ಬೇಲೂರು ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ವಿರುದ್ಧ ಅವಿಶ್ವಾಸ ಮಂಡನೆ ಯಶಸ್ವಿ-ಕಾಂಗ್ರೆಸ್ ಸದಸ್ಯರು ಬೆಂಬಲಿಸಿ 17 ಮತಗಳಿಂದ ಅವಿಶ್ವಾಸ ಸಾಬೀತು, ಅಧಿಕಾರದ ಗುದ್ದಲಿಗೀಡಾದ ಅಶೋಕ್

ಬೇಲೂರು: ಬೇಲೂರು ಪುರಸಭೆಯ ಅಧ್ಯಕ್ಷ ಎ.ಆರ್. ಅಶೋಕ್ ವಿರುದ್ಧ ಕಾಂಗ್ರೆಸ್ ಪಕ್ಷದ ಸದಸ್ಯರು ಇಂದು ವೇಲಾಪುರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ಮಂಡನೆ ಸಲ್ಲಿಸಿ ಅದನ್ನು ಯಶಸ್ವಿಗೊಳಿಸಿದರು. ಮಾಜಿ ಸಚಿವ ಬಿ.ಶಿವರಾಂ ಮತ್ತು ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಒಟ್ಟು 17 ಸದಸ್ಯರು ಕೈ ಎತ್ತಿ ಅವಿಶ್ವಾಸಕ್ಕೆ ಬೆಂಬಲ ಸೂಚಿಸಿದರು.

ಹಿಂದಿನ ಬಾರಿ ಶಾಸಕ ಹುಲ್ಲಳ್ಳಿ ಸುರೇಶ್ ಬೆಂಬಲಿತ ಅಶೋಕ್ ಪರ ಸದಸ್ಯರ ಸಾಥ್‌ದಿಂದ ಅವರು ಗದ್ದುಗೆ ಏರಿದ್ದರೂ, ಈ ಬಾರಿ ನ್ಯಾಯಾಲಯದ ತೀರ್ಪು ಬಂಡಾಯ ಸದಸ್ಯರ ಪರವಾಗಿ ಬಂದ ಕಾರಣದಿಂದಾಗಿ ಪೂರಕ ರಾಜಕೀಯ ತಂತ್ರೋಪಾಯದಿಂದ ಅವಿಶ್ವಾಸಕ್ಕೆ ಅಶೋಕ್ ಗೊಳಗಾದರು.

ಈ ನಡುವೆ ಪುರಸಭೆ ಸದಸ್ಯ ಜಿ. ಶಾಂತಕುಮಾರ್ ಮಾತನಾಡಿ, “ಅಶೋಕ್ ಅಧಿಕಾರದ ಲಾಲಸೆಯಿಂದ ಪುರಸಭೆ ಆಡಳಿತವನ್ನು ಗೂಂಡಾಗಿರಿ ಶೈಲಿಯಲ್ಲಿ ನಡೆಸುತ್ತಿದ್ದರು” ಎಂದು ಟೀಕಿಸಿದರು.

– ನೂರ್‌ ಅಹಮ್ಮದ್

Leave a Reply

Your email address will not be published. Required fields are marked *