂನು ಬದ್ಧವಾಗಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರ ಬರಹಗಾರರ ಬದುಕು ಇಂದು ಆನ್ ಲೈನ್ ಎಂಬ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಕೆಲಸಕ್ಕೆ ಸೇವಾ ಭದ್ರತೆಯಿಲ್ಲ, ರಾಜ್ಯ ಸರ್ಕಾರವು ನಮ್ಮ ಸಂವಿಧಾನ ಬದ್ಧವಾದ ಬೇಡಿಕೆಗಳಿಗೆ ಮಾನವೀಯ ನೀಲೆಗಟ್ಟಿನ ಆಧಾರದ ಮೇಲೆ ಪ್ರಾಮಾಣಿಕ ಸ್ಪಂದನೆ ಮಾಡದಿರುವುದರಿಂದ ರಾಜ್ಯದಾಧ್ಯoತ ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಪತ್ರ ಬರಹಗಾರರಾದ ನಾವು ಬೀದಿಗೆ ಬೀಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಪ್ರಕಾಶ್ ರಾಜೇಅರಸ್ ಪತ್ರಬರಹಗಾರರನ್ನು ಸಂಘಟಿಸಿ ಒಗ್ಗೂಡಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಮಂಡ್ಯ, ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುತ್ತಿರುವ ನಮ್ಮ ರಾಜ್ಯ ಒಕ್ಕೂಟದ ತಂಡವು ಪತ್ರ ಬರಹಗಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪತ್ರ ಬರಹಗಾರರ ರಾಜ್ಯ ಒಕ್ಕೂಟದ ಪದಾಧಿಕಾರಿಗಳಾದ ನರಸಿಂಹಮೂರ್ತಿ, ಲೋಕೇಶ್ ಟಿ.ನರಸೀಪುರ ಮಾತನಾಡಿ ಪತ್ರ ಬರಹಗಾರರಲ್ಲಿ ಅರಿವಿನ ಜಾಗೃತಿ ಮೂಡಿಸಿದರು.

ಸಮಾಲೋಚನಾ ಸಭೆಯಲ್ಲಿ ಪತ್ರ ಬರಹಗಾರರ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಕೆ.ಸಿ. ವೆಂಕಟರಾಮು, ಅಧ್ಯಕ್ಷ ಶಿವಲಿಂಗೇಗೌಡ, ಉಪಾಧ್ಯಕ್ಷ ಕೆ.ಎಸ್.ನಾಗರಾಜು, ಕಾರ್ಯದರ್ಶಿ ಹರೀಶ್ ಕುಮಾರ್, ಪದಾಧಿಕಾರಿಗಳಾದ ಮುರುಗೇಶ್, ಶಂಕರನಾಗ್, ನರಸಿಂಹಮೂರ್ತಿ, ಮಹದೇವಸ್ವಾಮಿ, ಸಾವಿತ್ರಿ ಹೆಗಡೆ, ಮಂಜುನಾಥ್, ಕೆ.ಆರ್. ಹರೀಶ್ ಕುಮಾರ್, ಬಸವರಾಜ್ ಬಾಬು, ಸಣ್ಣಸ್ವಾಮಿ, ಮೆಳ್ಳಳ್ಳಿ ಮಹದೇವು, ಶ್ರೀನಿವಾಸಮೂರ್ತಿ, ಚಿಕ್ಕಗಾಡಿಗನಹಳ್ಳಿ ಸಣ್ಣಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.

ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *