ಚಿಕ್ಕಮಗಳೂರು- ದೇವಾಲಯ ಜೀರ್ಣೋದ್ದಾರಕ್ಕೆ 1 ಲಕ್ಷ ರೂ. ದೇಣಿಗೆ

ಚಿಕ್ಕಮಗಳೂರು, ಜೂನ್ 04:- ತಾಲ್ಲೂಕಿನ ಬೆಳವಾಡಿ ಸಮೀಪದ ಬಸವನಕೋಡಿ ಗ್ರಾಮದ ಬಸವೇ ಶ್ವರ ದೇವಾಲಯದ ಜೀರ್ಣೋದ್ದಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ.ವೀರೇಂದ್ರ ಹೆಗ್ಗಡೆ ಒಂದು ಲಕ್ಷ ರೂ. ಡಿಡಿಯನ್ನು ದೇವಸ್ಥಾನ ಸಮಿತಿಗೆ ತಾಲ್ಲೂಕು ಯೋಜನಾಧಿಕಾರಿ ರಮೇಶ್ ನಾಯ್ಕ್ ಮೂಲಕ ಹಸ್ತಾಂತರಿಸಿದರು.‌

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಶ್ರೀಧರ್, ಗ್ರಾಮ ಪಂಚಾಯ್ತಿ ಸದಸ್ಯ ಮಧುಕುಮಾರ್, ಊರಿನ ಹಿರಿಯರಾದ ಪುಟ್ಟೇಗೌಡ, ಸಮಿತಿ ಸದಸ್ಯ ರಾಜು, ಮೇಲ್ವಿಚಾರಕ ದೀ ಪಕ್, ಸೇವಾ ಪ್ರತಿನಿಧಿ ಶೀಲಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

  • ಸುರೇಶ್‌ ಎನ್.

Leave a Reply

Your email address will not be published. Required fields are marked *