ಚಿಕ್ಕಮಗಳೂರು- ಸಂಘಟನೆ ಜನಪರವಾಗಿರುವುದು ಹೆಮ್ಮೆಯ ಸಂಗತಿ : ಡಾ|| ಮೋಹನ್

ಚಿಕ್ಕಮಗಳೂರು, ಜೂನ್ 16:- ಕನ್ನಡಿಗರ ನೆಲ, ಜಲದ ಸ್ವಾಭಿಮಾನ ಸಂಕೇತವಾಗಿ ಹೋರಾಡುತ್ತಿ ರುವ ಕನ್ನಡಸೇನೆ ಸಂಘಟನೆ ಸಮಾಜದಲ್ಲಿ ಜನಪರವಾಗಿ ನಿಂತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಸ್ಪತ್ರೆ ಸರ್ಜನ್ ಡಾ|| ಮೋಹನ್‌ಕುಮಾರ್ ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ನಡೆದ ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಅಭಿನಂದನಾ ಸಮಾರ ಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯಾಧ್ಯಕ್ಷರ ಜನ್ಮದಿನವನ್ನು ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ವಿತರಣೆ ಹಾಗೂ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಅಭಿನಂದಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿರುವುದು ಹೆಮ್ಮೆಯ ಸಂಗತಿ. ಮುಂದೆ ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ಸಂಘಟನೆ ತೊಡಗಿಸಿಕೊಂಡು ಬಡವರ, ದೀನದಲಿತರಿಗೆ ಆಸರೆ ನೀ ಡುವಂತಾಲೀ ಎಂದು ಆಶಿಸಿದರು.‌

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ ಬಡವರು, ಮದ್ಯಮವರ್ಗದವರಿಗೆ ಜಿಲ್ಲಾಸ್ಪತ್ರೆ ದೇಗುಲವಿದ್ದಂತೆ. ಪ್ರಾಣದ ಹಂಗು ತೊರೆದು ದಿನದ ಇಪ್ಪತ್ತಾಲ್ಕು ವರ್ಷಗಳ ಕಾಲ ಚಿಕಿತ್ಸೆ ಕೊಡುವ ವೈದ್ಯ ರುಗಳು ದೈವಸ್ವರೂಪಿಗಳಾದ ಕಾರಣ ರಾಜ್ಯಾಧ್ಯಕ್ಷ ಜನ್ಮದಿನವನ್ನು ಪ್ರಾಣ ಉಳಿಸುವ ವೈದ್ಯರಿಗೆ ಗೌರವಿಸುವ ಮೂಲಕ ಅರ್ಪಿಸಲಾಗಿದೆ ಎಂದರು.

ಕೋವಿಡ್ ಸಮಯದಲ್ಲಿ ಮನೆಮಂದಿಯೇ ಸ್ವಂತ ಕುಟುಂಬಸ್ಥರನ್ನು ಮುಟ್ಟಲು ಭಯಬೀಳುವ ವೇಳೆ ಯಲ್ಲಿ ಬದುಕಿನ ಆಸೆಯನ್ನು ಬದಿಗಿರಿಸಿ,ರೋಗಿಗಳ ರಕ್ಷಣೆಗೆ ಎಲೆಮರೆಕಾಯಿಯಂತೆ ಮೊಟ್ಟಮೊದಲು ಚಿಕಿ ತ್ಸೆಗೆ ಮುಂದಾದ ವೈದ್ಯಕೀಯ ಲೋಕದ ಸೇವೆ ಸ್ಮರಿಸುವುದು ಕರ್ತವ್ಯ ಎಂದು ಹೇಳಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ರೋಗಿಗಳ ಆರೋಗ್ಯದ ಸುರಕ್ಷಿ ತೆ, ಧೈರ್ಯ ತುಂಬುವ ಕಾಳಜಿ ವಹಿಸುವ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿಗಳು ಬಡವರ ಪಾಲಿಗೆ ಪ್ರತ್ಯಕ್ಷ ದೇವರೆಂದರೆ ತಪ್ಪಲಾಗುವುದಿಲ್ಲ. ಆ ನಿಟ್ಟಿನಲ್ಲಿ ಕನ್ನಡಸೇನೆ ಸಾಮಾಜಿಕ ಹೋರಾಟದ ಜೊತೆಗೆ ಈ ರೀತಿಯ ವಿಶೇಷ ಕಾರ್ಯಕ್ರಮ ಮಾಡಿರುವುದು ಖುಷಿಯ ಸಂಗತಿ ಎಂದರು.

ಇದೇ ವೇಳೆ ಜಿಲ್ಲಾಸ್ಪತ್ರೆ ವೈದ್ಯರಾದ ಡಾ|| ಚಂದ್ರಶೇಖರ್, ಡಾ|| ಮುರುಳಿಧರ್, ಡಾ|| ವೆಂಕಟೇಶ್, ಡಾ|| ನಾಗರಾಜ್ ಸೇರಿದಂತೆ ಒಟ್ಟು 14 ಮಂದಿಗೆ ಜನ್ಮದಿನದ ಪ್ರಯುಕ್ತ ಗೌರವಿಸಲಾಯಿತು. ಇದಕ್ಕೂ ಮುನ್ನ ಆಸ್ಪತ್ರೆ ಶಿವನ ದೇವಾಲಯದಲ್ಲಿ ರಾಜ್ಯಾಧ್ಯಕ್ಷರು ಕನ್ನಡಸೇವೆಯಲ್ಲಿ ಹೆಚ್ಚುತೊಡಗಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಭೀಮ್‌ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ವಕೀಲರ ಸಂಘದ ಕಾರ್ಯದರ್ಶಿ ಅನಿ ಲ್‌ಕುಮಾರ್, ಹಿರಿಯ ವೈದ್ಯ ಡಾ|| ಕೆ.ಸುಂದರಗೌಡ, ಕನ್ನಡಸೇನೆ ಮುಖಂಡರುಗಳಾದ ಜಯಪ್ರಕಾಶ್, ಲಕ್ಷ್ಮಣ್, ರವಿ, ಶಂಕರೇಗೌಡ, ಸತೀಶ್, ಅನ್ವರ್, ಕುಮಾರ್, ಆಶ್ರಫ್, ಪಾಪಣ್ಣ, ವಿನಯ್ ಮತ್ತಿತರರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *