ಬೇಲೂರು (ಹಾಸನ): ಹಾಸನ ಜಿಲ್ಲೆಯ ಹುಣಸೆಕೆರೆ ಗ್ರಾಮದ 43 ವರ್ಷದ ರಂಗನಾಥ ಬಿನ್ ಸಗನೇಗೌಡ ಎಂಬವರು ಕಳೆದ 6 ತಿಂಗಳುಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪತ್ನಿ ಮಂಜುಳಾ ಅವರು ಬೆಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೂರ್ಣ ವಿವರ:
ರಂಗನಾಥ ಅವರು 2024ರ ಡಿಸೆಂಬರ್ 19ರಂದು ಬೇಕರಿ ಕೆಲಸಕ್ಕಾಗಿ ಹೋಗಿದ್ದು, ಇದುವರೆಗೆ ಮನೆಗೆ ವಾಪಸ್ಸು ಬಂದಿಲ್ಲ. ಈ ಹಿಂದೆ ಅವರು ಅರಸೀಕೆರೆ ಹಾಗೂ ಆಂಧ್ರಪ್ರದೇಶದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ತೀವ್ರ ಹುಡುಕಾಟ ನಡೆಸಿದರೂ ರಂಗನಾಥ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ವೈಶಿಷ್ಟ್ಯಗಳು:
- ವಯಸ್ಸು: 43 ವರ್ಷ
- ಎತ್ತರ: 5.5 ಅಡಿ
- ಚಹರೆ: ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು
- ವಿಶೇಷ ಲಕ್ಷಣ: ಎಡ ಕೆನ್ನೆಯ ಮೇಲೆ ಕಪ್ಪು ಬಣ್ಣದ ಮಚ್ಚೆ ಇರುತ್ತದೆ
ಈ ಬಗ್ಗೆ ಬೆಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಅಥವಾ ಯಾರಿಗಾದರೂ ರಂಗನಾಥ ರವರ ಬಗ್ಗೆ ಮಾಹಿತಿ ತಿಳಿದಿದ್ದರೆ, ದಯವಿಟ್ಟು ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಮಾಹಿತಿ ನೀಡಬೇಕು ಎಂದು ಕುಟುಂಬ ಹಾಗೂ ಪೊಲೀಸರು ವಿನಂತಿಸಿದ್ದಾರೆ:
📞 9480804782, 9480804757, 9480804792, 08177-222444
ರಂಗನಾಥ ರವರ ಪತ್ತೆಗೆ ಸಹಕಾರ ನೀಡುವಂತೆ ಸಾರ್ವಜನಿಕರಿಗೆ ವಿನಂತನೆ ಸಲ್ಲಿಸಲಾಗಿದೆ.
– ನೂರ್ ಅಹಮ್ಮದ್ .