ಚಿಕ್ಕಮಗಳೂರು-ಸಹಕಾರಿ ಸಂಘ ಉತ್ತಮ ವಹಿವಾಟಿನಿಂದ ವೃದ್ದಿಯಾಗಲಿ- ಪಲ್ಲವಿ ರವಿ

ಚಿಕ್ಕಮಗಳೂರು, ಮೇ.29:- ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉದಯಿಸಿರುವ ಸೌಹಾರ್ದ ಸಹ ಕಾರ ಸಂಘ ಜನಸಾಮಾನ್ಯರೊಂದಿಗೆ ಉತ್ತಮ ವಹಿವಾಟು ನಡೆಸುವ ಮೂಲಕ ಆರ್ಥಿಕವಾಗಿ ವೃದ್ದಿಯಾಗಲಿ ಎಂದು ಪಲ್ಲವಿ ಸಿ.ಟಿ.ರವಿ ಹೇಳಿದರು.

ನಗರದ ಎಂ.ಜಿ.ರಸ್ತೆ ಸಮೀಪದ ಸೂರಪ್ಪ ಬೀದಿಯಲ್ಲಿ ನೂತನವಾಗಿ ಸ್ಥಾಪಿತವಾದ ವೃದ್ದಿ ಸೌಹಾರ್ದ ಸಹಕಾರಿ ಸಂಘದ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಸಂಘಗಳು ಸರ್ಕಾರದ ಮೂಲ ಧ್ಯೇಯದ್ದೇಶದಿಂದ ನಡೆದುಕೊಳ್ಳುವುದು ಆಡಳಿತ ಮಂ ಡಳಿ ಕರ್ತವ್ಯ. ಜನತೆಯೊಂದಿಗೆ ಒಡನಾಟ ಹೊಂದಬೇಕು. ಸಿಬ್ಬಂದಿಗಳು ಗ್ರಾಹಕರೊಂದಿಗೆ ನಿಕಟ ಸಂಪ ರ್ಕ ಇಟ್ಟುಕೊಂಡಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಸಂಘ ಹೆಸರು ಸಂಪಾದಿಸಲು ಸಾಧ್ಯ ಎಂದರು.

ಬಡವರ ಕಲ್ಯಾಣದ ದೃಷ್ಟಿಯಿಂದ ಉದಯಿಸಿರುವ ಸೌಹಾರ್ದ ಸಂಘವು ನಿಷ್ಟೆ, ಪ್ರಾಮಾಣಿಕತೆಯಿಂದ ವಹಿವಾಟಿನಿಂದ ನಡೆಸಬೇಕು. ನಂಬಿಕೆ, ವಿಶ್ವಾಸ ಗಳಿಸುವುದು ಸುಲಭದ ಮಾತಲ್ಲ. ಹೀಗಾಗಿ ಒಮ್ಮೆ ನಂಬಿಕೆ ಉಳಿಸಿಕೊಂಡಲ್ಲಿ ಸೌಹಾರ್ದ ಸಂಘವು ಬೆಳವಣಿಗೆಯತ್ತ ಸಾಗಲಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಮಾತನಾಡಿ ಸೌಹಾರ್ದ ಸಂಘದ ಆಡಳಿತ ಮಂಡಳಿ ಬಹು ತೇಕ ಯುವಸಮೂಹದ ತಂಡವಾಗಿರುವ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ನಡೆದುಕೊಂಡು ಸಾಗಲಿ. ಮುಖ್ಯ ವಾಗಿ ಸಿಇಓ ಜವಾಬ್ದಾರಿ ಸಂಘಕ್ಕೆ ಅನಿವಾರ್ಯವಾಗಿದ್ದು ಆ ನಿಟ್ಟಿನಲ್ಲಿ ಕ್ರಿಯಾಶೀಲ ಸಿಇಓ ಸಿಕ್ಕಿರುವುದರಿ ಂದ ಅತ್ಯುತ್ತಮವಾಗಿ ಬೆಳವಣಿಗೆಯಾಗಲಿ ಎಂದು ಆಶಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಮಾತನಾಡಿ ಜನತೆಯ ಅನುಕೂಲತೆ ದೃಷ್ಟಿಯಿಂದ ನಗರ ದಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿದ್ದಾರೆ. ಗ್ರಾಹಕರ ಉಪಯೋಗದ ನಿಟ್ಟಿನಲ್ಲಿ ಸಂಸ್ಥೆಯನ್ನು ಮುನ್ನೆಡೆ ಸಬೇಕು. ಪ್ರಸ್ತುತ ಸಂಘದಲ್ಲಿ ನಿಗಧಿಪಡಿಸಿರುವ ಬಡ್ಡಿದರ ಮೊದಲ ವರ್ಷದ ಕೊಡುಗೆಯಾಗಬೇಕು. ಜೊತೆ ಗೆ ಇತರೆ ಬ್ಯಾಂಕ್‌ಗಿಂತ ಕಡಿಮೆ ದರದಲ್ಲಿ ಬಡ್ಡಿ ನಿಗಧಿಗೊಳಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸಂಘಕ್ಕೆ ಸದಸ್ಯರಾಗಲಿದ್ದಾರೆ ಎಂದರು.

ವೃದ್ದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಿ.ಟಿ.ಜಯವರ್ಧನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಸಂಘದಲ್ಲ್ಲಿ ಚಿನ್ನ, ವಾಹನ, ಆಸ್ತಿ ಹಾಗೂ ವೈಯಕ್ತಿಕ ಸಾಲವನ್ನು ವಿತರಿಸುವ ಗುರಿ ಹೊಂದಲಾಗಿ ದೆ. ಆದರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ದಾಖಲಾತಿಗಳು ಬಹಳಷ್ಟಿದೆ. ಆದರೆ ನಮ್ಮ ಸಂಸ್ಥೆಯಲ್ಲಿ ನಿಗ ಧಿತ ದಾಖಲಾತಿಗಳ ಮೂಲಕ ಸಾಲಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ನೂತನ ಆಡಳಿತ ಮಂಡಳಿ : ಸಿ.ಟಿ.ಜಯವರ್ಧನ್ (ಅಧ್ಯಕ್ಷ), ಸಿ.ಆರ್.ಮಹೇಶ್ (ಉಪಾಧ್ಯಕ್ಷ), ಅಣ್ಣಪ್ಪ ಎಂ.ಕುಡಲ್ಕರ್, ಉದಯಶಂಕರ್ ಭಟ್, ಮನೀಶ್ ಜೈನ್, ಪವನ್‌ಕುಮಾರ್, ಹೆಚ್.ಎಲ್.ಪ್ರಶಾಂ ತ್‌ಕುಮಾರ್, ಕೆ.ಆರ್. ಚಂದನ್, ವೆಂಕಟೇಶ್ ಎ.ಶೇಟ್, ಅರುಣ್ ಭಾರಧ್ವಾಜ್, ಪಿ.ಪ್ರಜ್ಞ ಗಣಪತಿ, ಧನ್ಯ ಹೆಚ್.ಗೌಡ (ನಿರ್ದೇಶಕರುಗಳು).

ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ರಾಜ್ಯ ಎಸ್ಸಿ ಮೋ ರ್ಚಾ ಕಾರ್ಯದರ್ಶಿ ಸೀತಾರಾಮಭರಣ್ಯ, ನಗರಾಧ್ಯಕ್ಷ ಪುಷ್ಪರಾಜ್, ಯುವಮೋರ್ಚಾ ಅಧ್ಯಕ್ಷ ಸಂತೋ ಷ್ ಕೋಟ್ಯಾನ್, ತಾ.ಪಂ. ಅಧ್ಯಕ್ಷ ನೆಟ್ಟಕೆರೆಹಳ್ಳಿ ಜಯಣ್ಣ, ಮುಖಂಡರುಗಳಾದ ಹೆಚ್.ಕೆ.ಕೇಶವಮೂರ್ತಿ, ಗೌತಮ್, ಕೆ.ಪಿ.ಮಧು, ಭೈರಣಿವೈನ್ಸ್ ಮಾಲೀಕ ತಿರುಪಾಲಯ್ಯ, ಸಂಘದ ಸಿಇಓ ಮಂಜುನಾಥ್ ಮತ್ತಿತ ರರು ಉಪಸ್ಥಿತರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *