ಚಿಕ್ಕಮಗಳೂರು, ಜೂನ್ 05:- ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಪರಿ ಸರ ದಿನಾಚರಣೆ ಅಂಗವಾಗಿ ಗುರುವಾರ ಭಾರತೀಯ ಜನತಾ ಪಾರ್ಟಿ ನೇಕಾರ ಪ್ರಕೋಷ್ಟ ವತಿಯಿಂದ ಸಸಿ ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಿದರು.
ರಾಜ್ಯ ಎಸ್ ಸಿ ಮೋರ್ಚ ಕಾರ್ಯದರ್ಶಿ ಸೀತಾರಾಮ ಭರಣ್ಯ ಮಾತನಾಡಿ ನಾವುಗಳು ಪರಿಸರವನ್ನು ಸಂರಕ್ಷಿಸುವ ಉದ್ದೇಶದಿಂದ ಗಿಡ ನೆಟ್ಟು ಪೋಷಿಸುವ ಕಾರ್ಯಕ್ರಮಕ್ಕೆ ಪಾಲ್ಗೊಂಡೇವು ಸಸಿಗಳನ್ನು ನೆಡು ವುದಲ್ಲದೆ ಮುಂದೆ ಅವುಗಳನ್ನ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.

ನೇಕಾರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ವಿನೋದ್ ಬೊಗಸೆ ಮಾತನಾಡಿ ಪರಿಸರದ ಸ್ವಚ್ಛತೆ ಕಾಪಾಡುವುದು, ಹಸಿರನ್ನು ಬೆಳಿಸಿ ಉಳಿಸುವುದು, ಮಾಲಿನ್ಯವನ್ನು ತಡೆಗಟ್ಟುವುದು ಹಾಗೂ ಭೂಮಿ ಮೇಲಿರುವ ಪ್ರತಿ ಜೀವಿಗೂ ಸುಸ್ಥಿರ ಜೀವನಕ್ಕೆ ನೆರವಾಗಲು ಪರಿಸರವನ್ನು ಅಣಿಗೊಳಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ ಎಂದರು.
ಜಿಲ್ಲೆಯು ವಿಶ್ವದ ಎರಡನೇ ವಾಸಿಸಲು ಯೋಗ್ಯವಾಗಿರುವಂತ ಸ್ಥಳವಾಗಿದೆ, ಪರಿಸರವನ್ನು ಉಳಿಸು ವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ, ಪ್ರತಿಯೊಂದು ಜೀವರಾಶಿಗಳಿಗೂ ಬದುಕಲು ಅವಕಾಶ ಮಾಡಿಕೊ ಡುವುದು ಬುದ್ಧಿವಂತ ಜೀವಿಯಾದ ಮನುಷ್ಯನ ಕರ್ತವ್ಯವಾಗಿದೆ ಎಂದು ತಿಳಿಸಿಕೊಟ್ಟರು, ಹಾಗೆ ಪ್ರತಿಯೊಂ ದು ಸಸಿಗಳನ್ನು ಅವರವರ ತಾಯಿ ಹೆಸರಿನಲ್ಲಿ ನೆಡಲಾಯಿತು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ|| ಮೋಹನ್ ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಧುಕುಮಾರ್ ರಾಜ್ ಅರಸ್, ಮಾಧ್ಯಮ ಪ್ರಮುಖ ದಿನೇಶ್ ಕೋಟೆ, ಮಾಧ್ಯಮ ಸಹ ಪ್ರಮುಖ ಕೇಶವ ಹಿರೇಮಗಳೂರು, ರೈತ ಮೋರ್ಚಾ ಅಧ್ಯಕ್ಷ ನಿಶಾಂತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜೆ ಡಿ ಲೋಕೇಶ್ ಇದ್ದರು.
– ಸುರೇಶ್ ಎನ್.