ಚಿಕ್ಕಮಗಳೂರು– ಆಧುನಿಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರ ಎಷ್ಟೇ ಮುನ್ನೆಡೆ ಸಾಧಿಸಿ ದರೂ, ರಕ್ತಕಣಕ್ಕೆ ಪರ್ಯಾಯ ಮಾರ್ಗ ಕಂಡುಹಿಡಿಯಲಾಗಿಲ್ಲ. ಮಾನವನಿಂದ ಮಾತ್ರ ಇನ್ನೊಬ್ಬ ಮಾನ ವನಿಗೆ ರಕ್ತವನ್ನು ದಾನ ಮಾಡಿ ಪ್ರಾಣ ಉಳಿಸಬಹುದು ಎಂದು ವಿವೇಕ ಜಾಗೃತ ಬಳಗದ ಅಧ್ಯಕ್ಷ ರಾಜೀವ್ ಹೇಳಿದರು.
ನಗರದ ಹೌಸಿಂಗ್ ಬೋಡ್ ಸಮೀಪ ತ್ರಿಮೂರ್ತಿ ದೇವಾಲಯದ ಸಭಾಂಗಣದಲ್ಲಿ ಪರಮಪೂಜ್ಯ ಡಾ|| ಎ.ಚಂದ್ರಶೇಖರ್ ಉಡುಪ ಅವರ 75 ನೇ ಜನ್ಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿ ಭಾನುವಾರ ಅವರು ಮಾತನಾಡಿದರು.
ರಕ್ತದಾನವು ಇಬ್ಬೊಬ್ಬರ ಜೀವ ಉಳಿಸುವ ಜೊತೆಗೆ ರಕ್ತದಾನಿಯ ಶರೀರಕ್ಕೆ ಆರೋಗ್ಯ ದೊರಕಲಿದೆ. ಕನಿಷ್ಟ ಮೂರು ತಿಂಗಳಿಗೊಮ್ಮೆ ಆರೋಗ್ಯವಂತ ಮನುಷ್ಯ ರಕ್ತದಾನ ಮಾಡಿದರೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವುದನ್ನು ತಪ್ಪಿಸಿ, ಆರೋಗ್ಯಪೂರ್ಣ ಬದುಕು ಗಳಿಸಬಹುದು ಎಂದರು.
ಪ್ರಸ್ತುತ ಕೆಲವರು ಅಪಘಾತ, ಶಸ್ತçಚಿಕಿತ್ಸೆ ವೇಳೆಯಲ್ಲಿ ಸಮಯಕ್ಕೆ ರಕ್ತ ಸಿಗದಿರುವ ಕಾರಣ ಹಲವಾರು ಮಂದಿ ಸಾವಪ್ಪಿದ್ದಾರೆ. ಆ ನಿಟ್ಟಿನಲ್ಲಿ ಯುವಸಮೂಹ ಪ್ರಾಣದ ಮಹತ್ವವನ್ನು ಅರಿಯಬೇಕು. ಸಾವಿನಂಚಿ ನಲ್ಲಿ ಪ್ರಾಣ ಉಳಿಸಲು ಸ್ವಯಂಪ್ರೇರಿತರಾಗಿ ಮುಂದಾಗಿ ಮಾನವೀಯ ಧರ್ಮ ಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.

ರಕ್ತದಾನದಿಂದ ಹೊಸ ಕೆಂಪು ರಕ್ತಕಣಗಳು ಉತ್ಪತ್ತಿಯಾಗಿ ದೇಹವು ಹೊಸ ರಕ್ತವನ್ನು ಉತ್ಪಾದಿಸು ತ್ತದೆ. ದೇಹದ ಅಂಗಾAಗಗಳಲ್ಲಿ ಅನಾವಶ್ಯಕ ಕಬ್ಬಿನಾಂಶ ಕ್ರೂಢೀಕರಣ ಆಗುವುದನ್ನು ತಪ್ಪಿಸುವ ಜೊತೆಗೆ ಶರೀರದಲ್ಲಿ ಹೆಚ್ಚುವರಿ ಕೊಲೆಸ್ಟಾçಲ್ ಕಡಿಮೆಗೊಳಿಸುತ್ತದೆ ಹಾಗೂ ಕ್ಯಾನ್ಸರ್ನಂಥ ಮಾರಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಉಡುಪಿಯ ಸಾಲಿಗ್ರಾಮದಲ್ಲಿರುವ ಡಾ|| ಎ.ಚಂದ್ರಶೇಖರ್ ಉಡುಪುರವರು ಮಹಿಳಾ ಸಬಲೀ ಕರಣಕ್ಕೆ ವನಿತಾಶ್ರೀ, ಯುವಕರ ಕೌಶಲಾಭಿವೃದ್ದಿಗೆ ಯುವಕಶ್ರೀ, ವ್ಯಕ್ತಿತ್ವ ವಿಕಸನ ನಿರ್ಮಾಣಕ್ಕೆ ಪೂರಕ ಯೋಜನೆ ಹಾಗೂ ರಕ್ತದಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಶಿಬಿರದ ಉಸ್ತುವಾರಿ ಹೆಚ್.ಜಿ.ಶೇಖರ್ ಮಾತನಾಡಿ ಮದ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆ ಮಾಡುವವರು, ಮಹಿಳೆಯರ ಋತುಸ್ರಾವದ ಸಮಯ ಮತ್ತು ಹೆರಿಗೆಯ ನಂತರ 6 ತಿಂಗಳು ರಕ್ತದಾನ ಮಾಡಬಾರದು ಹಾಗೂ ಯಾವುದೇ ವ್ಯಕ್ತಿ ಅನಾರೋಗ್ಯವಿದ್ದಾಗ ರಕ್ತದಾನ ಮುಂದಾಗದಂತೆ ಎಚ್ಚರವಹಿಸ ಬೇಕು ಎಂದು ಸಲಹೆ ಮಾಡಿದರು.

ಇದೇ ವೇಳೆ ರಕ್ತದಾನ ಶಿಬಿರದಲ್ಲಿ 15೦ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಟಿ-ಶರ್ಟ್ಸ್, ಪಾನೀಯ ಹಾಗೂ ಹಣ್ಣನ್ನು ವಿತರಿಸಲಾಯಿತು. ಶಿಬಿರದಲ್ಲಿ ವಿವೇಕ ಜಾಗೃತ ಬಳಗದ ಖಜಾಂಚಿ ಪ್ರವೀಣ್, ಹಿರಿಯರಾದ ನಂಜುಂಡಪ್ಪ, ಸಿದ್ದಯ್ಯ, ಡಾ|| ಅನೀತ್ಕುಮಾರ್ ಉಪಸ್ಥಿತರಿದ್ದರು.
-ಸುರೇಶ್ ಎನ್.