ಚಿಕ್ಕಮಗಳೂರು-ಕನಕಶ್ರೀ ಮಹಿಳಾ ಸಮಾಜ ವತಿಯಿಂದ ಅಹಲ್ಯಾಬಾಯಿ ಜನ್ಮ ದಿನಾಚರಣೆ

ಚಿಕ್ಕಮಗಳೂರು, ಜೂನ್ 03:- ಲೋಕಮಾತೆ ಅಹಲ್ಯಾ ಬಾಯಿ ಹೊಳ್ಕರ್ 300ನೇ ಜನ್ಮದಿನ ಅಂಗವಾಗಿ ನಗರದ ಕನಕ ಭವನದ ಕಚೇರಿಯಲ್ಲಿ ಕನಕಶ್ರೀ ಮಹಿಳಾ ಸಮಾಜ ವತಿಯಿಂದ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಹಲ್ಯಾ ಭಾವಚಿತ್ರಕ್ಕೆ ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಪುಷ್ಪ ನಮನ ಸಲ್ಲಿಸಿದರು.

ಸಮಾಜದ ಅಧ್ಯಕ್ಷೆ ವನಜಾಕ್ಷಿ, ಉಪಾಧ್ಯಕ್ಷೆ ಸರೋಜ, ಕಾರ್ಯದರ್ಶಿ ಶಾರದಾ, ನಿರ್ದೇಶಕರುಗಳಾದ ಜಯಮ್ಮ, ಚಂದ್ರಕಲಾ, ಸರೋಜ, ಗೀತಾ, ಗಾಯತ್ರಿ, ಮಂಜುಳಾ, ಪ್ರೇಮ, ರೇಣುಕಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *