ಅರಕಲಗೂಡು- ಶಾಲಾ- ಕಾಲೇಜ್ ಗಳಲ್ಲಿ ಓದುಗರ ಜೊತೆಯಲ್ಲಿ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಗಮನ ನೀಡಬೇಕು-ಸಮಾಜ ಸೇವಕರು ಹೋನ್ನೇಗೌಡ

ರಾಮನಾಥಪುರ- ಶಾಲಾ- ಕಾಲೇಜ್ ಗಳಲ್ಲಿ ಓದುಗರ ಜೊತೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಗಮನ ನೀಡಬೇಕು ಎಂದು ಸಮಾಜ ಸೇವಕರು ಹೋನ್ನೇಗೌಡರು ತಿಳಿಸಿದರು.

ರಾಮನಾಥಪುರದ ಶ್ರೀ ಭಾಗ್ಯಶ್ರೀ ಕಲ್ಯಾಣ ಮಂಟಪದಲ್ಲಿ ನಡೆದ ನಮೋ ನವೋದಯ ಕೋಚಿಂಗ್‌ ಸೆಂಟರ್‌” 2025-26ನೇ ಸಾಲಿನಲ್ಲಿ ಜವಾಹರ್‌ ನವೋದಯ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಮತ್ತು ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾದ ವಿದ್ಯಾರ್ಥಿಗಳ “ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅಥಿಥಿಗಳಾಗಿ ಆಗಮಿಸಿದ ಹೊನ್ನೆಗೌಡರು ಮತ್ತು ಇತರ ಗಣ್ಯರಿಂದ ದೀಪ ಬೆಳಗಿಸುವ ಮುಖೇನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ನಮೋ ನವೋದಯ ತರಬೇತಿ ಕೇಂದ್ರದ ಸಂಸ್ಥಾಪಕರಾದ ನವೋದಯ ಮೋಹನ್‌ ರವರು ಪ್ರಾಸ್ಥಾವಿಕವಾಗಿ ಮಾತನಾಡಿ ಪ್ರತಿಭೆಗಳಿಗೆ ಸನ್ಮಾನಿಸುವ ಜೊತೆ ಜೊತೆಗೆ ಈ ಕಾರ್ಯ ಕ್ರಮವನ್ನು ವೀಕ್ಷಿಸುತ್ತಿರುವ ಮಕ್ಕಳ ಹಾಗೂ ಪೋಷಕರ ಮನದಲ್ಲಿ ಮುಂದಿನ ಸಾಲಿನಲ್ಲಿ ನಾವು ಆ ಸ್ಥಾನದಲ್ಲಿ ಕುಳಿತು ಸನ್ಮಾನಿಸಿಕೊಳ್ಳಬೇಕು ಎಂಬ ಧೃಢ ಸಂಕಲ್ಪ ಮೂಡಿದರೆ ಈ ಕಾರ್ಯಕ್ರಮದ ಉದ್ದೇಶ ಸಫಲವಾದಂತೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕೆ. ಬಿ. ವಿರುಪಾಕ್ಷರವರು ಅಧ್ಯಕ್ಷರು ವಿದ್ಯಾನಿಕೇತನ ಕಾನ್ವೆಂಟ್‌ ರಾಮನಾಥಪುರ, ಹೆಚ್. ಎಸ್‌ ಶಿವಪ್ರಸಾದ್‌ , ಖ್ಯಾತ ಪ್ರಸೂತಿ ತಜ್ಞರು, ಪ್ರಾಥಮಿಕ ಆರೋಗ್ಯ ಕೇಂದ್ರ, ಸೋಮವಾರಪೇಟೆ. ಹೆಚ್ ಎಸ್‌ ಪ್ರಶಾಂತ್‌ ತಂತ್ರಾಂಶ ಅಭಿಯಂತರರು, ಬೆಂಗಳೂರು ಮಲ್ಲಿಕಾರ್ಜುನ್‌, ಮಹೇಶ್‌ , ನಿರ್ವಣಪ್ಪ, ಧರ್ಮ ಮುಂತಾದವರಿದ್ದರು.

– ಶಶಿಕುಮಾರ್

Leave a Reply

Your email address will not be published. Required fields are marked *