ಬೇಲೂರು, ಜೂನ್ 17 – ಅರೇಹಳ್ಳಿ ಪೊಲೀಸ್ ಠಾಣೆ ವತಿಯಿಂದ “ಮೈ ಸ್ಕೂಲ್” ಶಾಲೆಯ ವಿದ್ಯಾರ್ಥಿಗಳಿಗೆ ಠಾಣಾ ಭೇಟಿಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, policing work ಬಗ್ಗೆ ತಿಳುವಳಿಕೆ ನೀಡಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಶೋಭಾ, “ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಕೆಲಸ ಮಾಡುವವರು. ಸಾರ್ವಜನಿಕರು ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದರೆ, ಅಪರಾಧ ನಿಯಂತ್ರಣ ಸಾಧ್ಯವಾಗುತ್ತದೆ” ಎಂದು ಹೇಳಿದರು.

ಸ್ಥಳದಲ್ಲಿ ಎಎಸ್ಐ ವಿರೂಪಾಕ್ಷ, ಪೊಲೀಸ್ ಸಿಬ್ಬಂದಿಗಳಾದ ಮಂಜೇಗೌಡ, ಅಶೋಕ್, ನಂದೀಶ್ ಸೋನ್ನದ್, ಶಶಿಕುಮಾರ್ ಹಾಗೂ ಶಾಲೆಯ ಉಪನ್ಯಾಸಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪೊಲೀಸ್ ಠಾಣೆಯ ಕಾರ್ಯವೈಖರಿ, ದಾಖಲೆ ಪ್ರಕ್ರಿಯೆ, ಸಾರ್ವಜನಿಕ ಸೇವಾ ರೀತಿ ಕುರಿತು ವಿವರವಾಗಿ ಅರಿತುಕೊಂಡರು. ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ಪಡೆದ ಮಕ್ಕಳಲ್ಲಿ ಉತ್ಸಾಹ ಮೆರೆದದ್ದು ವಿಶೇಷವಾಗಿತ್ತು.
– ವರದಿ: ನೂರ್ ಅಹಮದ್, ಬೇಲೂರು