ಕೊರಟಗೆರೆ-ವಾಸವಿ ಯುವಜನ ಸಮಿತಿಗೆ ಬಾಲಾಜಿ ದರ್ಶನ್ ಅಧ್ಯಕ್ಷರಾಗಿ ಆಯ್ಕೆ

ಕೊರಟಗೆರೆ, ಜೂನ್ 11: ವಾಸವಿ ಯುವಜನ ಸಂಘದ 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಬಾಲಾಜಿ ದರ್ಶನ್ ಕೆ.ಎನ್. ಆಯ್ಕೆಯಾದರು. ಸಂಘದ ಸರ್ವ ಸದಸ್ಯರ ಒಮ್ಮತದ ನಿರ್ಧಾರದಿಂದ ಈ ಆಯ್ಕೆ ಜರುಗಿದೆ.

ಉಪಾಧ್ಯಕ್ಷರಾಗಿ ಹೆಚ್.ಪಿ ಸಾಗರ್, ಕಾರ್ಯದರ್ಶಿಯಾಗಿ ಹೇಮಂತ್ ಕುಮಾರ್ ಬಿ.ಎ, ಸಹಕಾರ್ಯದರ್ಶಿಯಾಗಿ ವರುಣ್ ಕೆ.ಎಲ್ ಹಾಗೂ ಖಜಾಂಚಿಯಾಗಿ ಸುಭಾಷ್ ಪಿ ಆಯ್ಕೆಯಾದರು.

ನಿರ್ದೇಶಕರಾಗಿ ರಾಘವೇಂದ್ರ ಕೆ.ವಿ, ನಾಗೇಶ್ ಕುಮಾರ್ ಹೆಚ್.ಕೆ, ಶಿವಶಂಕರ್ ಎನ್.ಕೆ, ಮನೋಜ್ ಸಿ.ಎನ್ ಸೇರಿದಂತೆ ಇತರ ಸದಸ್ಯರು ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಾಲಾಜಿ ದರ್ಶನ್ ಸಂಘದ ಸದಸ್ಯರಿಗೆ ಧನ್ಯವಾದ ಸಲ್ಲಿಸಿ, ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವುದಾಗಿ ಆಶ್ವಾಸನೆ ನೀಡಿದರು.

  • ಶ್ರೀನಿವಾಸ್‌ , ಕೊರಟಗೆರೆ.

Leave a Reply

Your email address will not be published. Required fields are marked *