ಚಿಕ್ಕಮಗಳೂರು– ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಕೊಟ್ಟು ಸಕಲ ಜೀ ವಾತ್ಮರಿಗೆ ಲೇಸು ಬಯಸಿದವರು ಬಸವಣ್ಣನವರು ಎಂದು ಕೆಡಿಪಿ ಸದಸ್ಯ ಸಂತೋಷ್ ಲಕ್ಯಾ ಹೇಳಿದರು.
ತಾಲ್ಲೂಕಿನ ಲಕ್ಯಾ ಗ್ರಾಮದ ಪಂಚಾಯಿತಿ ಆವರಣದಲ್ಲಿ ಪ್ರಗತಿಪರ ಗ್ರಾಮಸ್ಥರು ಆಯೋಜಿಸಿದ್ದ ಕರುನಾಡ ಸಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಬಸವಣ್ಣ ಎತ್ತಲ್ಲ, ಈ ಲೋಕದ ಜನರನ್ನು ಎತ್ತಿದವರು ಎಂಬ ಘೋಷ ವಾಕ್ಯದ ಮೂಲಕ ರೈತರ ಬದುಕನ್ನು ಎತ್ತುವ ಕಾರ್ಯವನ್ನು ಎತ್ತುಗಳು ಮಾಡುತ್ತಿವೆ. ಎತ್ತುಗಳನ್ನು ಬಸವಣ್ಣ ಎನ್ನುತಾ ಮಾನವ ದೇವಾ ಬಸವಣ್ಣನನ್ನೇ ಮರೆತರು. ಲೋಕದ ಜನರ ಬದುಕಿಗೆ ಶಕ್ತಿಯನ್ನು ತುಂಬಿದ ಬಸವಣ್ಣ ಅವರನ್ನು ಸ್ಮರಿಸಬೇಕು ಎಂದರು.

ಇದೇ ವೇಳೆ ಗ್ರಾಮಸ್ಥರು ದೇವರ ಗೋವು ಹಾಗೂ ಎತ್ತುಗಳನ್ನು ಪೂಜಿಸುವ ಆಚರಿಸಿದರು. ಬಳಿಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಿಹಿ ಹಂಚಿ ಮೂಲಕ ನಿವಾಸಿಗಳಿಗೆ ಮನವರಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವರಾಜ್, ಲಕ್ಷ್ಮೀಶ್, ಸಿದ್ದೇಶ್, ಚನ್ನಬಸಪ್ಪ, ರೇವಣ್ಣಚಾರ್, ಸುರೇಶ, ಲೋಹಿತ್, ದಿಲೀಪ್, ಸುಜೇಂದ್ರಕುಮಾರ್, ರೋಷನ್ಬೇಗ್, ರಾಮಣ್ಣ, ಪ್ರಭಾಕರ್, ಈರಪ್ಪ, ರಮೇಶ್ ಮತ್ತಿತರರು ಇದ್ದರು.
– ಸುರೇಶ್ ಎನ್.