ಚಿಕ್ಕಮಗಳೂರು-ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಕರವೇ ಪ್ರತಿಭಟನೆ

ಚಿಕ್ಕಮಗಳೂರು, ಮೇ.30:- ಇತಿಹಾಸ ಪ್ರಸಿದ್ಧ ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸ ನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಕಮಲ್ ಭಾವಚಿತ್ರಕ್ಕೆ ಶೂಕಾಲಿನಿಂದ ತುಳಿದು, ಚಪ್ಪಲಿ ಯಿಂದ ಒಡೆದು, ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ಹೊರಹಾಕಿದರು.

ಬಳಿಕ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ರಾಜ್ಯಾಧ್ಯಕ್ಷರ ಆದೇಶದಂತೆ ಕರವೇ ಹಾಗೂ ಕೆಚ್ಚದೆಯ ಕನ್ನಡಿಗರು ಕಮಲ್ ಹಾಸನ್ ವಿರುದ್ಧ ರೊಚ್ಚಿಗೆದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಸು ತ್ತಿದ್ದು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸದೇ ಮೊಂಡುತನ ಮುಂದುವರೆಸಿದರೆ ಕಮಲ್‌ನ ಚಿತ್ರ ಹಾಗೂ ಆತನನ್ನು ರಾಜ್ಯದಲ್ಲಿ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಇತ್ತೀಚೆಗೆ ಕನ್ನಡ ನಾಡಿನ ಮಣ್ಣಿನಿಂದಲೇ ಪ್ರಸಿದ್ಧ ಪಡೆಯುತ್ತಿರುವ ಗಾಯಕ ಸೋನುನಿಗಮ್ ಹಾಗೂ ನಟ ಕಮಲ್ ಹಾಸಲ್ ಪದೇ ಪದೇ ಭಾಷೆಯ ಬಗ್ಗೆ ಟೀಕಿಸುವುದು ಅವರ ಯೋಗ್ಯತೆಗೆ ಸರಿಯಲ್ಲ. ಮು ಖ್ಯವಾಗಿ ಕಮಲ್‌ಹಾಸನ್‌ನ ಈ ಹಿಂದೆ ಕನ್ನಡದಲ್ಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಭಾಷೆಯ ಅರಿ ವು ಇಲ್ಲದಿರುವುದು ಶೋಚನೀಯ ಎಂದರು.

ಕನ್ನಡದ ಕೆಲವು ಸಿನಿತಾರೆಯರು ತಮಿಳಿನ ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದು ದುದೈರ್ವ. ಅಲ್ಲದೇ ಕನ್ನಡಕ್ಕಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಡಾ|| ರಾಜ್‌ಕುಮಾರ್ ಪುತ್ರ ಅಂದಿನ ಕಾರ್ಯಕ್ರಮದಲ್ಲಿದ್ದರೂ ಯಾಕೆ ವಿರೋಧಿಸಿಲ್ಲ ಎಂಬುದು ತಿಳಿಯುತ್ತಿಲ್ಲ. ಕನ್ನಡ ಭಾಷೆ, ನೆಲ, ಜಲ ಸ್ವಾ ಭಿಮಾನದ ಬಗ್ಗೆ ಅಪಮಾನ ಮಾಡಿದರೆ ವಿರೋಧಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಬೇಕು ಎಂದು ಹೇಳಿದರು.


ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ ಮಾತನಾಡಿ ಅತಿಹೆಚ್ಚು ಜ್ಞಾನಪೀಠ ಪ್ರಶ ಸ್ತಿಕ್ಕೆ ಭಾಜನವಾಗಿರುವ ಕನ್ನಡ ನಾಡಿನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಕನ್ನಡದ್ರೋಹಿ ಕಮಲ್ ಹಾಸನ್ ನೈತಿಕತೆ, ಮಾರ್ಯದೆಯಿಲ್ಲ. ತಮಿಳಿಗಿಂತ ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವಿ ದೆ ಎಂಬುದನ್ನು ಮರೆತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ಪಂಚಾಕ್ಷರಿ, ಉಪಾಧ್ಯಕ್ಷರಾದ ದಶರಥ ರಾಜ್ ಅರಸ್, ಕೋಟೆ ಮಲ್ಲೇಶ್, ತಾಲ್ಲೂಕು ಅಧ್ಯಕ್ಷ ಮನೋಜ್, ವಕ್ತಾರ ಅಶೋಕ್‌ಕುಮಾರ್, ಮುಖಂಡರುಗಳಾದ ದೇ ವನೂರು ಅಶೋಕ್, ರುದ್ರೇಶ್ ಸಿಂಹಾದ್ರಿ, ಇರ್ಷಾದ್ ಅಹ್ಮದ್, ರಾಧಾ, ರೇಖಾ, ಕಿಟ್ಟಿ, ಪೂರ್ಣಿಮಾ, ಶಶಿ ಆಣೂರು, ಚಂದನ್, ನಾಗಲತಾ, ಅನ್ನ ಪೂರ್ಣ, ರಾಜೇಶ್ವರಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *