ಚಿಕ್ಕಮಗಳೂರು, ಜೂನ್12:- ಸರ್ಕಾರದ ಮಟ್ಟದಲ್ಲಿ ಅಧಿಕೃತಗೊಂಡಿರುವ ಹೋಂಸ್ಟೇಗಳಿಗೆ ಜಿಲ್ಲಾ ಡಳಿತ ನವೀಕರಣಗೊಳಿಸದಿರುವ ಕಾರಣ ಹೋಂಸ್ಟೇ ಮಾಲೀಕರು ತೀವ್ರ ಕಂಗಾಲಾಗಿ ಉದ್ಯಮವನ್ನು ಮುಂದುವರೆಸುವುದೇ ಕಷ್ಟವಾಗುತ್ತಿದೆ ಎಂದು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್.ತೇಜಸ್ವಿ ಹೇಳಿದರು.
ನಗರದಲ್ಲಿ ಚಿಕ್ಕಮಗಳೂರು ಹೋಂಸ್ಟೇ ಅಸೋಸಿಯೇಷನ್ನಿಂದ ಬುಧವಾರ ಸಂಜೆ ಏರ್ಪಡಿಸಿದ್ಧ ಹೋಂಸ್ಟೇ ಮಾಲೀಕರ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಎರಡು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿ ಹೋಂಸ್ಟೇ ಉದ್ಯಮದಲ್ಲಿ ನಿರತರಾಗಿದ್ದೇವೆ. ಆ ದರೆ ಕಳೆದ ಸಾಲಿನಿಂದ ಜಿಲ್ಲಾಡಳಿತ ಹೋಂಸ್ಟೇ ಪರವಾನಗಿಗೆ ದಾಖಲೆ ಸಮೇತ ಸಲ್ಲಿಸಿದರೂ ನವೀಕರಣ ಗೊಳಿಸದೇ ಸತಾಯಿಸುತ್ತಿದ್ದು, ಒಂದು ವೇಳೆ ಹೋಂಸ್ಟೇಗಳಲ್ಲಿ ಅವಘಡಗಳು ಸಂಭವಿಸಿದರೆ ನೇರಹೊಣೆ ಹೋಂಸ್ಟೇ ಮಾಲೀಕರಿಗೆ ಹೊರಿಸಿ ಪರವಾನಗಿ ರದ್ದುಪಡಿಸುತ್ತಾರೆ ಎಂದರು.

ಹೋಂಸ್ಟೇ ನವೀಕರಣ ಸಂಬಂಧ ಜಿಲ್ಲಾಡಳಿತಕ್ಕೆ ಅನೇಕ ಭಾರಿ ಮನವಿ ಸಲ್ಲಿಸಿದರೂ ಜಿಲ್ಲಾಧಿಕಾರಿಗ ಳು ಹೊಸ ಮಾರ್ಗಸೂಚಿಗಳಿರುವ ಕಾರಣ ಸದ್ಯದಲ್ಲೇ ಮಾಡಲಾಗುವುದಿಲ್ಲ ಎನ್ನುತ್ತಾರೆ. ಒಂದು ವೇಳೆ ಹಿಂದಿನ ಮಾರ್ಗಸೂಚಿಯನ್ವಯ ನವೀಕರಿಸಲು ತಿಳಿಸಿದರೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳುವ ಮೂ ಲಕ ಹೋಂಸ್ಟೇ ಮಾಲೀಕರಿಗೆ ಸತಾಯಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಜಿಲ್ಲಾಡಳಿತ ಬಳಿ ಅಸೋಸಿಯೇಷನ್ ಅಂಗೀಕೃತಗೊಂಡಿರುವ ಸುಮಾರು 90ಕ್ಕೂ ಹೆಚ್ಚು ಹೋಂಸ್ಟೇಗಳ ನವೀಕರಣಗೊಳ್ಳಬೇಕಿದೆ. ಈ ನಡುವೆ ಜಿಲ್ಲಾಧಿಕಾರಿ ವರ್ಗಾವಣೆಗೊಂಡಲ್ಲಿ ನೂತನ ಅಧಿ ಕಾರಿಗಳು ಮತ್ತೆ ಸಮೀಕ್ಷೆಯಲ್ಲಿ ಸಮಯ ವ್ಯರ್ಥವಾಗಲಿದೆ. ಹೀಗಾಗಿ ಜಿಲ್ಲಾಡಳಿತ ಮೆಲ್ನೋಟಕ್ಕೆ ಸ್ಪಂದಿಸುವ ಬದಲು ನೇರವಾಗಿ ಹೋಂಸ್ಟೇ ಪರವಾನಗಿ ನವೀಕರಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಹೋಂಸ್ಟೇ ಉದ್ಯಮಕ್ಕಾಗಿ ಪೊಲೀಸ್ ಹಾಗೂ ಗ್ರಾ.ಪಂ. ನಿರಾಕ್ಷೇಪಣಾ ಪ್ರಮಾಣಪತ್ರ ಸಾ ಕಾಗಿತ್ತು. ಆದರೀಗ ಬೆಂಗಳೂರು ಪ್ರವಾಸೋದ್ಯಮ ಆಯುಕ್ತರು ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ, ಜಿ.ಪಂ., ತಾ.ಪಂ. ಪ.ಪಂ., ನಗರಸಭೆ, ಪುರಸಭೆ, ಆಹಾರ ಇಲಾಖೆ, ಆರೋಗ್ಯ ಇಲಾಖೆಗಳ ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ ಹೊಸ ಸುತ್ತೋಲೆ ಹೊರಡಿದ್ದು, ಸರ್ಕಾರದ ಮಟ್ಟಿನಲ್ಲಿ ಯಾವುದೇ ಈ ರೀತಿಯ ನಿಯ ಮಗಗಳು ಜಾರಿಯಾಗಿಲ್ಲ ಎಂದರು.

ಅಲ್ಲದೇ ಹೋಂಸ್ಟೇ ಉದ್ಯಮ ನಡೆಸಲು ಆಯಾ ಗ್ರಾ.ಪಂ. ಆಡಳಿತ ವರ್ಷಕ್ಕೆ ಶುಲ್ಕವನ್ನು ಪಡೆಯು ತ್ತಿದೆ. ಕಾನೂನಿನ್ವಯ ಮನೆಕಂದಾಯ ಶುಲ್ಕವನ್ನು ಗ್ರಾ.ಪಂ. ಆಡಳಿತ ಕಟ್ಟಿಸಿಕೊಳ್ಳದೇ ಹೆಚ್ಚಾಗಿ ಪಡೆಯುತ್ತಿ ದ್ದು ಇದರಿಂದ ಸ್ಥಳೀಯ ಹೋಂಸ್ಟೇ ಮಾಲೀಕರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂದರು.
ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಈ ದ್ವಂದ ನಿಲುವಿನಿಂದ ಅಧಿಕೃತ ಹೋಂಸ್ಟೇ ಮಾಲೀಕ ರಿಗೆ ತೀವ್ರ ಸಮಸ್ಯೆಯಾಗಿ ಉದ್ಯಮ ನಡೆಸುವುದು ತೀವ್ರ ದುಸ್ತರವಾಗಿದೆ. ಹೀಗಾಗಿ ಹೋಂಸ್ಟೇ ಮಾಲೀಕರಿಗೆ ಸುಗಮ ರೀತಿಯಲ್ಲಿ ಉದ್ಯಮಕ್ಕೆ ಅನುಕೂಲವಾಗಲು ಕಾನೂನು ರೂಪಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡ ಬೇಕು ಎಂದರು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಅನ್ಸರ್ ಅಹ್ಮದ್, ಖಜಾಂಚಿ ಅಕ್ಷತಾ ಪ್ರಸನ್ನ, ನಿರ್ದೇಶಕರಾದ ಗಿರೀಶ್ ಹೊಲದಗದ್ದೆ, ಉತ್ತಮ್ ಹುಲಿಕೆರೆ, ದಯಾನಂದ ಮಾ ಕೋಡ್, ಶ್ರೀದೇವ್ ಹುಲಿಕೆರೆ, ಶಾಂತನಾಗೇಶ್ ಬೆಟ್ಟದಮರಡಿ, ಕೆ ಎಚ್ ವೆಂಕಟೇಶ ಕೊಳ್ಳಿಬೈಲ್, ಮಮತಾ ಪೂರ್ಣೇಶ್, ಟಿ.ಡಿ.ಮಲ್ಲೇಶ್ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
- ಸುರೇಶ್ ಎನ್.