ಮತ್ತೆ ಬಾಯ್ತರೆದ ಬಸ್ಟಾಂಡ್ ನ “ಅಕ್ಷಯ ಗುಂಡಿ”

  ಈಗಾಗಲೇ ಸಾಕಷ್ಟು ಬಾರಿ ರಿಪೇರಿ, ತೇಪೆ ಕೆಲಸಗಳಾಗುತ್ತಾ ಪದೇ ಪದೇ ರಿಪೇರಿಯಾಗುವುದು ಮತ್ತೆ ಎರಡು ದಿನಕ್ಕೆ ಕಿತ್ತು ಹೋಗುವುದು ಆಗುತ್ತಲೇ ಇದ್ದ ಬೇಲೂರಿನ ಬಸ್ಟಾಂಡ್ ಗೆ ಬಸ್ ಒಳಹೋಗುವಾಗ ಎಂಟ್ರೆನ್ಸ್ ನಲ್ಲೇ ಸಿಗುವ, ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮೂರು ನಾಲ್ಕು ತಿಂಗಳಿಗೊಮ್ಮೆ ಸ್ವಲ್ಪ ಹಣ ಮಾಡಿಕೊಳ್ಳುಲು ರಹದಾರಿಯಾಗಿದ್ದ ಬಸ್ಟಾಂಡ್ ನ "ಅಕ್ಷಯ ಗುಂಡಿ" ಮತ್ತೆ ಕಿತ್ತುಬಂದಿದ್ದು, ಅಧಿಕಾರಿಗಳ ಮುಖದಲ್ಲಿ ಮಂದಹಾಸ ತರಿಸಿದಂತೆ ಕಾಣುತ್ತಿದೆ.

  ಆ ಜಾಗಕ್ಕೆ ಎಂತೆಂಥಾ "ಪಂಟರ್ ಇಂಜಿನಿಯರ್ಸ್" ಗಳು ಬಂದು ಪದೇ ಪದೇ ರಿಪೇರಿ ಮಾಡಿಸಿದರೂ ಆದಷ್ಟು ಬೇಗ ಕಿತ್ತುಕೊಂಡು ಮತ್ತದೇ ಸ್ಥಿತಿ ತಲುಪಿ ಮತ್ತೆ ತೇಪೆ ಕಾರ್ಯ ಮಾಡಿಸಿ ಒಂದಷ್ಡು ಹಣ ಅದುಮಿಕೊಳ್ಳುತ್ತಿದ್ದುದು ಬೇಲೂರು ನಾಗರೀಕರಿಗೆ ಕೆರಳಿಸಿದಂತಾಗಿದ್ದಾಗ ಬೇಲೂರಿನ "ಒನ್ ಮ್ಯಾನ್ ಆರ್ಮಿ"ಯಾಗಿ ಅಭಿವೃದ್ಧಿಗೆ ಬೇಕಾದ ಕೆಲಸಗಳು, ಸ್ವಚ್ಚತೆ ಕೆಲಗಳನ್ನು ಮಾಡಿಸುತ್ತಾ ಬೇಲೂರು ಪುರಸಭೆಯ ಅದ್ಯಕ್ಷರಿಗೆ ಯಾವ ಮಟ್ಟದ ಅಧಿಕಾರವಿದೆ ಎಂದು ತೋರಿಸಿದ ಶ್ರೀ ಎ ಆರ್ ಅಶೋಕ್ ರವರ ಮುಂದಾಳತ್ವದಲ್ಲಿ ಕೆಲವೇ ತಿಂಗಳುಗಳ ಹಿಂದೆ ಸಾರ್ವಜನಿಕರ ಹಿತಕ್ಕಾಗಿ ಪುರಸಭೆಯ ಹಣದಿಂದ ಮತ್ತೆ ಜಲ್ಲಿ, ಬೋಡ್ರಸ್, ಟಾರ್ ಹಾಕಿಸಿ ಬಂದೋ ಬಸ್ತ್ ಮಾಡಿಸಿ ಬೇಲೂರಿನ ನಾಗರೀಕರಲ್ಲಿ ಮನಸ್ಸಿನಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು.

 ಆದರೆ ಈ ಬಾರಿ ಬಂದ ಮಳೆಗೆ ಮತ್ತೆ ಅದೇ ಜಾಗದಲ್ಲಿ ಮೊದಲಿಗಿಂತ ಇನ್ನೂ ಟಾರ್ ಕಿತ್ತುಬಂದು ಮತ್ತೆ ಗುಂಡಿಬಿದ್ದಿದೆ...

ಈ ಅಕ್ಷಯ ಗುಂಡಿಗೆ ಕಾರಣವೇನು.‌??

   ಸುರಿವ ಮಳೆ ಅಥವಾ ಬಸ್ಟಾಂಡಿನಲ್ಲಿ ಬಿದ್ದ ನೀರು ನೇರ ಆ ಗುಂಡಿಯ ಕಡೆಗೇ ಬರುತ್ತಿದ್ದು ಆ ಜಾಗದಲ್ಲಿ ಚರಂಡಿಯು ಸುವ್ಯವಸ್ಥಿತವಾಗಿ ಇಲ್ಲ. ನೀರು ಸರಾಗವಾಗಿ ಹರಿಯಲು ಸರಿಯಾದ ಚರಂಡಿಯ ವ್ಯವಸ್ಥೆ ಇಲ್ಲ.

ಏನಾಗಬೇಕು..??

ಮಳೆ ಬಂದರೆ ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಹತ್ತಿರದಿಂದ. ಹರಿಯುವ ಮಳೆನೀರು ಚರಂಡಿಯ ಅವ್ಯವಸ್ಥೆಯ ಕಾರಣ ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲೇ ಹರಿದು ಇಂದಿರಾ ಕ್ಯಾಂಟೀನ್ ಎದುರು ಕೆರೆಯಂತಾಗಿ ಹೊಳೇಬೀದಿಯ ರಸ್ತೆಯ ಮೂಲಕವೇ ಯಗಚಿ ನದಿಗೆ ಸೇರಿಬಿಡುತ್ತದೆ..‌‌

   ಇದೇ ವ್ಯವಸ್ಥೆ ಬಸ್ಟಾಂಡ್ ಬಳಿಯೂ ಆಗಿದೆ. ಇಂದಿರಾ ಕ್ಯಾಂಟಿನ್ ನ ಭಾಗದಿಂದ ಬಸ್ಟಾಂಡ್ ವರೆಗೂ ಎಡಭಾಗದ ಚರಂಡಿ ನೀರು ಬಲಭಾಗಕ್ಕೆ ಹೊಳೇಬೀದಿಯ ಕಡೆ ಹೋಗುವ ವ್ಯವಸ್ಥೆ ಇಲ್ಲ. ಅದೇ ರೀತಿ ಬಸ್ಟಾಂಡ್ ಸುತ್ತಮುತ್ತ ಹಾಗೂ ಮೂಡಿಗೆರೆ ರಸ್ತೆ ಕಡೆ ಚರಂಡಿಯ ವ್ಯವಸ್ಥೆ ಸರಿ ಇಲ್ಲ.

ಸುಂದರ ಬೇಲೂರು,,,, ಯುನೆಸ್ಕೋ ಪಟ್ಡಿಗೆ ಸೇರಿದ ಬೇಲೂರಿಗೆ ಮೊದಲು ರಸ್ತೆ ಮತ್ತು ಚರಂಡಿಯ ಕಾರ್ಯ ನಡೆಯಬೇಕಿದೆ.
ಬೇಲೂರಿನ ಜನಸಾಂದ್ರತೆಯಂತೆ ಚರಂಡಿಯ ಅಗಲವೂ ಕೂಡ ಕಡಿಮೆ ಇದೆ. ಜೊತೆಗೆ ಬೆಳಗಿನ ಜಾವ ಪುರಸಭೆಯ ಸ್ವಚ್ಛತಾ ಸಿಬ್ಬಂದಿಗಳು ನಗರದ ರಸ್ತೆಯ ಅಕ್ಕಪಕ್ಕ ಅಂಗಡಿಗಳ ಮುಂದೆ ಸ್ವಚ್ಚ ಮಾಡಿ ಹೋದ ಬಳಿಕ ಅಂಗಡಿ ಬಾಗಿಲು ತೆರೆಯುವ ವರ್ತಕರು ಪ್ರತಿದಿನ ಗುಡಿಸುವ ಕಸವು ಚರಂಡಿಯೊಳಗೆ ನೀರು ಹೋಗಲು ಎಂದು ಬಿಟ್ಟಿರುವ ಸಂದಿನ ಒಳಗೆ ಕಸ ಗುಡಿಸಿಬಿಡುತ್ತಾರೆ… (ಇದನ್ನು ಪ್ರತಿನಿತ್ಯ ನೋಡಬಹುದು) ಹೀಗೆ ಪ್ರತಿನಿತ್ಯ ಅಂಗಡಿಯೊಳಗಿನ ಸಣ್ಣಪುಟ್ಟ ಕಸ ಕಡ್ಡಿ ತಿಂಗಳುಗಟ್ಟಲೆ ಗುಡಿಸಿದ ಕಸ ಮಳೆಗಾಲದಲ್ಲಿ ಮಳೆನೀರಿನ ಹರಿವಿಗೆ ತೊಂದರೆಯಾಗುತ್ತದೆ. ಮಳೆನೀರು ಹೋಗುವ ವ್ಯವಸ್ಥೆ ಸರಿಯಾಗದಿರುವ ತನಕ “ಅಕ್ಷಯ ಗುಂಡಿ” ಗೆ ಅದೆಷ್ಟೇ ತೇಪೆ ಹಾಕಿದರೂ ಸರಿಯಾಗುವ ಲಕ್ಷಣಗಳಿಲ್ಲ..



✍️ ಅ.ಭೀ

Leave a Reply

Your email address will not be published. Required fields are marked *

×How can I help you?