ಚಿಕ್ಕಮಗಳೂರು, ಮೇ.30:- ಸಮಾಜದಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಬಡವರು ಹಸಿವಿನಿಂದ ಬಳಲದಂತೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸ್ಪಂದಿಸಲಾಗುತ್ತಿದೆ ಎಂದು ಚಿಂ ತನ ಫೌಂಢೆಷನ್ ಅಧ್ಯಕ್ಷ ಪೂವಪ್ಪ ಹೇಳಿದರು.
ಮೂಡಿಗೆರೆ ತಾಲ್ಲೂಕಿನ ಚಿನ್ನಿಗ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಜ್ಜಂಪುರ ಚಿಂತನ ಫೌಂಡೇಷನ್ ವತಿಯಿಂದ ಗೋಣಿಬೀಡು ಸುತ್ತಮುತ್ತಲಿನ ಸುಮಾರು ಆಯ್ದ 100 ವಿದ್ಯಾರ್ಥಿಗಳಿಗೆ ನೋ ಟ್ಪುಸ್ತಕ, ಬ್ಯಾಗ್, ಪರಿಕರಗಳನ್ನು ಉಚಿತವಾಗಿ ಶುಕ್ರವಾರ ವಿತರಿಸಿ ಅವರು ಮಾತನಾಡಿದರು.

ಮೂಡಿಗೆರೆ ಭಾಗದಲ್ಲಿ ಈ ಹಿಂದೆ ವಿಪರೀತ ಮಳೆಯಿಂದ ಹಾನಿಗೀಡಾದ ಕುಟುಂಬಗಳಿಗೆ ಆಹಾರ ಕಿಟ್, ನಿರ್ಗತಿಕರಿಗೆ ಆಶ್ರಯ ಸೇರಿದಂತೆ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಇದೀ ಗ ಬಡವರ್ಗದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಪೂರೈಸಲು ಪರಿಕರಗಳನ್ನು ನೀಡಿ ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.
ಫೌಂಡೇಷನ್ ನಿರ್ದೇಶಕ ಚೆನ್ನಪ್ಪ ಮಾತನಾಡಿ ಸಾರ್ವಜನಿಕ ಕಳಕಳಿ ದೃಷ್ಟಿಯಿಂದ ಜನಪರ ಕರ್ಯ ಕ್ರಮವನ್ನು ಯಾವುದೇ ಫಲಾಫೇಕ್ಷೆಯಿಲ್ಲದೇ ಫೌಂಡೇಷನ್ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ವಸತಿ ವ್ಯವಸ್ಥೆ ಇಲ್ಲದಿರುವ ಬಡಕುಟುಂಬಗಳಿಗೆ ಮನೆ ನಿರ್ಮಿಸುವ ಆಲೋಚನೆಯಿದ್ದು ಸದ್ಯದಲ್ಲೇ ಕಾರ್ಯಕತ ಗೊಳಿಸಲಾಗುವುದು ಎಂದರು.

ದಸಂಸ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ ಮೂಡಿಗೆರೆ ಭಾಗದಲ್ಲಿ ಆರ್ಥಿಕವಾಗಿ ಹಿಂ ದುಳಿದಿರುವ ಮಕ್ಕಳು ಹಾಗೂ ಬಡವರನ್ನು ಗುರುತಿಸಿ ಸಹಾಯಹಸ್ತ ಚಾಚಿರುವ ಚಿಂತನ ಫೌಂಡೇಷನ್ ಸೇವೆ ಅತ್ಯುತ್ತಮವಾಗಿದೆ. ಮುಂದೆ ವಿದ್ಯಾರ್ಥಿಗಳಿಗೆ ಸದೃಢ ಭವಿಷ್ಯ ರೂಪಿಸಲು ನಮ್ಮ ಸಂಘಟನೆ ಕಾರ್ಯ ಕರ್ತರು ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಒಂದರಿಂದ ಹತ್ತನೇ ತರಗತಿಯ ಶಾಲಾ ಮಕ್ಕಳಿಗೆ ನೋಟ್ಪುಸ್ತಕ, ಬ್ಯಾಗ್, ನೀರಿನ ಬಾಟಲ್, ಪೆನ್-ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ಕಾರ್ಬೋಡರ್ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಅಧ್ಯಕ್ಷ ಪೂರ್ಣೆಶ್ ಬೆಟ್ಟದಮನೆ, ಕಾರ್ಯಾಧ್ಯಕ್ಷ ಇಂದ್ರೇಶ್ ಗ್ರಾಮ ಪಂಚಾಯತಿ ಸದಸ್ಯರಾದ ಆನಂದ್, ರೇಣುಕಾ, ಮುಖಂಡರುಗಳಾದ ಚಂದನ್ ಆನೇದಿಬ್ಬ, ಹರೀ ಶ್, ಶಂಕರ್, ಮಂಜುನಾಥ್, ಚಂದ್ರು, ಕೃಷ್ಣ, ಪರರಮೇಶ್ ಉಪಸ್ಥಿತರಿದ್ದರು.
- ಸುರೇಶ್ ಎನ್.