ಕೊಟ್ಟಿಗೆಹಾರ-ಚಾರ್ಮಾಡಿ ಘಾಟಿಯಲ್ಲಿ ಗಾಳಿ-ಮಳೆಯಿಂದ ತಪ್ಪಿದ ಬಾರಿ  ಅನಾಹುತ

ಕೊಟ್ಟಿಗೆಹಾರ- ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮಳೆಯೊಡನೆ ತೀವ್ರ ಗಾಳಿ ಬಲವಂತಗೊಂಡ ಪರಿಣಾಮ, ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಾರ್ಮಾಡಿ ಘಾಟ್‌ನಲ್ಲಿ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ನಡೆದ ಈ ಘಟನೆ ತೀವ್ರ ಆತಂಕ ಉಂಟುಮಾಡಿತ್ತು.

ಧರ್ಮಸ್ಥಳದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಒಂದು ರಸ್ತೆಯಲ್ಲಿ ಸಾಗುತ್ತಿದ್ದ ಸಮಯದಲ್ಲಿ ಅಚಾನಕವಾಗಿ ಒಂದು ದೊಡ್ಡ ಮರ ಕಾರು ಪಾಸ್ ಆಗುತ್ತಿದ್ದ ತಕ್ಷಣವೇ ರಸ್ತೆಗೆ ಕೆಳಕ್ಕೆ ಬಿದ್ದು ಬಿತ್ತು. ಅದೃಷ್ಟವಶಾತ್ ಕಾರು ಹಿಂದಕ್ಕೆ ಇರಲೇ ಇಲ್ಲದಷ್ಟು ನಿಖರವಾಗಿ ಪಾರಾಗಿ ಪ್ರಾಣಾಪಾಯದಿಂದ ತಪ್ಪಿಸಿತು.

ಬಣಕಲ್  ಗ್ರಾಮ ಪಂಚಾಯತ್ ಸದಸ್ಯರಾದ ಮಧು ಕುಮಾರ್ ಧರ್ಮಸ್ಥಳ ವಿಪತ್ತು ಸಂಘದ ಪ್ರವೀಣ್ ಪೂಜಾರಿ. ಕೊಟ್ಟಿಗೆಹಾರ ಗ್ರಾಮದ ಯುವಕರು ಹಾಗೂ ಬಣಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರ ಪುನರಾರಂಭ ಮಾಡಿಸಿದರು.

ಈ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಗಾಳಿ-ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆ ಪ್ರಯಾಣಿಕರು ಎಚ್ಚರಿಕೆಯಿಂದ ಹೋಗುವಂತೆ  ಅಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *