ಬೇಲೂರು– ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೇಲೂರು ಮತ್ತು ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವು ಬೇಲೂರಿನಲ್ಲಿ ಜಾಗೃತಿಯ ಸಂದೇಶ ನೀಡುವ ಉದ್ದೇಶದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ಕಚೇರಿಯ ಸಲಹೆಗಾರ್ತಿ ಮಮತಾ ಅವರು “ತಂಬಾಕು ಸೇವನೆಯಿಂದ ಉಂಟಾಗುವ ದೈಹಿಕ-ಮಾನಸಿಕ ದುಷ್ಪರಿಣಾಮಗಳು ಹಾಗೂ ಪರಿಹಾರೋಪಾಯಗಳು” ಎಂಬ ವಿಷಯದ ಕುರಿತು ಟಿಪಿಟಿ ಮೂಲಕ ಸ್ಪಷ್ಟ, ವಿಸ್ತೃತ ಉಪನ್ಯಾಸ ನೀಡಿದರು.

ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿದ ಬೇಲೂರು ತಹಶೀಲ್ದಾರ್ ಅವರು ಅಭಿನಂದನ ಪತ್ರವನ್ನು ನೀಡಿ ಗೌರವಿಸಿದರು. ಇದಕ್ಕೆ ಜೊತೆಗೆ, ಡಾ. ನಾಗೇಶ್ (ಚೇತನ್ ನ್ಯೂರೋ ಸೆಂಟರ್, ಹಾಸನ) ಬರೆದ “ಮನಸ್ಸು ಮೃದುಗ” ಎಂಬ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದಿಂದಲೂ ಮಮತಾ ರವರಿಗೆ ಗೌರವ ಸಲ್ಲಿಸಲಾಯಿತು.

ಗೌರವ ಸ್ವೀಕರಿಸಿದ ಮಮತಾ ರವರು ಕಾರ್ಯಕ್ರಮದ ಆಯೋಜಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
– ನೂರ್ ಅಹಮ್ಮದ್