ಚಿಕ್ಕಮಗಳೂರು-ಭಾಜಪ ಜಿಲ್ಲಾಧ್ಯಕ್ಷ ಜನ್ಮದಿನ-ದೇವಾಲಯದಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು, ಮೇ.28:- ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಬುಧವಾರ ಕಾರ್ಯಕರ್ತರು ಬೆಳಿಗ್ಗೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಕ್ಷದ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಎಸ್ಸಿಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಜಿಲ್ಲಾ ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ಸಿ.ಹೆಚ್.ಲೋಕೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್, ಮುಖಂಡರು ಗಳಾದ ಬಿ.ರಾಜಪ್ಪ, ಜಯವರ್ಧನ್, ಅನಿಲ್‌ಕುಮಾರ್, ಪ್ರೇಮ್‌ಕುಮಾರ್, ಹೆಚ್.ಕೆ.ಕೇಶವಮೂರ್ತಿ, ರಾಜೀವ್, ಚೈತ್ರಗೌಡ, ಪ್ರದೀಪ್, ರೇವನಾಥ್, ದುರ್ಗೇಶ್ ಮತ್ತಿತರರಿದ್ದರು.

-ಸುರೇಶ್‌ ಎನ್

Leave a Reply

Your email address will not be published. Required fields are marked *