ಚಿಕ್ಕಮಗಳೂರು, ಜೂನ್ 04:- ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಆಜಾ ದ್ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಕರವೇ ರಾಜ್ಯಾಧ್ಯಕ್ಷ ರಾಜ್ಪ್ರಶಾಂತ್ ಮಾತನಾಡಿ ಕನ್ನಡ ಭಾಷೆಗೆ ಕ್ರಿ.ಶ.400 ಕಾಲದಲ್ಲಿ ದೊರೆತಿರುವ ಹಲ್ಮಿಡಿ ಶಾಸನವೇ ಅತಿದೊಡ್ಡ ಮೂಲಾಧಾರ. ಆದರೂ ಕನ್ನಡ ನಾಡಿನ ನೆಲ, ಜಲ ಹಾಗೂ ಭಾಷೆಯ ಬಗ್ಗೆ ಅಗೌರವ ತೋರಿಸಿರುವ ಕಮಲ್ ಕೂಡಲೇ ಕ್ಷಮೆಯಾಚಿಸಬೇಕು ಎಂದರು.

ವಿಶೇಷ ಸಂಸ್ಕೃತಿ, ಸಂಪ್ರದಾಯ ಹಾಗೂ ಕವಿಗಳು ಉದಯಿಸಿರುವ ಕನ್ನಡನಾಡು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ರಾಷ್ಟçದಲ್ಲೇ ಮನ್ನಣೆಯನ್ನು ಗಳಿಸಿಕೊಂಡಿದೆ. ದಾರ್ಶನಿಕರು, ವಚನಕಾ ರರ ತವರೂ ರಾದ ಕರ್ನಾಟಕ ಇಡೀ ವಿಶ್ವಾದ್ಯಂತ ಭಾಷೆಯ ಸೊಗಡನ್ನು ಹೊಂದಿದೆ ಎಂದರು.

ಕರ್ನಾಟಕದ ಪುಣ್ಯಭೂಮಿಯಲ್ಲಿ ಜನಿಸಿದ ಅನೇಕ ನಟ-ನಟಿಯರು ಪರಭಾಷೆಗಳ ಚಿತ್ರಗಳಲ್ಲಿ ನಟಿಸಿ ದ್ದರೂ ಆಯಾ ಭಾಷೆಯನ್ನು ಗೌರವಿಸಿದ್ದಾರೆ. ಆದರೆ ಕಮಲ್ಹಾಸನ್ ಕನ್ನಡ ಚಿತ್ರಗಳಲ್ಲೂ ನಟಿಸಿಯೂ ಕೂಡಾ ತಮಿಳಿನಿಂದ ಕನ್ನಡ ಜನಿಸಿತು ಎಂಬ ಹೇಳಿಕೆ ನೀಡುವುದು ತೀವ್ರ ಖಂಡನೀಯ ಎಂದು ಹೇಳಿದರು.
ಕಮಲ್ರ ಹೇಳಿಕೆ ನೇರವಾಗಿ ಆರೂವರೆ ಕೋಟಿ ಕನ್ನಡಿಗರು ಹಾಗೂ ಭಾಷಾ ಇತಿಹಾಸಕಾರರಿಗೆ ನೇ ರವಾಗಿ ನೋವುಂಟಾಗಿದೆ. ಈ ಸಂಬAಧ ಪತ್ರಿಕಾಗೋಷ್ಠಿಗಳಲ್ಲಿ ಕಮಲ್ ಹೇಳಿಕೆ ಬಗ್ಗೆ ಕ್ಷಮೆ ಕೇಳದೇ ಸಮ ರ್ಥನೆಗೆ ಮುಂದಾಗಿರುವುದು ಸರಿಯಲ್ಲ. ಕನ್ನಡಕ್ಕೆ ವಿಶಿಷ್ಟ ಸ್ಥಾನಮಾನ ಇರುವುದರಿಂದ ನೋಟಿನಲ್ಲಿ ಕನ್ನಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಎಂದರು.

ಹೀಗಾಗಿ ನಟ ಕಮಲ್ ಹಾಸನ್ ಸಾರ್ವಜನಿಕರ ಎದುರು ಬಹಿರಂಗವಾಗಿ ಕ್ಷಮೆಯಾಚಿಸಿದರೆ ಒಳಿತು. ಇಲ್ಲವಾದರೆ ಕಮಲ್ ನಟನೆಯ ಯಾವುದೇ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಗೊಳಿಸಲು ಬಿಡದೇ ಎಲ್ಲಾ ಚಿತ್ರ ಮಂದಿರಗಳಲ್ಲಿ ಪ್ರತಿಭಟಿಸಿ ನಿಷೇಧ ಹೇರಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಕಾರ್ಯದರ್ಶಿ ರವಿಚಂದ್ರ, ಮುಖಂಡರುಗಳಾದ ಮಂಜುನಾಥ್, ಸತೀಶ್, ಹಾಲಪ್ಪ, ಅಭಿ, ಪೂರ್ಣೇಶ್, ನಟರಾಜ್, ಅರುಣ್ಕುಮಾರ್, ಭರತ್, ಚಂದ್ರು, ಉಮೇಶ್ ಮತ್ತಿತರರಿದ್ದರು.
– ಸುರೇಶ್ ಎನ್.