ಚಿಕ್ಕಮಗಳೂರು, ಜೂನ್ 05:- ನಾಡಿನ ಭಾಷಾ ಸಂಸ್ಕೃತಿಯನ್ನು ಎಲ್ಲೆಡೆ ವಿಸ್ತರಿಸಲು ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಸಾಪವನ್ನು ಸ್ಥಾಪಿಸಿ ನೆಲ, ಜಲ, ಭಾಷೆಯ ಸ್ವಾಭಿಮಾನವನ್ನು ಎತ್ತಿಹಿಡಿದವರು ಎಂದು ಪರಿಸರ ಮೌಲ್ಯಮಾಪನ ತಜ್ಞರ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ನಗರದ ನೇಕಾರ ಬೀದಿಯ ಶ್ರೀ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ಬುಧವಾರ ಸಂ ಜೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ಧ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ, ಅಂಬಳೆ ಹೋಬಳಿ ಘಟಕ ಸೇವಾಧೀಕ್ಷೆ ಸಮಾರಂಭ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಒಡೆಯ ರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುಮಾರು ನಾ ಲ್ಕು ದಶಕಗಳ ಕಾಲ ಮೈಸೂರನ್ನು ಆಳಿದರು. ಅವರು ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ಆಡಳಿತಗಾರರಾಗಿ ದ್ದರು. ಜನಸಾಮಾನ್ಯರ ಏಳಿಗೆಯೇ ಮುಖ್ಯವೆಂದು ನಂಬಿ ಕೆಲಸ ಮಾಡಿದವರು ಎಂದು ಹೇಳಿದರು.

ಉಳ್ಳವರ ಪಾಲಿಗೆ ಸೀಮಿತವಾಗಿ ಸೌಲಭ್ಯಗಳನ್ನು ಪ್ರತಿ ಸಮಾಜದವರಿಗೆ ಕೊಡಲು ಮೀಸಲಾತಿ ತಂದ ವರು. ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕಾರ್ಖಾನೆ ಸ್ಥಾಪಿಸಿ ಬಡವರಿಗೆ ಉದ್ಯೋಗವನ್ನು ಕರುಣಿಸಿದ್ದರು. ಮೂಡನಂಬಿಕೆ, ಕಂದಾಯ ವಿರುದ್ಧ ಹೋರಾಡಿದ ಅವರು ದೇವದಾಸಿ ಪದ್ಧತಿ ನಿರ್ಮೂಲನೆಗೊಳಿದರು ಎಂದರು.
ಇದೀಗ ಅಂಬಳೆ ಕಸಾಪ ನೇತೃತ್ವ ವಹಿಸಿಕೊಂಡಿರುವ ನೂತನ ಅಧ್ಯಕ್ಷರು ಗ್ರಾಮೀಣ ಭಾಗದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ಥಳೀಯ ಕಲಾವಿದರು, ಲೇಖಕರು, ಬರಹ ಗಾರರನ್ನು ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಅತ್ಯಂತ ಪ್ರಾಮಾಣಿಕತೆಯಿಂದ ಕನ್ನಡ ಕಟ್ಟು ವ ಕೆಲಸ ಮಾಡುವ ಆಶಯವಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಅಂಬಳೆ ಹೋಬಳಿಗೆ ನೂತನ ಸಾರಥ್ಯ ಹೊತ್ತಿರುವ ಮಾಸ್ತೇಗೌಡರು ಕನ್ನಡ ರಥವನ್ನು ಹೋಬಳಿ ಯುದ್ದಕ್ಕೂ ಎಳೆಯುವಂತಾ ಗಲೀ. ಜೊತೆಗೆ ಜಿಲ್ಲಾ ಸಮಿತಿಯು ಸಂಪೂರ್ಣ ಸಹಕಾರ ನೀಡಿ ಭಾಷಾ ಸಂಸ್ಕೃತಿ ಬೆಳವಣಿಗೆಗೆ ಸಹಕರಿ ಸಲಾಗುವುದು ಎಂದು ತಿಳಿಸಿದರು.
ಅಂಬಳೆ ಹೋಬಳಿ ಕಸಾಪ ನೂತನ ಅಧ್ಯಕ್ಷ ಕೆ.ಸಿ.ಮಾಸ್ತೇಗೌಡ ಮಾತನಾಡಿ ಹಿರಿಯ ಮಾರ್ಗದರ್ಶ ನದೊಂದಿಗೆ ಕನ್ನಡದ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ದೈನಂದಿನ ವೇಳೆಯನ್ನು ಕನ್ನಡಕ್ಕಾಗಿ ಮುಡಿಪಿ ಡು ತ್ತೇನೆ. ಜೊತೆಗೆ ಭುವನೇಶ್ವರಿ ತಾಯಿಯ ಸೇವೆಯಲ್ಲಿ ತೊಡಗಿ ಕೊಟ್ಟಿರುವ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆ ದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ಅಂಬಳೆ ಹೋಬಳಿ ನಿಯೋಜಿತ ಅಧ್ಯಕ್ಷ ಕೆ.ಸಿ.ಮಾಸ್ತೇಗೌಡ ಅವರಿಗೆ ಕಸಾಪ ಜಿಲ್ಲಾ ಪ್ರ ಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹರಿಹರದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಲಿತ ಶಿವಾನಂದ್, ಮಾಜಿ ಅಧ್ಯಕ್ಷರಾದ ಕೆ.ಇ. ಮಂಜೇಗೌಡ, ಶಾರದಾ ಮಾಸ್ತೇಗೌಡ, ಸದಸ್ಯ ಯಶ್ವಂತ್ರಾಜ್ ಅರಸ್, ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷ ಬೈರೇಗೌಡ, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್, ಕಸಾಪ ಮುಖಂಡರುಗಳಾದ ಶಿವಾನಂದ್, ಟಿ.ಸಂದೀ ಫ್, ಬಸವರಾಜ್, ಡಾ|| ಸತೀಶ್, ಬಲರಾಮ್, ಧರ್ಮೇಗೌಡ, ತಮ್ಮೇಗೌಡ ಉಪಸ್ಥಿತರಿದ್ದರು.
– ಸುರೇಶ್ ಎನ್.