ಚಿಕ್ಕಮಗಳೂರು, ಜೂನ್ 16:- ವಿದ್ಯಾರ್ಥಿಗಳನ್ನು ಭವ್ಯ ಭಾರತದ ಸತ್ಪ್ರಜೆಗಳಾಗಿ ರೂಪಿಸಿ ಸಮಾಜದ ಒಂದು ಹಂತಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಹೇಳಿದರು.
ಕಡೂರು ತಾಲ್ಲೂಕಿನ ಎಸ್.ಕೋಡಿಹಳ್ಳಿ ವಾಸಿಯಾದ ಚಂದ್ರಪ್ಪನವರು ಜ್ಯೂನಿಯರ್ ಕಾಲೇಜು ಉಪ ನ್ಯಾಸ ವೃತ್ತಿಯಿಂದ ನಿವೃತ್ತರಾದ ಹಿನ್ನೆಲೆಯೆಲ್ಲಿ ಸ್ನೇಹಿತರು ಮನೆಗೆ ಭೇಟಿ ನೀಡಿ ಗೌರವ ಸಮರ್ಪಿಸಿದರು.

ಸಾವಿರಾರು ಮಕ್ಕಳನ್ನು ತಮ್ಮ ಅನುಭವ, ಆದ್ಯತೆ, ವಿಷಯಾಧಾರಿತ, ಬೋಧನೆ ನೀಡಿ, ತಿದ್ದಿ, ಶೈಕ್ಷಣಿಕ ಹಾಗೂ ಶೈಕ್ಷಣಿಕೇತರವಾಗಿ ಸಂಸ್ಕಾರ ತುಂಬುವ ಜೊತೆಗೆ ಪರಿಸರದ ಕಾಳಜಿ, ಶಿಸ್ತು, ಸಂಯಮ ಮೂಡಿಸು ವುದು ಶಿಕ್ಷಕರ ಮತ್ತು ಉಪನ್ಯಾಸಕರ ಮೂಲಧ್ಯೇಯವಾಗಬೇಕು ಎಂದರು.
ಇತ್ತೀಚೆಗೆ ಸರ್ಕಾರಿ ಶಾಲಾ-ಕಾಲೇಜುಗಲ್ಲಿ ಮಕ್ಕಳ ದಾಖಲಾತಿ ಕ್ಷೀಣಿಸುತ್ತಿದ್ದು ಇದಕ್ಕೆ ಮೂಲ ಕಾರಣ ಪಾಲಕರ ಆಂಗ್ಲಭಾಷೆಯ ವ್ಯಾಮೋಹವಾಗಿದೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯವಾಗಿ ದಾಖಲಾತಿ ಕಡಿಮೆಯಾಗುವುದರ ಮೂಲಕ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಶಾಲೆಗಳನ್ನು ಉಳಿಸಬೇಕಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ರಮೇಶ್ ನಾರಿನಿಂಗಜ್ಜಿ, ಶಿಕ್ಷಕರಾದ ಶಿವಮೂರ್ತಿ, ಗಂಗಾಧರಪ್ಪ ಇದ್ದರು.
- ಸುರೇಶ್ ಎನ್.